Advertisement

ಟೋಲ್‌ ಮುಕ್ತಿಗೆ ಮುಷ್ಕರ ಆರಂಭ

10:57 AM Jul 21, 2018 | Team Udayavani |

ಬೆಂಗಳೂರು: ಟೋಲ್‌ನಿಂದ ಮುಕ್ತಿ, ಡೀಸೆಲ್‌ ದರ ಇಳಿಕೆ ಮತ್ತಿತರ ಬೇಡಿಕೆ ಈಡೇರಿಕೆಗೆ ಅಖೀಲ ಭಾರತ ಮೋಟಾರು ಟ್ರಾನ್ಸ್‌ಪೊರ್ಟ್‌ ಕಾಂಗ್ರೆಸ್‌ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆಯಿಂದ ಸರಕು, ಸಾಗಣೆ ವಾಹನಗಳ ಸಂಚಾರದಲ್ಲಿ ತುಸು ಏರುಪೇರು ಉಂಟಾಗಿದೆ.

Advertisement

ಇನ್ನೊಂದೆಡೆ ಪ್ರವಾಸಿ ವಾಹನ, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್‌ ಮಾಲಿಕರು ಹೋರಾಟಕ್ಕೆ ನೈತಿಕ ಬೆಂಬಲ ನೀಡಿದ್ದರೂ ವಾಹನ ಸಂಚಾರ ಸ್ಥಗಿತಗೊಳಿಸಿಲ್ಲ. ರಾಜ್ಯ ಲಾರಿ ಮಾಲಿಕರ ಸಂಘ, ರಾಜ್ಯ ಪೆಟ್ರೋಲಿಯಂ ವರ್ತಕರ ಮಹಾ ಮಂಡಳವು ಹೋರಾಟಕ್ಕೆ ಬೆಂಬಲ ನೀಡದ ಕಾರಣ ಸರಕು ಸಾಗಣೆಯಲ್ಲಿ ಹೆಚ್ಚಿನ ವ್ಯತ್ಯಯ ಉಂಟಾಗಿಲ್ಲ. ಹಾಲು, ದಿನಪತ್ರಿಕೆ, ತರಕಾರಿ, ಔಷಧ ಇತರೆ ಅಗತ್ಯ ಸರಕು, ಸೇವೆಗಳ ಪೂರೈಕೆಗೆ ಮುಷ್ಕರದಿಂದ ವಿನಾಯ್ತಿ ನೀಡಲಾಗಿದೆ. ರಾಷ್ಟ್ರವ್ಯಾಪಿ ಮುಷ್ಕರದ ಹಿನ್ನೆಲೆಯಲ್ಲಿ ರಾಜ್ಯದ ಸರಕು ಸಾಗಣೆ ದಾರರು ಪುರಭವನದ ಎದುರು ಶುಕ್ರವಾರ ಪ್ರತಿಭ ಟಿಸಿದರು. ಲಾರಿ, ಮ್ಯಾಕ್ಸಿಕ್ಯಾಬ್‌, ಟ್ಯಾಕ್ಸಿ ಮಾಲಿಕರು ಕೂಡ ಮುಷ್ಕರ ಬೆಂಬಲಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಈ ವೇಳೆ ಮಾತನಾಡಿದ ಅಖೀಲ ಭಾರತ ಮೋಟಾರು ಟ್ರಾನ್ಸ್‌ಪೊರ್ಟ್‌ ಕಾಂಗ್ರೆಸ್‌ನ ದಕ್ಷಿಣ ವಲಯದ ಪ್ರಧಾನ ಕಾರ್ಯದರ್ಶಿ ಜಿ.ಆರ್‌.ಷಣ್ಮುಖಪ್ಪ, ಅವಧಿ ಮುಗಿದಿದ್ದರೂ ಟೋಲ್‌ಗೇಟ್‌ಗಳಲ್ಲಿ ಸುಂಕ ಸಂಗ್ರಹಿಸಲಾಗುತ್ತಿದೆ. ರಾಜ್ಯದಲ್ಲಿ 29 ಟೋಲ್‌ಗೇಟ್‌ಗಳಿದ್ದು, 23 ಟೋಲ್‌ಗ‌ಳಲ್ಲಿ ಅವಧಿ ಪೂರ್ಣಗೊಂಡಿದ್ದರೂ ಗುತ್ತಿಗೆ ಸಂಸ್ಥೆಗಳಿಗೆ ಟೋಲ್‌ ಸಂಗ್ರಹಕ್ಕೆ ಅವಕಾಶ ನೀಡಲಾಗಿದೆ. ಇದರಿಂದ ಲಾರಿ ಮಾಲಿಕರು, ಸರಕು ಸಾಗಣೆದಾರರು ಹೊರೆ ಅನುಭವಿಸುವಂತಾಗಿದೆ ಎಂದರು.

