Advertisement

ಪ್ರತಿಭಾವಂತರಿಗೆ ಅವಕಾಶ ಸಿಗಬೇಕು –ಶಿವಣ್ಣ

12:44 PM Oct 28, 2021 | Team Udayavani |

ಬೆಂಗಳೂರು: ಪ್ರತಿಭಾವಂತರಿಗೆ ಅವಕಾಶ ಸಿಗಬೇಕು ಆಗ ಮಾತ್ರ ಅವರ ಪ್ರತಿಭೆ ಸಮಾಜಕ್ಕೆ ಪರಿಚಯವಾಗುತ್ತದೆ ಎಂದು ಹ್ಯಾಟ್ರಿಕ್‌ ಹೀರೊ ಶಿವರಾಜ್‌ ಕುಮಾರ್‌ ಹೇಳಿದರು. ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಯುವ ಕಲಾವಿದರಾದ ರಿಷಿಕೇಶ್‌ ಮತ್ತು ಮಾನಸ ಅವರ ವರ್ಣ ಚಿತ್ರಗಳ ಕಲಾ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

Advertisement

ಕಲೆಗೆ ಮತ್ತು ಹೃದಯಕ್ಕೆ ಹತ್ತಿರ ಸಂಬಂಧ ಇರುತ್ತದೆ, ಯುವ ಕಲಾವಿದರು ರಚಿಸಿದ ಚಿತ್ರಗಳು ಸಮಾಜದ ಮೇಲೆ ಬೆಳಕು ಚೆಲ್ಲುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಯುವ ಪ್ರತಿಭೆಗಳಾದ ರಿಷಿಕೇಶ್‌ ಮತ್ತು ಮಾನಸ ತಮ್ಮ ಸಮಯವನ್ನು ಸಮಾಜದ ಒಳಿತಿಗಾಗಿ ಚಿಕ್ಕ ವಯಸ್ಸಿನಲ್ಲಿ ಶ್ರಮ ವಹಿಸುತ್ತಿದ್ದಾರೆ. ಇದು ಖುಷಿ ಪಡುವ ಸಂಗತಿಯಾಗಿದೆ ಎಂದು ಹೇಳಿದರು.

ಇದನ್ನೂ ಓದಿ;- ಶಾಸಕರ ಭವನ ನಿರ್ಮಾಣಕ್ಕೆ ಗುತ್ತಿಗೆ ವಿಘ್ನ!

ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಇತಿಹಾಸ ಬೆಳದಂತೆ ವರ್ಣ ಚಿತ್ರಕಲೆ ಬೆಳೆಯುತ್ತಾ ಬಂತು. ಕವಿರತ್ನ ಕಾಳಿದಾಸ ತನ್ನ ಸಾಹಿತ್ಯದಲ್ಲಿ ಚಿತ್ರಕಲೆ ಬಗ್ಗೆ ವರ್ಣನೆ ಮಾಡಿದ್ದಾನೆ. ವರ್ಣ ಚಿತ್ರಕಲೆಯಲ್ಲಿ ಯುವ ಕಲಾವಿದರಾದ ರಿಷಿಕೇಶ್‌ ಮತ್ತು ಮಾನಸ ಅವರ ವರ್ಣ ಚಿತ್ರ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡಲಿ ಎಂದರು. ಜೈನ್‌ ವಿಶ್ವವಿದ್ಯಾಲಯದ ಕುಲಪತಿ ಡಾ. ಚೆನ್‌ರಾಜ್‌ ಜೈನ್‌ ಇತರರು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next