Advertisement

ಜನರ ಸಂಕಷ್ಟ ಅರಿಯದ ರಾಜ್ಯ ಸರ್ಕಾರ

04:43 PM Apr 26, 2019 | Team Udayavani |

ತುಮಕೂರು: ರಾಜ್ಯದಲ್ಲಿ ಬರ ಪರಿಸ್ಥಿತಿ ತೀವ್ರವಾಗಿದೆ. ಚುನಾವಣೆ ನೀತಿ ಸಂಹಿತೆ ಹೆಸರಿನಲ್ಲಿ ಜನರ ಸಂಕಷ್ಟ ಅರಿಯದ ಸ್ಥಿತಿಯಲ್ಲಿ ಸರ್ಕಾರ ಇದೆ. ಜಿಲ್ಲೆಯೂ ಸೇರಿದಂತೆ ರಾಜ್ಯದ 126 ತಾಲೂಕುಗಳು ಬರದಿಂದ ನಲುಗುತ್ತಿದ್ದು, ಕುಡಿಯುವ ನೀರು ಮತ್ತು ಜಾನುವಾರುಗಳ ಮೇವಿನ ಸಮಸ್ಯೆ ಬಗೆಹರಿಸಲು ಅಡ್ಡಿಯಾಗಿರುವ ಚುನಾವಣಾ ನೀತಿ ಸಂಹಿತೆ ಸಡಿಲ ಗೊಳಿಸಬೇಕು ಎಂದು ಬಿಜೆಪಿ ಮುಖಂಡ, ಶಾಸಕ ಜೆ.ಸಿ.ಮಾಧುಸ್ವಾಮಿ ಆಗ್ರಹಿಸಿದರು.

Advertisement

ನಗರದಲ್ಲಿ ಗುರುವಾರ ಬಿಜಿಪಿ ಶಾಸಕರಾದ ಬಿ.ಸಿ. ನಾಗೇಶ್‌, ಮಸಾಲೆ ಜಯರಾಮ್‌, ಜಿ.ಬಿ.ಜ್ಯೋತಿ ಗಣೇಶ್‌ ಒಳಗೊಂಡ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಚುನಾವಣೆ ಮುಗಿದಿದ್ದರೂ ಮೇ 26ರ ವರೆಗೂ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇದೆ ಎಂದು ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಆದರೆ, ಜಿಲ್ಲೆಯಲ್ಲಿ ಬರಗಾಲ ತೀವ್ರವಾಗಿದೆ. ಈಗಿನ ಚುನಾವಣಾ ನೀತಿ ಸಂಹಿತೆ ಕಾನೂನು ನೋಡಿದರೆ ತುರ್ತು ಪರಿಸ್ಥಿತಿ ನೆನಪಾಗುತ್ತದೆ ಎಂದರು.

ನೀತಿ ಸಂಹಿತೆ ಸಡಿಲಗೊಳಿಸಿ: ಜನರು ಕುಡಿಯುವ ನೀರಿಗೆ ಪರಿತಪಿಸುತ್ತಿರುವ ಸ್ಥಿತಿ ನೋಡಿದರೂ ಅವರಿಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಶಾಸಕರೆಲ್ಲಾ ಅಸಹಾಯಕ ಸ್ಥಿತಿಯಲ್ಲಿರುವಂತಾಗಿದೆ. ಈಗಾಗಲೇ ಚುನಾವಣಾ ಆಯೋಗಕ್ಕೆ ಮೌಖೀಕವಾಗಿ ನೀತಿ ಸಂಹಿತೆ ಸಡಿಲಗೊಳಿಸುವಂತೆ ಮನವಿ ಮಾಡಲಾಗಿದೆ. ಆದರೂ ಪ್ರಯೋಜನವಾಗಿಲ್ಲ. ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆಯುವ ಮೂಲಕ ನೀತಿ ಸಂಹಿತೆ ಸಡಿಲ ಗೊಳಿಸಬೇಕಾಗಿದೆ ಎಂದು ಮನವಿ ಮಾಡಿದರು.

