Advertisement

ಹಾಡು ಹೇಳುತ್ತಾ ಬಂದರು ಪುಣ್ಯಾತ್‌ಗಿತ್ತೀರು….

05:42 AM Mar 20, 2019 | |

ಮಹಿಳಾ ಪ್ರಧಾನ ಕಥಾಹಂದರ ಹೊಂದಿರುವ “ಪುಣ್ಯಾತ್‌ಗಿತ್ತೀರು’ ಚಿತ್ರದ ಹಾಡುಗಳು ಇತ್ತೀಚೆಗೆ ಬಿಡುಗಡೆಯಾಗಿದೆ. ಸತ್ಯನಾರಾಯಣ ಮನ್ನೆ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ರಾಮಾನುಜಂ ಸಂಗೀತ ಸಂಯೋಜನೆ ಇದೆ.

Advertisement

ಚಿತ್ರದ ಹಾಡುಗಳಿಗೆ ಡಾ. ವಿ ನಾಗೇಂದ್ರ ಪ್ರಸಾದ್‌, ಮೋಹನ್‌ ಮೊದಲಾದವರು ಸಾಹಿತ್ಯ ಒದಗಿಸಿದ್ದಾರೆ. ಇತ್ತೀಚೆಗೆ ಚಿತ್ರದ ನಾಲ್ವರು ನಾಯಕಿಯರು ಮತ್ತು ಚಿತ್ರತಂಡದ ಸದಸ್ಯರ ಸಮ್ಮುಖದಲ್ಲಿ ಆಡಿಯೋ ರಿಲೀಸ್‌ ಮಾಡಲಾಗಿದೆ.

ದಿಕ್ಕು-ದೆಸೆಯಿಲ್ಲದೆ ಪಿಜಿಯಲ್ಲಿ ಬದುಕುತ್ತಾ ಥರ ಥರದ ಮೋಸವನ್ನೇ ಬದುಕಾಗಿಸಿಕೊಂಡ ಬಜಾರಿಯರ ಕಥೆ ಈ ಚಿತ್ರದಲ್ಲಿದೆಯಂತೆ. ಚಿತ್ರದ ಮೊದಲರ್ಧ ಬಜಾರಿಯರ ಕರಾಮತ್ತಿನ ವೃತ್ತಾಂತವಿದ್ದರೆ, ದ್ವಿತಿಯಾರ್ಧ ಎಮೋಷನಲ್‌ ವೃತ್ತಾಂತ ಇರಲಿದೆಯಂತೆ. ಎಲ್ಲ ಅಂದುಕೊಂಡಂತೆ ನಡೆದರೆ, ಇದೇ ಏಪ್ರಿಲ್‌ನಲ್ಲಿ ಪುನ್ಯಾಣ್‌ಗಿತ್ತೀರು ತೆರೆಗೆ ಬರುವ ಸಾಧ್ಯತೆ ಇದೆ.     

Advertisement

Udayavani is now on Telegram. Click here to join our channel and stay updated with the latest news.

Next