Advertisement
1912 ಶಾಲೆ ಆರಂಭಶಾಲೆ ಪ್ರಾರಂಭದಲ್ಲಿ ಮರಳು-ಮಣ್ಣಿನ ಪಾಠ
Related Articles
ಉಡುಪಿ ಶ್ರೀ ಕೃಷ್ಣ ಮಠದಿಂದ ಚಿಣ್ಣರ ಸಂತರ್ಪಣೆಯ ಶ್ರೀ ಕೃಷ್ಣ ಪ್ರಸಾದದ ರೂಪದಲ್ಲಿ ಅಕ್ಕಿಯು ಪ್ರತೀ ತಿಂಗಳು ಈ ಶಾಲೆಗೆ ಬರುತ್ತಿದ್ದು, ಮಕ್ಕಳ ಮಧ್ಯಾಹ್ನದ ಅನ್ನದಾಸೋಹವಾಗುತ್ತಿದೆ. ಸಮವಸ್ತ್ರವೂ ಮಠದಿಂದಲೇ ನೀಡಲಾಗುತ್ತಿದೆ. ಕೃಷ್ಣಜನ್ಮಾಷ್ಟಮಿಯ ಸಂದರ್ಭವೂ ಮುದ್ದುಕೃಷ್ಣ ವೇಷ ಸ್ಪರ್ಧೆ ಆಯೋಜಿಸಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನೂ ಶ್ರೀ ಮಠವೇ ನೀಡುತ್ತಿದೆ.
Advertisement
ಮೂಲಭೂತ ಸವಲತ್ತುಗಳುಅಕ್ಷರ ದಾಸೋಹ ಕಟ್ಟಡ, ಸುಸಜ್ಜಿತ ಶೌಚಾಲಯ, ಕುಡಿಯುವ ನೀರಿನ ಸೌಲಭ್ಯ ಹೊಂದಿದ್ದು, ಸ್ವಂತ ಸ್ಥಳವನ್ನು ಹೊಂದಿಲ್ಲ. ದೇಗುಲದ ಗೋಪುರದಲ್ಲಿ ಶಾಲಾ ತರಗತಿ ಕೊಠಡಿಗಳನ್ನು ಹೊಂದಿದೆ. ಶಾಲೆಯ ವಿವಿಧ ಸಾಧಕರು
ವಿಜಯಾ ಬ್ಯಾಂಕ್ನ ಚೇರ್ಮನ್ ವೈ.ಎಸ್. ಹೆಗ್ಡೆ, ಇಂಡಿಯನ್ ಆರ್ಮಿಯ ಬಸಪ್ಪ ಎನ್. ಹದಾರಿ, ಜಿ.ಪಂ. ಮಾಜಿ ಅಧ್ಯಕ್ಷ ಕಟಪಾಡಿ ಶಂಕರಪೂಜಾರಿ ಮೊದಲಾದವರು ಇದೇ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತವರು.
ಮಾಜಿ ಸಚಿವ ದಿ| ವಸಂತ ವಿ.ಸಾಲ್ಯಾನ್ ಹಾಗೂ ರಾಜ್ಯ ಸಚೇತಕರಾಗಿದ್ದ ದಿ|ಭಾಸ್ಕರ ಶೆಟ್ಟಿ ಸಹಿತ ಅನೇಕ ಗಣ್ಯರು ಈ ಶಾಲೆಯೊಂದಿಗೆ ನಿಕಟ ಬಾಂಧವ್ಯ ಇರಿಸಿಕೊಂಡಿದ್ದರು. 2015ರಲ್ಲಿ ಶತಮಾನೋತ್ಸವ ಸಂಭ್ರಮದ ಸಮಾರೋಪ ಕಂಡ ಈ ಶಾಲೆಯು ಹಲವು ಸಾಧಕರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿರುತ್ತದೆ ಎಂದು ಆಡಳಿತ ಮಂಡಳಿ ಮಾಹಿತಿ ನೀಡಿದೆ.
-ಬಸಪ್ಪ ಎನ್. ಹದಾರಿ, ಸೈನಿಕ , ಹಳೆ ವಿದ್ಯಾರ್ಥಿ ಶಾಲಾ ಆಡಳಿತ ಮಂಡಳಿಯ ದಕ್ಷ ಸೇವೆಯಿಂದ ಈ ಶಾಲೆ ಬೆಳೆದು ನಿಂತಿದೆ.ಐವರು ಗೌರವ ಶಿಕ್ಷಕರ ಸಹಿತ ವಿದ್ಯಾರ್ಥಿಗಳಿಗೆ ಉತ್ತಮ ಸವಲತ್ತುಗಳನ್ನು ಆಡಳಿತ ಮಂಡಳಿಯು ಸಮರ್ಥವಾಗಿ ನಿಭಾಯಿಸುತ್ತಿದೆ. 1ರಿಂದ 7ನೇ ತರಗತಿ ವರೆಗೆ ಶೇ.90ರಷ್ಟು ಹೊರ ಜಿಲ್ಲಾ ವಲಸೆ ಕೂಲಿ ಕಾರ್ಮಿಕರ ಮಕ್ಕಳೇ ನಮ್ಮ ವಿದ್ಯಾರ್ಥಿಗಳಾಗಿದ್ದಾರೆ.
-ಕೆ.ಸರೋಜಿನೀ ದೇವಿ,ಮುಖ್ಯೋಪಾಧ್ಯಾಯಿನಿ. – ವಿಜಯ ಆಚಾರ್ಯ,ಉಚ್ಚಿಲ