Advertisement
ಸಂಚಾರಿ ಪೊಲೀಸರಿಗೆ ಮೂರು ಪಾಳಿ ವ್ಯವಸ್ಥೆಯಿದ್ದರೂ ಬಹುಪಾಲು ಸಿಬ್ಬಂದಿ ಹಗಲು ಹೊತ್ತಿನಲ್ಲಿ ಸಂಚಾರ ನಿರ್ವಹಣೆಗೆ ನಿಯೋಜನೆಗೊಳ್ಳುತ್ತಾರೆ. ಜನ, ವಾಹನ ದಟ್ಟಣೆಯ ಪ್ರದೇಶದಲ್ಲಿ ಆರೇಳು ಗಂಟೆ ಕೆಲಸ ಮಾಡುವ ಈ ಸರ್ಕಾರಿ ನೌಕರರಿಗೆ ಮೂಲ ಸೌಕರ್ಯ ಮತ್ತು ಆರೋಗ್ಯ ಭದ್ರತೆ ಎಂಬುದು ಮರೀಚಿಕೆ.
Related Articles
ಆರೋಗ್ಯ ಸಮಸ್ಯೆ: ಸಂಚಾರ ಪೊಲೀಸರಿಗೆ ಮಂಡಿ ನೋವು ಬರುವುದು ಸಾಮಾನ್ಯ. ನಿರಂತರ ಐದಾರು ಗಂಟೆಗಳ ಕಾಲ
ನಿಂತರೇ ಸಾಕು ಕಾಲುಗಳು ಉದಿಕೊಳ್ಳುತ್ತವೆ. ಕೆಲಸದ ಮಧ್ಯೆ ಕುಳಿತುಕೊಳ್ಳಬಹುದಾದರೂ ಸಿಸಿಟಿವಿಯಲ್ಲಿ ಸೆರೆಯಾಗುತ್ತದೆ ಎಂಬ ಭಯದಿಂದ ನಿಂತಿಕೊಂಡೆ ಕೆಲಸ ಮಾಡುತ್ತಾರೆ.
Advertisement
ಪೊಲೀಸ್ ಇಲಾಖೆ ಸೇರಿದಂತೆ ನಾನಾ ಸಂಘ, ಸಂಸ್ಥೆಗಳು ಸಹ ಉಚಿತವಾಗಿ ಮಾಸ್ಕ್ ನೀಡುತ್ತವೆ. ಆದರೂ ಕೆಲವೊಮ್ಮೆ ಅತಿಯಾದ ಧೂಳು, ಹೊಗೆ ನೇರವಾಗಿ ಶ್ವಾಸಕೋಶಕ್ಕೆ ಸೇರುವುದರಿಂದ ಕೆಮ್ಮು, ಅಸ್ತಮಾ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ವಾಹನಗಳ ಕರ್ಕಷ ಹಾರ್ನ್ ಶಬ್ದ ನಿತ್ಯ ಕೇಳಿ ಕಿವಿಗೆ ಹಾನಿಯಾಗುವುದು ಮಾತ್ರವಲ್ಲದೆ ಕಿವುಡುತನ ಕಾಣಿಸಿಕೊಳ್ಳುವ ಆತಂಕ ಮೂಡುತ್ತದೆ. ರಸ್ತೆ ದುರಸ್ತಿ, ಅಭಿವೃದ್ಧಿ ಕಾಮಗಾರಿ, ರಸ್ತೆ ಗುಂಡಿ, ಕಟ್ಟಡ ನಿರ್ಮಾಣ ಸಾಮಗ್ರಿ ರಸ್ತೆಬದಿ ಸುರಿಯುವುದು ಇತರೆ ಕಾರಣಗಳಿಂದ ಧೂಳಿನ ವಾತಾವರಣದಲ್ಲಿ ಕಾರ್ಯ ನಿರ್ವಹಿಸುವುದರಿಂದ ಕಣ್ಣಿನ ಸಮಸ್ಯೆ, ಉಸಿರಾಟದ ತೊಂದರೆಯೂ ಕಾಣಿಸಿಕೊಳ್ಳುತ್ತದೆ.
