Advertisement

Bangalore: ಶಿಕ್ಷಕಿ ಜೊತೆ ಮಾತನಾಡುತ್ತಿದ್ದ ವಿದ್ಯಾರ್ಥಿಗೆ ಶಿಕ್ಷಕಿ ಸಹೋದರ ಹಲ್ಲೆ  

10:41 AM Oct 07, 2023 | Team Udayavani |

ಬೆಂಗಳೂರು: ಶಿಕ್ಷಕಿಯ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ಹೋಗಿದ್ದ ವಿದ್ಯಾರ್ಥಿಯೊಬ್ಬನ ಮೇಲೆ ಹಲ್ಲೆ ಮಾಡಿರುವ ಶಿಕ್ಷಕಿಯ ಸಹೋದರನ ವಿರುದ್ಧ ಮಹಾಲಕ್ಷ್ಮೀ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಅ.1ರಂದು ಶಿಕ್ಷಕಿಯ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಯೊಬ್ಬ ಶಿಕ್ಷಕಿಯನ್ನು ಪಾರ್ಕ್‌ಗೆ ಕರೆದು ಕೇಕ್‌ ಕತ್ತರಿಸಿ ಶುಭಾಶಯ ಕೋರಿದ್ದ. ನಂತರ ಇಬ್ಬರು ಪರಸ್ಪರ ಮಾತನಾಡುತ್ತಿದ್ದರು. ಇದನ್ನು ಗಮನಿಸಿದ ಶಿಕ್ಷಕಿಯ ಸಹೋದರ ತಪ್ಪಾಗಿ ಅರ್ಥೈಸಿಕೊಂಡು ಇಬ್ಬರನ್ನೂ ತರಾಟೆಗೆ ತೆಗೆದು ವಿದ್ಯಾರ್ಥಿಗೆ ಹಲ್ಲೆ ನಡೆಸಿದ್ದ. ಇತ್ತ ವಿದ್ಯಾರ್ಥಿ ಹಲ್ಲೆ ನಡೆಸಿರುವ ವಿಚಾರವನ್ನು ಪಾಲಕರ ಬಳಿ ಹೇಳಿಕೊಂಡಿದ್ದ. ಪಾಲಕರು ಈ ಬಗ್ಗೆ ಮಹಾಲಕ್ಷ್ಮೀ ಲೇಔಟ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶಿಕ್ಷಕಿಯ ಸಹೋದರನ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next