Advertisement

ಸಿಬಿಐ, ಎನ್‌ಐಎ ತನಿಖೆ: ಮಹಾ, ಕೇಂದ್ರಕ್ಕೆ ನೋಟಿಸ್‌

08:15 AM Jun 12, 2020 | mahesh |

ಹೊಸದಿಲ್ಲಿ : ಮಹಾರಾಷ್ಟ್ರದ ಪಾಲ್ಫರ್‌ನಲ್ಲಿ ಇಬ್ಬರು ಸಾಧುಗಳು ಸೇರಿ ಮೂವರ ಹತ್ಯೆ ಪ್ರಕರಣದ ಬಗ್ಗೆ ಮಹಾರಾಷ್ಟ್ರ ಮತ್ತು ಕೇಂದ್ರ ಸರಕಾರಕ್ಕೆ ಸುಪ್ರೀಂಕೋರ್ಟ್‌ ಗುರುವಾರ ನೋಟಿಸ್‌ ನೀಡಿದೆ. ಸಿಬಿಐ ಮತ್ತು ಎನ್‌ಐಎನಿಂದ ಈ ಬಗ್ಗೆ ತನಿಖೆ ನಡೆಸಬೇಕು ಎಂದು ಹೊಸತಾಗಿ ಸಲ್ಲಿಸಲಾಗಿರುವ ಎರಡು ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ.ಅಶೋಕ್‌ ಭೂಷಣ್‌ ನೇತೃತ್ವದ ನ್ಯಾಯಪೀಠ ಈ ಕ್ರಮ ಕೈಗೊಂಡಿದೆ. “ಶ್ರೀ ಪಂಚ ದಶ್‌ಬಾನ್‌ ಜುನಾ ಅಖಾರಾ’ ಎಂಬ ಸಂಘಟನೆ ಮತ್ತು ಹತ್ಯೆಗೀಡಾದ ಸಾಧುಗಳ ಬಂಧುವೊಬ್ಬರು ಮಹಾರಾಷ್ಟ್ರ ಪೊಲೀಸ್‌ ಇಲಾಖೆ ನಡೆಸುತ್ತಿರುವ ತನಿಖೆ ಪೂರ್ವಗ್ರಹ ಪೀಡಿತವಾಗಿದೆ. ಹೀಗಾಗಿ, ಪ್ರಕರಣದ ತನಿಖೆಯ ಹೊಣೆಯನ್ನು ಸಿಬಿಐಗೆ ವಹಿಸಬೇಕು ಎಂದು ಅರಿಕೆ ಮಾಡಿಕೊಂಡಿದ್ದಾರೆ.

Advertisement

ಘನಶ್ಯಾಮ್‌ ಉಪಾಧ್ಯಾಯ ಎಂಬವರು ಘಟನೆಯನ್ನು ಎನ್‌ಐಎ ಮೂಲಕ ತನಿಖೆ ನಡೆಸಿ ನ್ಯಾಯದೊರಕಿಸಿ ಕೊಡಬೇಕೆಂದು ಪ್ರಾರ್ಥಿಸಿ ದ್ದರು. ಮಹಾರಾಷ್ಟ್ರ ಮತ್ತು ಕೇಂದ್ರ ಸರಕಾರಕ್ಕೆ ನೋಟಿಸ್‌ ನೀಡಿದ ಬಳಿಕ ಪ್ರಕರಣದ ವಿಚಾರಣೆಯನ್ನು ಮುಂದಿನ ತಿಂಗಳ ಎರಡನೇ ವಾರಕ್ಕೆ ಮುಂದೂಡಲಾಗಿದೆ. ಪಾಲ^ರ್‌ನಲ್ಲಿ ನಡೆದ ಇಬ್ಬರು ಸಾಧು, ಒಬ್ಬ ಚಾಲಕನ ಹತ್ಯೆಯ ಕುರಿತಾದ ತನಿಖೆಯನ್ನು ಸರಕಾರ, ಸಿಐಡಿಗೆ ವಹಿಸಿತ್ತು. ಆದರೆ, ಸಾಧುಗಳ ಸಂಬಂಧಿಕರು ತಾವು ರಾಜ್ಯ ಸರಕಾರದ ತನಿಖೆಯನ್ನು ನಂಬುವುದಿಲ್ಲ ಎಂದು ಸುಪ್ರೀಂನ ಮೆಟ್ಟಿಲೇರಿದ್ದರು. ಸಾಧುಗಳ ಪರ ವಕೀಲ ಬಾಲಾಜಿ ಶ್ರೀನಿವಾಸನ್‌, “ಹತ್ಯೆಗೆ ಸಂಬಂಧಿಸಿದ ಸಾಕ್ಷಿಗಳನ್ನು ಸರಕಾರ ನಾಶಪಡಿಸುತ್ತಿದೆ’ ಎಂದು ವಾದಿಸಿದ್ದರು. ಏ.16 ರಂದು ಪಾಲ್ಫರ್‌ನಲ್ಲಿ ಸಾಧುಗಳ ಹತ್ಯೆ ನಡೆದಿತ್ತು. ಈ ಪ್ರಕರಣ ಸಂಬಂಧ ನೂರಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next