ಟೆಂಡರ್‌ ಬೇಡ: ಬರ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಈಗಿರುವಾಗ ಸರ್ಕಾರದ ಪ್ರಧಾನ ಕಾರ್ಯದರ್ಶಿ ಏ.23ರ ನಂತರ ಬೋರ್‌ವೆಲ್ಗಳನ್ನು ಟೆಂಡರ್‌ ಮೂಲಕ ಕೊರೆಸಿ ಎನ್ನುವ ದೇಶ ಹೊರಡಿ ಸಿದ್ದಾರೆ. ಈಗಿರುವ ಪರಿಸ್ಥಿತಿಗೆ ಈ ಆದೇಶ ಹೊಂದಾ ಣಿಕೆಯಾಗುವುದಿಲ್ಲ. ಇದರಿಂದ ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ. ಟೆಂಡರ್‌ ಕರೆದು ಒಂದು ಬೋರ್‌ವೆಲ್ ಕೊರೆಸಲು ವಾರಾನುಗಟ್ಟಲೆ ಸಮಯ ವಕಾಶ ಬೇಕಾಗುತ್ತದೆ. ಒಂದು ವೇಳೆ ಬೋರ್‌ವೆಲ್ ಫೇಲ್ ಆದರೆ ಮತ್ತೆಹೊಸ ಟೆಂಟರ್‌ಅನುಸಾರವೇ ಕೊರೆಸಬೇಕಾಗುತ್ತದೆ. ಹೀಗಾಗಿ ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯವಾಗುವುದಿಲ್ಲ. ಬೋರ್‌ವೆಲ್ ಫೇಲ್ಆದಾಗಲೆಲ್ಲಾ ಹಳ್ಳಿಗಳಲ್ಲಿ ಘರ್ಷಣೆಯೂ ಆಗು ತ್ತದೆ. ಆದ್ದರಿಂದ ಈ ಹಿಂದಿನಂತೆಯೇ ಫೀಸ್‌ವರ್ಕ್‌ ಅನ್ವಯವೇ ಬೋರ್‌ ವೆಲ್ಕೊರೆಯುವ ಆದೇಶ ಮುಂದುವರಿಸಬೇಕು ಎಂದು ಆಗ್ರಹಿಸಿದರು.

ರೊಟೀನ್‌ ವರ್ಕ್ಸ್ಗಾದರೂ ಅವಕಾಶ ಕೊಡಿ: ಟ್ಯಾಂಕರ್‌ ಮೂಲಕ ನೀರುಕೊಡುವುದಕ್ಕೂ ನೀತಿ ಸಂಹಿತೆ ಅಡ್ಡಿಯಾಗಿದೆ. ಕುಡಿಯುವ ನೀರುಕೊಡ ಲಾರದ ಅಸಹಾಯಕ ಸ್ಥಿತಿಗೆ ಶಾಸಕರು ಬಂದಿದ್ದೇವೆ. ಕ್ಷೇತ್ರದ ನೀರಿನ ಸಮಸ್ಯೆ ತಿಳಿಗೊಳಿಸಲು 65 ಬೋರ್‌ವೆಲ್ ಅವಶ್ಯಕತೆ ಪಟ್ಟಿಕೊಟ್ಟಿದ್ದರೂ, ಅಧಿಕಾರಿಗಳು 35 ಬೋರ್‌ವೆಲ್ ಕೊರೆಸುವ ಪಟ್ಟಿ ತಯಾರು ಮಾಡಿ ದ್ದಾರೆ. ಹೀಗಾಗಿ ಇಂಗ್ಲೀಷ್‌ನವರ ಕಾಲಕ್ಕಿಂತ ಕೆಟ್ಟದಾಗಿ ಬರಗಾಲ ಎದುರಿಸುವ ಪರಿಸ್ಥಿತಿ ಬಂದಿದೆ. ಹೊಸ ಯೋಜನೆಗಳನ್ನು ಮಾಡುವುದು ಬೇಡ. ಆದರೆ, ರೊಟೀನ್‌ ವರ್ಕ್‌ ಮಾಡುವುದಕ್ಕಾದರೂ ಅವಕಾಶ ಮಾಡಿಕೊಡಬೇಕು. ಇದಕ್ಕೂ ನೀತಿ ಸಂಹಿತೆ ಅಡ್ಡಿ ಯೆಂದರೆ ಎಷ್ಟು ಸರಿ ಪ್ರಶ್ನಿಸಿದರು.

Advertisement

ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆ ಬಗ್ಗೆ ಗಮನ ಕೊಡುತ್ತಿಲ್ಲ. ಕಳೆದ ಒಂಭತ್ತು ತಿಂಗಳಲ್ಲಿ ಒಂದು ಬಾರಿ ಸಭೆ ನಡೆಸುವುದನ್ನು ಹೊರತು ಪಡಿಸಿದರೆ ಮತ್ಯಾ ವುದೇ ಪ್ರಗತಿ ಪರಿಶೀಲನಾ ಸಭೆ ನಡೆಸಿಲ್ಲ. ಅವರಿಗೆ ರಾಜಕೀಯ ಬಿಟ್ಟರೆ ಬೇರೆ ಬೇಕಿಲ್ಲ. ಜಿಲ್ಲೆಯ ಬರಗಾಲ ಸ್ಥಿತಿ ಇದ್ದರೂ ಯಾವುದೇ ರೀತಿಯಗಮನಹರಿಸುತ್ತಿಲ್ಲ ಎಂದು ನುಡಿದರು.

