Advertisement

ಭಾಗಮಂಡಲದಲ್ಲಿ ಕಾಶೀ ಮಠಾ ಧೀಶರ ವಸಂತಮಾಸ 

01:00 AM Mar 14, 2019 | Team Udayavani |

ಮಂಗಳೂರು: ವಾರಾಣಸಿ ಶ್ರೀ ಕಾಶೀ ಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಸಂಯಮಿಂದ್ರತೀರ್ಥ ಸ್ವಾಮೀಜಿ ಯವರ ವಸಂತ ಮಾಸಾಚರಣೆ ಎ.6ರಿಂದ ಭಾಗಮಂಡಲ ಶ್ರೀ ಕಾಶೀ ಮಠದಲ್ಲಿ ಜರಗಲಿದೆ. 

Advertisement

1957ರಲ್ಲಿ ಶ್ರೀಮದ್‌ ಸುಧೀಂದ್ರತೀರ್ಥ ಸ್ವಾಮೀಜಿಯವರಿಂದ ಭಾಗಮಂಡಲ ಶಾಖಾ ಮಠ ನಿರ್ಮಾಣಗೊಂಡಿತ್ತು. ಶಾಖಾ ಮಠವನ್ನು ಸಮಾಜದ ಈಗಿನ ಅಗತ್ಯಗಳಿಗೆ ಪೂರೈಸಲು ಯೋಗ್ಯವಾದ ರೀತಿಯಲ್ಲಿ ನವೀಕರಿಸಲಾಗಿದೆ.

ನವೀಕೃತ ಶಾಖಾ ಮಠವನ್ನು ಶ್ರೀ ಸಂಯಮಿಂದ್ರತೀರ್ಥ ಸ್ವಾಮೀಜಿಯವರು ಮಾ. 22ರಂದು ಬೆಳಗ್ಗೆ 11 ಗಂಟೆಗೆ ಉದ್ಘಾಟಿಸಲಿರುವರು. ಎ.6ರಂದು ಪ್ರಾರಂಭವಾಗುವ ವಸಂತ ಮಾಸದ ಸಂದರ್ಭದಲ್ಲಿ ಶ್ರೀ ಮಠದಲ್ಲಿ ದಿನ ನಿತ್ಯ ಸಂಸ್ಥಾನದ ದೇವರಿಗೆ ವಿವಿಧ ವಾಹನ ಸೇವೆಗಳು ನಡೆಯಲಿವೆ. ಭಜನೆ ಸಂಧ್ಯಾ ಮತ್ತು ವಾರಾಂತ್ಯದಲ್ಲಿ ಪ್ರಸಿದ್ಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next