ಇಲಾಖೆಯು “ಆರೋಗ್ಯ ಭಾಗ್ಯ’ ಯೋಜನೆ ಜಾರಿಗೊಳಿಸಿದ್ದು, ವೇತನದಲ್ಲಿ ಇಂತಿಷ್ಟು ಹಣ ಕಡಿತಮಾಡಿಕೊಳ್ಳಲಾಗುತ್ತದೆ. ಆದರೆ, ದೊಡ್ಡ ಕಾಯಿಲೆ ಹೊರತುಪಡಿಸಿದರೆ, ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆಗೆ ಯಾವುದೇ ಪ್ರಯೋಜನವಾಗಿಲ್ಲ. ತಪಾಸಣೆ,ಔಷಧಿಗೆ ಪ್ರತ್ಯೇಕ ಪಾವತಿ ಪೊಲೀಸರಿಗೆ ತಲೆನೋವಾಗಿದೆ. (ಪೊಲೀಸರೇ ತಮ್ಮ ಸಮಸ್ಯೆ, ಸವಾಲುಗಳನ್ನು ಹೇಳಿಕೊಂಡಿದ್ದು, ಅವರ ಮನವಿಯಂತೆ ಹೆಸರನ್ನು ಗೌಪ್ಯವಾಗಿಡಲಾಗಿದೆ)
ಆಯೋಗದ ಸೂಚನೆಯೇನು? ಮಿತಿ ಮೀರಿದ ವಾಯುಮಾಲಿನ್ಯ, ಶಬ್ದ ಮಾಲಿನ್ಯದ ವಾತಾವರಣದಲ್ಲೇ ನಿರಂತರವಾಗಿ ಕರ್ತವ್ಯ ಸಲ್ಲಿಸುವ ಸಂಚಾರ ಪೊಲೀಸರು ಎದುರಿಸುವ ಆರೋಗ್ಯ ಸಮಸ್ಯೆ, ಜೀವಿತಾವಧಿ ಪ್ರಮಾಣ ಕುಗ್ಗುವುದು ಸೇರಿದಂತೆ ಇತರೆ ಆತಂಕಕಾರಿ ಅಂಶಗಳ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತರವಾಗಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ದೂರು ದಾಖಲಿಸಿಕೊಂಡಿದೆ. ಕೇಂದ್ರ ಗೃಹ ಸಚಿವಾಲಯ ಹಾಗೂ ಎಲ್ಲ ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ನೋಟಿಸ್ ನೀಡಿ ಸಂಚಾರ ಪೊಲೀಸರ ಸ್ಥಿತಿಗತಿ ಹಾಗೂ ಅವರಿಗೆ ನೀಡಿರುವ ಆರೋಗ್ಯ ಸೇವೆಗಳ ಬಗ್ಗೆ ಎಂಟು ವಾರಗಳಲ್ಲಿ ವರದಿ ನೀಡುವಂತೆ ಸೂಚಿಸಿದೆ.
ನೀವೂ ಭಾಗವಹಿಸಿಸಂಚಾರಿ ಪೊಲೀಸರು ಹೈವೇ, ಷಷ್ಠಪಥ, ಚತುಷ್ಪಧ ರಸ್ತೆಗಳಲ್ಲಿ ನಿಂತು ಸಾರ್ವಜನಿಕರಿಗೆ ಮಾರ್ಗ ತೋರುತ್ತಾ
ಬಿಸಿಲು, ಮಳೆ ಎನ್ನದೆ ಅನುಭವಿಸುವ ಯಾತನೆ ಬಗ್ಗೆ ಸಂಚಾರ ಪೊಲೀಸರು, ಅಥವಾ ನಾಗರಿಕರು ನಮಗೆ ವಾಟ್ಸಪ್ ಮೂಲಕ ತಿಳಿಸಬಹುದು 8861196369 ಮೋಹನ್ ಭದ್ರಾವತಿ