Advertisement

ಅಟಾರ್ನಿ ಸಹಾಯ ಕೇಳಿದ ಸುಪ್ರೀಂ

11:07 PM Jul 20, 2023 | Team Udayavani |

ನವದೆಹಲಿ: ಲಘು ಮೋಟಾರು ವಾಹನ(ಎಲ್‌ಎಂವಿ) ಚಾಲನಾ ಪರವಾನಗಿ ಹೊಂದಿರುವ ವ್ಯಕ್ತಿಯು ನಿಗದಿತ ತೂಕದ ಪ್ರಯಾಣಿಕ ವಾಹನವನ್ನು ಚಲಾಯಿಸಲು ಕಾನೂ ನಾತ್ಮಕವಾಗಿ ಅವಕಾಶ ಇದೆಯೇ ಎಂಬ ಕಾನೂನು ಪ್ರಶ್ನೆಗೆ ಸುಪ್ರೀಂ ಕೋರ್ಟ್‌ ಗುರುವಾರ ಅಟಾರ್ನಿ ಜನರಲ್‌ ಆರ್‌.ವೆಂಕಟರಮಣಿ ಅವರ ಸಹಾಯವನ್ನು ಕೇಳಿದೆ.

Advertisement

ಸಿಜೆಐ ಡಿ.ವೈ.ಚಂದ್ರಚೂಡ್‌ ಅವರ ನೇತೃತ್ವದ ಐವರು ನ್ಯಾಯಮೂರ್ತಿಗಳು ಒಳಗೊಂಡ ಸಾಂವಿಧಾನಿಕ ಪೀಠವು, ಈ ನಿಟ್ಟಿನಲ್ಲಿ ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವಾಲಯದ ಪ್ರತಿಕ್ರಿಯೆಯ ಅಗತ್ಯವಿದೆ ಎಂದು ಹೇಳಿತು. ಇದೇ ವೇಳೆ, 2017ರ ಮುಕುಂದ್‌ ದೇವಗನ್‌ ವರ್ಸಸ್‌ ಓರಿಯಂಟಲ್‌ ಇನ್ಶೂರೆನ್ಸ್‌ ಕಂಪನಿ ಲಿ. ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠದ ತೀರ್ಪನ್ನು ಉಲ್ಲೇಖೀಸಲಾಯಿತು.

ಮುಕುಂದ್‌ ದೇವಗನ್‌ ಪ್ರಕರಣದಲ್ಲಿ, ಗರಿಷ್ಠ 7,500 ಕೆಜಿ ತೂಕದ ಪ್ರಯಾಣಿಕ ವಾಹನವನ್ನು ಎಲ್‌ಎಂವಿ ವ್ಯಾಖ್ಯಾನದಿಂದ ಹೊರಗಿಟ್ಟಿಲ್ಲ ಎಂಬುದನ್ನು ಪರಿಗಣಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next