ಕಾಲಾವಕಾಶ ಕೋರಲಾಗಿದೆ: ಸರಕು ಸಾಗಣೆದಾರರ ಹೋರಾಟಕ್ಕೆ ಪ್ರವಾಸಿ ವಾಹನಗಳ ಮಾಲಿಕರ ವತಿಯಿಂದ ನೈತಿಕ ಬೆಂಬಲ ನೀಡಲಾಗಿದೆ. ವಾಹನಗಳನ್ನು ಸ್ಥಗಿತಗೊಳಿಸಿ ಹೋ ರಾಟ ತೀವ್ರಗೊಳಿಸಲು ಕೆಲ ದಿನಗಳ ಕಾಲಾವಕಾಶ ಕೋರಲಾಗಿದೆ. ಬೇಡಿಕೆಗೆ ಸ್ಪಂದಿಸದಿದ್ದರೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದುಎಂದು ಬೆಂಗಳೂರು ಪ್ರವಾಸಿ ವಾಹನಗಳ ಮಾಲೀಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಹೇಳಿದರು.

ಬೆಂಬಲವಿಲ್ಲ; ಈ ಹಿಂದೆ ಇದೇ ಬೇಡಿಕೆಗಳ ಈಡೇರಿಕೆಗಾಗಿ ಸಂಘ ಮುಷ್ಕರಕ್ಕೆ ಕರೆ ನೀಡಿದಾಗ ಈ ಸಂಘಟನೆಗಳು ಬೆಂಬಲ ನೀಡಿರಲಿಲ್ಲ. ಅಲ್ಲದೇ ಪ್ರತಿಷ್ಠಿತ ಸರಕು ಸಾಗಣೆದಾರರ ಅನುಕೂಲಕ್ಕಾಗಿ ಹೋರಾಟ ಆರಂಭಿಸಿದಂತಿದ್ದು, ಇದರಿಂದ ಸಣ್ಣ ಪುಟ್ಟ ಲಾರಿ ಮಾಲಿಕರಿಗೆ ಹೆಚ್ಚಿನ ಪ್ರಯೋಜನವಾಗದು. ಹಾಗಾಗಿ ಸಂಘದ ವ್ಯಾಪ್ತಿಯ ವಾಹನಗಳು ಎಂದಿ ನಂತೆ ಸಂಚರಿಸಲಿವೆ ಎಂದು ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಬಿ.ಚೆನ್ನಾರೆಡ್ಡಿ ತಿಳಿಸಿದರು.

Advertisement

ಪೆಟ್ರೋಲ್‌, ಡೀಸೆಲ್‌ ಪೂರೈಕೆ ಇರಲಿದೆ ಮುಷ್ಕರಕ್ಕೆ ಪೆಟ್ರೋಲಿಯಂ ವರ್ತಕರ ಬೆಂಬಲವನ್ನು ಯಾವ ಸಂಘಟನೆಯೂ ಕೋರಿಲ್ಲ. ಜನರಿಗೆ ಅಗತ್ಯವಾದ ವಸ್ತುವಾಗಿ ರು ವುದರಿಂದ ದಿಢೀರ್‌ ಸ್ಥಗಿತಗೊಳಿಸಲು ಸಾಧ್ಯ ವಿಲ್ಲ. ತೈಲ ಕಂಪೆನಿಗಳು ಹೆಚ್ಚಿನ ಪ್ರಮಾಣದಲ್ಲಿ ತೈಲ ದಾಸ್ತಾನು ಮಾಡಿಕೊ ಳ್ಳುವಂತೆ ಸೂಚಿ ಸಿವೆ. ಎಂದಿನಂತೆ ಪೆಟ್ರೋಲ್‌, ಡೀಸೆಲ್‌ ಪೂರೈಕೆ ಇರಲಿದೆ ಎಂದು ರಾಜ್ಯ ಪೆಟ್ರೋ ಲಿಯಂ ವರ್ತಕರ ಮಹಾಮಂಡಳದ ಅಧ್ಯಕ್ಷ ಎಚ್‌.ಎಸ್‌.ಮಂಜಪ್ಪ ಹೇಳಿದರು.

ಆಹಾರಧಾನ್ಯ ಪೂರೈಕೆ ಸಹಜ: ಬೆಂಗಳೂರಿನ ಎಪಿಎಂಸಿ ಮಾರುಕಟ್ಟೆಗೆ ನಿತ್ಯ 700ಕ್ಕೂ ಹೆಚ್ಚು ಲಾರಿಗಳಲ್ಲಿ ಆಹಾರಧಾನ್ಯ ಪೂರೈಕೆಯಾಗುತ್ತದೆ. ಅದರಂತೆ ಶುಕ್ರವಾರವೂ ಪೂರೈಕೆ ಸಹಜ ಸ್ಥಿತಿಯಲ್ಲಿತ್ತು. ಜತೆಗೆ ಮಾರುಕಟ್ಟೆಯಿಂದ ಇತರೆಡೆಗೆ ಆಹಾರ ಧಾನ್ಯ ಸಾಗಣೆಯಾಗುತ್ತಿದೆ. ಮುಷ್ಕರ ತೀವ್ರವಾದರೆ ಸೋಮವಾರದಿಂದ ಆಹಾರ ಧಾನ್ಯ ಪೂರೈಕೆಯಲ್ಲಿ ವ್ಯತ್ಯಯವಾಗಬಹುದು ಎಂದು ಬೆಂಗಳೂರು ಬೇಳೆಕಾಳು ವರ್ತಕರ ಸಂಘದ ಅಧ್ಯಕ್ಷ ರಮೇಶ್‌ಚಂದ್ರ ಲಹೋಟಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next