Advertisement

ಸೆಂಟ್ರಲ್ ರೈಲು ನಿಲ್ದಾಣದಲ್ಲಿ ದುರ್ನಾತ

12:31 AM Aug 05, 2019 | mahesh |

ಮಹಾನಗರ: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ಒಳಚರಂಡಿ ಕಾಮಗಾರಿಯ ಅವ್ಯವಸ್ಥೆಯಿಂದಾಗಿ ನಿಲ್ದಾಣ ದುರ್ನಾತ ಬೀರುತ್ತಿದೆ.

Advertisement

ರೈಲು ನಿಲ್ದಾಣ ಒಳಚರಂಡಿ ಕಾಮಗಾರಿ ಆರಂಭಿಸಲು ಇಲಾಖೆ ನಿಲ್ದಾಣದ ಮುಂಭಾಗದಲ್ಲಿ ಅಗೆದು ಹಾಕಿತ್ತು. ಆದಾಗಲೇ ಭಾರೀ ಮಳೆ ಸುರಿದ ಪರಿಣಾಮ ರೈಲು ನಿಲ್ದಾಣದ ಆವರಣವೆಲ್ಲ ಮಳೆ ನೀರು ತುಂಬಿ ಅಸ್ತವ್ಯಸ್ತವಾಗಿತ್ತು. ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರೆಲ್ಲ ಇದರಿಂದ ತೊಂದರೆ ಅನುಭವಿಸುವಂತಾಗಿತ್ತು. ಇದರಿಂದ ಎಚ್ಚೆತ್ತ ರೈಲ್ವೇ ಇಲಾಖೆ ಅಗೆದ ಒಳಚರಂಡಿ ಸಂಪರ್ಕವನ್ನು ಹಾಗೇ ಮುಚ್ಚಿ ಬಿಟ್ಟಿತ್ತು. ಇದೀಗ ಹಳೆಯ ಡ್ರೈನೇಜ್‌ ವ್ಯವಸ್ಥೆಯಲ್ಲಿ ಉಂಟಾದ ಸಮಸ್ಯೆಯಿಂದಾಗಿ ಕೊಳಚೆ ನೀರು ನಿಲ್ದಾಣದ ಮುಂಭಾಗವೇ ಹರಿಯುತ್ತಿದೆ.

ಒಳಚರಂಡಿ ಕೊಳಚೆ ನಿಲ್ದಾಣದ ಮುಂಭಾಗದಲ್ಲೇ ಹರಿಯುತ್ತಿರುವುದರಿಂದ ದುರ್ನಾತ ಬೀರುತ್ತಿದ್ದು, ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರು ಮೂಗು ಮುಚ್ಚಿಕೊಂಡೇ ನಡೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದರೊಂದಿಗೆ ಆ ಭಾಗದಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುವ ಭೀತಿ ಎದುರಾಗಿದ್ದು, ಸಿಬಂದಿ, ವಾಹನ ಚಾಲಕ‌ರು ಆತಂಕಗೊಂಡಿದ್ದಾರೆ. ದಿನಂಪ್ರತಿ ಸಾವಿರಾರು ಪ್ರಯಾಣಿಕರು ಆಗಮಿಸುವ ರೈಲು ನಿಲ್ದಾಣದ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next