Advertisement

Sirsi: ಶಿವಲಿಂಗದ ಮೇಲೆ ಬರೆದು ಅಶುದ್ದಗೊಳಿಸಿದ್ದ ವಿದ್ಯಾರ್ಥಿ ಪೊಲೀಸ್‌ ವಶಕ್ಕೆ

03:49 PM Feb 05, 2024 | Team Udayavani |

ಶಿರಸಿ: ತಾಲೂಕಿನ ನೆರೆಬೈಲ್ ಗ್ರಾಮದ ಶ್ರೀ ಸೋಮೇಶ್ವರ ದೇವಸ್ಥಾನದ ಶಿವಲಿಂಗದ ಮೇಲೆ ಬರೆದು ಅಶುದ್ದಗೊಳಿಸಿದ್ದ ಪ್ರಕರಣಕ್ಕೆ ಪೊಲೀಸರು ತೆರೆ ಎಳೆದಿದ್ದಾರೆ.

Advertisement

ಘಟನೆ ನಡೆದ 24 ಗಂಟೆಯಲ್ಲಿ ಪತ್ತೆ ಹಚ್ಚಿದ ಪೋಲಿಸರು ಪರೀಕ್ಷೆಯಲ್ಲಿ ಸೋಲುವ ಭೀತಿಯಲ್ಲಿದ್ದ ವಿದ್ಯಾರ್ಥಿಯೋರ್ವ ಮಾಡಿದ ಕೃತ್ಯವಾಗಿದೆ ಎಂದು ಪತ್ತೆ ಮಾಡಿದ್ದಾರೆ.

ಕೆ ಎಚ್ ಬಿ ಕಾಲೋನಿಯ ನಿವಾಸಿ ಪರಮ ಶಿವನ ಆರಾಧಕನಾಗಿದ್ದ ವಿದ್ಯಾರ್ಥಿಗೆ ಕಾಲೇಜಿನಲ್ಲಿ ಓದಲು ಬಿಗಿ ಮಾಡಿದಾಗ ಜೆಇಇ ಹಾಗೂ ಐಐಟಿ ಎಂದು ಶಿವ ಲಿಂಗದ ಮೇಲೆ ಬರೆದು ಪ್ರಾರ್ಥಿಸಿಕೊಂಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಈತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಡಿವೈಎಸ್‌ಪಿ ಗಣೇಶ ಕೆ ಎಲ್ ಸಮರ್ಥವಾದ ಮಾರ್ಗದರ್ಶನ, ಸಿಪಿಐ ಸೀತರಾಮ ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಪಿಎಸ್ಐ ದಯಾನಂದ ಜೋಗಳೆಕರ್, ಪ್ರತಾಪ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next