Advertisement

ಮರ ಬಿದ್ದು ಮನೆಗೆ ಹಾನಿ

01:57 PM Jun 13, 2017 | Team Udayavani |

ಉಪ್ಪಿನಂಗಡಿ: ಇಲ್ಲಿನ ಮಠ – ಹಿರ್ತಡ್ಕದಲ್ಲಿ ಹೆದ್ದಾರಿ ಬದಿಯ ಮರ ತೆರವು ಕಾರ್ಯಾಚರಣೆಯಲ್ಲಿ ಮನೆಯೊಂದಕ್ಕೆ ಮರ ಬಿದ್ದು ಮನೆ ಭಾಗಶಃ ಹಾನಿಗೀಡಾಗಿದೆ.

Advertisement

ಹೆದ್ದಾರಿ ಇಲಾಖೆಯು ಮರ ತೆರವು ಕಾರ್ಯ ನಡೆಸುತ್ತಿದ್ದು, ಯಾವುದೇ ಸುರಕ್ಷತಾ ನಿಯಮ ಪಾಲಿಸದೆ ಗಾಳಿ ಮರವೊಂದನ್ನು ಕಡಿದಾಗ ಅದು ಸಮೀಪದ ಕಾಸಿಂ ಅವರ ಮನೆಗೆ ಬಿದ್ದು ಛಾವಣಿ ಹಾನಿಗೀಡಾಗಿದೆ.

ಈ ಬಗ್ಗೆ ಯಾವುದೇ ಪರಿಹಾರವನ್ನೂ ನೀಡದೆ, ಮನೆಯನ್ನು ದುರಸ್ತಿ ಪಡಿಸಿ, ಬಳಿಕ ಬಿಲ್‌ ತಂದೊಪ್ಪಿಸಿ, ನಾವು ಹಣ ನೀಡುತ್ತೇವೆ ಎಂದು ತಿಳಿಸಿದ್ದಾರೆಯೇ ವಿನಾ ನಮ್ಮ ತಪ್ಪಿನಿಂದಾದ ಘಟನೆಗೆ ಸಂಬಂಧಿಸಿ  ತತ್‌ಕ್ಷಣದ ಪರಿಹಾರ ನೀಡದೆ ಬಡವರಾದ ನಮ್ಮನ್ನು ವಂಚಿಸುತ್ತಿದ್ದಾರೆ ಎಂದು ಕಾಸೀಮ್‌ ಅವರು ಪೊಲೀಸ್‌ ಇಲಾಖೆಗೆ ಹಾಗೂ ಪಂಚಾಯತ್‌ ಆಡಳಿತಕ್ಕೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಛಾವಣಿ ಹಾನಿಗೀಡಾದ್ದರಿಂದ ಮನೆಯೊಳಗೆ ನೀರು ತುಂಬಿಕೊಂಡು ಮನೆಮಂದಿ ಸಂಕಷ್ಟಕ್ಕೆ ಒಳಗಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next