35 ಹಳ್ಳಿಗಳ ಸ್ಥಿತಿ ಹೀನಾಯ: ಶಾಸಕ ಮಸಾಲೆ ಜಯರಾಮ್‌ ಮಾತನಾಡಿ, ಅಂತರ್ಜಲ ಕುಸಿತದಿಂದ 1200 ಅಡಿ ಆಳ ಬೋರ್‌ವೆಲ್ ಕೊರೆಸಿದರೂ ನೀರು ಸಿಗುತ್ತಿಲ್ಲ. ಒಂದುಕಡೆ ನೀರಿಲ್ಲದೆ ತೆಂಗು- ಅಡಕೆ ತೋಟಗಳು ಒಣಗುತ್ತಿದ್ದರೆ, ಮತ್ತೂಂದೆಡೆ ಬಿರುಗಾಳಿಗೆ 400-600 ತೆಂಗಿನ ಮರಗಳ ಸುಳಿಗಳು ಬಿದ್ದುಹೋಗಿವೆ. ವಿದ್ಯುತ್‌ ಕಂಬಗಳು, ಟ್ರಾನ್ಸ್‌ಫಾರ್ಮ್ಗಳು ನೆಲಕ್ಕುರುಳಿವೆ. ಸರಿಪಡಿಸಲು ಅಧಿಕಾರಿಗಳು ಬರುತ್ತಿಲ್ಲ. ಇದಕ್ಕೂ ನೀತಿ ಸಂಹಿತೆ ಅಡ್ಡಿ ಯಾಗಿದೆ. ತಾಲೂಕಿನ 35 ಹಳ್ಳಿಗಳ ಸ್ಥಿತಿ ಹೀನಾಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಾಚಿಕೆಗೇಡಿನ ಸ್ಥಿತಿ: ಶಾಸಕ ಬಿ.ಸಿ.ನಾಗೇಶ್‌ ಮಾತನಾಡಿ, ಅಧಿಕಾರಿಗಳು ತುಂಬಾ ಅನಿವಾರ್ಯ ಸಂದರ್ಭವನ್ನು ಬಿಟ್ಟರೆ ಮತ್ಯಾವುದೇ ಕಾರಣಕ್ಕೂ ಶಾಸಕರ ಜತೆ ದೂರವಾಣಿ ಮೂಲಕವೂ ಸಂಪರ್ಕದಲ್ಲಿರ ಬಾರದೆಂದು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಹೀಗಾದರೆ ಜನರ ಸಮಸ್ಯೆಗಳಿಗೆ ಸ್ಪಂದಿಸುವುದಾದರೂ ಹೇಗೆ? ಇದು ಪ್ರಜಾಪ್ರಭುತ್ವದ ನಾಚಿಕೆಗೇಡಿನ ಸ್ಥಿತಿಯಾಗಿದೆ ಎಂದರು.

ಜೂನ್‌ವರೆಗೂ ನೀರು: ಶಾಸಕ ಜಿ.ಬಿ. ಜ್ಯೋತಿಗಣೇಶ್‌ ಮಾತನಾಡಿ, ನಗರದಲ್ಲಿ ಸುಮಾರು 500 ಬೋರ್‌ವೆಲ್ಗಳಿವೆ. ಅದರಲ್ಲಿ ಸುಮಾರು 140ಕ್ಕೂ ಹೆಚ್ಚು ಬೋರ್‌ವೆಲ್ಗಳು ನಿಂತು ಹೋಗಿವೆ. ಮೈದಾಳ ಕೆರೆಯಲ್ಲಿ 80 ಎಂಸಿಎಫ್ಟಿ, ಬುಗುಡನಹಳ್ಳಿ ಕರೆಯಲ್ಲಿ 70 ಎಂಸಿಎಫ್ಟಿ ನೀರಿದೆ. ಜೂನ್‌ವರೆಗೂ ನೀರುಕೊಡ ಬಹುದು. ಪಾಲಿಕೆಯಲ್ಲಿ ಏಳು ಟ್ಯಾಂಕರ್‌ ಮಾತ್ರ ಇವೆ. ಹೆಚ್ಚು ಟ್ಯಾಂಕರ್‌ ಮೂಲಕ ನೀರುಕೊಡುವ ವ್ಯವಸ್ಥೆ ಮಾಡಿ ನೀರಿನ ಸಮಸ್ಯೆ ಬಾರದಂತೆ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಒತ್ತಾಯಿಸಿದರು.

ಜಂಟಿ ಪತ್ರಿಕಾಗೋಷ್ಠಿಯಲ್ಲಿಜಿಲ್ಲಾ ಬಿಜೆಪಿ ಕಾರ್ಯ ದರ್ಶಿ ಹೆಬ್ಟಾಕ ರವಿಶಂಕರ್‌, ಟಿ.ಆರ್‌.ಸದಾಶಿವಯ್ಯ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next