Advertisement

Dandeli: ಅಸ್ಪಷ್ಟ ಮಾತನಾಡುವ ವೃದ್ಧೆಯನ್ನು ಬಿಟ್ಟು ಹೋದ ದುರುಳರು

08:56 PM Dec 19, 2023 | Team Udayavani |

ದಾಂಡೇಲಿ : ಅವರು ಸರಿ ಸುಮಾರು 70 ವರ್ಷ ದಾಟಿದ ವೃದ್ಧೆ. ಅಸ್ಪಷ್ಟವಾಗಿ ಮಾತನಾಡುವುದರಿಂದ ಅವರ ಹೆಸರು, ಊರು ಯಾವುದೆಂದು ಇನ್ನೂ ನಿಖರವಾಗಿ ಹೇಳಲಾಗುತ್ತಿಲ್ಲ. ಈ ವೃದ್ಧೆ ಯಾರೆಂದು ಗೊತ್ತಿಲ್ಲದೇ ಇದ್ದರೂ ಸ್ಥಳೀಯ ಜನತೆ ಪ್ರತಿ ನಿತ್ಯ ಊಟೋಪಚಾರವನ್ನು ನೀಡುವ ಮೂಲಕ ಆರೈಕೆ ಮಾಡಿ ಮಾನವೀಯತೆಯನ್ನು ಮೆರೆಯುತ್ತಿದ್ದಾರೆ.

Advertisement

ಅಂದ ಹಾಗೆ ಇದು ದಾಂಡೇಲಿ ನಗರದ ಹಳಿಯಾಳ ರಸ್ತೆಯಲ್ಲಿರುವ 3 ನಂಬರ್ ಗೇಟ್ ಪ್ರದೇಶ ವ್ಯಾಪ್ತಿಯಲ್ಲಿರುವ ಶ್ರೀ.ಮಾರುತಿ ಮಂದಿರದ ಆವರಣದಲ್ಲಿ ವೃದ್ಧೆಯೋರ್ವರು ತಮ್ಮ ಕುಟುಂಬಸ್ಥರಿಗಾಗಿ ಕಳೆದ 15 ದಿನಗಳಿಂದ ನಿತ್ಯ ರೋಧಿಸುತ್ತಿರುವ ಘಟನೆಯಿದು.

ಮರಾಠಿ ಮತ್ತು ಕೊಂಕಣಿ ಮಾತನಾಡುವ ಈ ವೃದ್ಧೆ ಲೋಂಡಾ ವ್ಯಾಪ್ತಿಯ ನಿವಾಸಿ ಎನ್ನುತ್ತಿದ್ದಾರೆ ಸ್ಥಳೀಯರು. ಈ ಅಜ್ಜಿ ಹೇಳಿದ ಪ್ರಕಾರ ಮಗ ರಾಮದಾಸ ಎಂಬಾತನು ಅಜ್ಜಿಯನ್ನು ಇಲ್ಲಿ ಬಿಟ್ಟು ಹೋಗಿದ್ದಾನೆ ಎಂದು ಅಜ್ಜಿ ಹೇಳಿರುವುದನ್ನು ಇಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.

ವಯೋವೃದ್ಧೆಯಾಗಿರುವ ಹಿನ್ನೆಲೆಯಲ್ಲಿ ಆರೋಗ್ಯದಲ್ಲಿಯೂ ಕೂಡ ಏರುಪೇರಾಗಿದೆ. ಈ ನಿಟ್ಟಿನಲ್ಲಿ ಈ ಕೂಡಲೇ ಈ ವೃದ್ಧೆಯ ಕುಟುಂಬಸ್ಥರು ಎಲ್ಲಿದ್ದರೂ ಕೂಡ ಬಂದು ವೃದ್ಧೆಯನ್ನು ಕರೆದುಕೊಂಡು ಹೋಗುವಂತೆ ಸ್ಥಳೀಯರು ಮಾಧ್ಯಮದ ಮೂಲಕ ಮನವಿಯನ್ನು ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next