Advertisement

ದಶಕದ ಹಾಡು ಈಗ ಬಳಕೆಯಾಯ್ತು

12:50 PM Dec 18, 2017 | |

ಹಿರಿಯ ಗೀತರಚನೆಕಾರ ವಿಜಯನರಸಿಂಹ ಅವರು ಈಗ ನಮ್ಮೊಂದಿಗಿಲ್ಲ. ಆದರೆ, ಅವರು ಬರೆದ ಹಾಡೊಂದು “ಪ್ರೇಮ ಬರಹ’ ಚಿತ್ರದಲ್ಲಿ ಬಳಕೆಯಾಗಿದೆ. ಹೌದು, ಹಿರಿಯ ಗೀತರಚನೆಕಾರ ವಿಜಯನರಸಿಂಹ ಅವರು ಹನುಮಂತನ ಕುರಿತು ಬರೆದ ಹಾಡನ್ನು ನಿರ್ದೇಶಕ ಕಮ್‌ ನಿರ್ಮಾಪಕ ಅರ್ಜುನ್‌ ಸರ್ಜಾ, ತಮ್ಮ “ಪ್ರೇಮ ಬರಹ’ ಚಿತ್ರದಲ್ಲಿ ಬಳಸಿಕೊಂಡಿದ್ದಾರೆ.

Advertisement

ಈ ಚಿತ್ರದಲ್ಲಿ ಹನುಮಾನ್‌ ಹಾಡೊಂದನ್ನು ಯಾರಿಂದ ಬರೆಸಬೇಕು ಎಂಬ ಟೆನ್ಷನ್‌ನಲ್ಲಿ ಅರ್ಜುನ್‌ ಸರ್ಜಾ ಅವರಿದ್ದಾಗ, ನೆನಪಾಗಿದ್ದೇ ವಿಜಯ ನರಸಿಂಹ ಅವರಂತೆ. ಯಾಕೆಂದರೆ, ದಶಕಗಳ ಹಿಂದೆ ಅರ್ಜುನ್‌ ಸರ್ಜಾ ಅವರು, ಒಮ್ಮೆ ವಿಜಯ ನರಸಿಂಹ ಅವರಿಗೆ ಫೋನ್‌ ಮಾಡಿ, ನನಗೆ ಒಂದಷ್ಟು ದೇವರ ಕುರಿತ ಗೀತೆಗಳನ್ನು ಬರೆದುಕೊಡಿ ಅಂತ ಕೇಳಿದ್ದರಂತೆ.

ಆಗ, ವಿಜಯ ನರಸಿಂಹ ಅವರು, ಆಂಜನೇಯ ಸ್ವಾಮಿ ಸೇರಿದಂತೆ ಬೇರೆ ದೇವರ ಗೀತೆ ಬರೆದುಕೊಟ್ಟಿದ್ದರಂತೆ. ಆ ಬಳಿಕ ವಿಜಯನರಸಿಂಹ ಅವರು ತೀರಿಕೊಂಡಿದ್ದಾರೆ. ಆದರೆ, “ಪ್ರೇಮ ಬರಹ’ ಚಿತ್ರದಲ್ಲಿ ಹನುಮಾನ್‌ ಕುರಿತ ಹಾಡು ಯಾರಿಂದ ಬರೆಸೋದು ಅಂತ ಯೋಚಿಸುತ್ತಿದ್ದಾಗ, ವಿಜಯ ನರಸಿಂಹ ಅವರು ಬರೆದ ಹಾಡು ನೆನಪಾಗಿ, ಅದನ್ನು ಸಂಗೀತ ನಿರ್ದೇಶಕ ಜೆಸ್ಸಿಗಿಫ್ಟ್ ಅವರಿಗೆ ಕೊಟ್ಟಿದ್ದಾರೆ.

ಅವರು ಸಾಹಿತ್ಯಕ್ಕೆ ಒಳ್ಳೆಯ ರಾಗ ಸಂಯೋಜಿಸಿಕೊಟ್ಟಿದ್ದಾರೆ. ಅಂದಹಾಗೆ, ಆ ಹಾಡಲ್ಲಿ ದರ್ಶನ್‌, ಅರ್ಜುನ್‌ ಸರ್ಜಾ, ಧ್ರುವಸರ್ಜಾ, ಚಿರಂಜೀವಿ ಸರ್ಜಾ ಹೆಜ್ಜೆ ಹಾಕಿದ್ದಾರೆ. ಇನ್ನು, ಅರ್ಜುನ್‌ ಸರ್ಜಾ ಅಭಿನಯದ “ಪ್ರತಾಪ್‌’ ಚಿತ್ರದಲ್ಲಿದ್ದ “ಪ್ರೇಮ ಬರಹ…’ ಹಾಡನ್ನು ಇಲ್ಲಿ ರೀಮಿಕ್ಸ್‌ ಮಾಡಲಾಗಿದೆಯಂತೆ.

Advertisement

Udayavani is now on Telegram. Click here to join our channel and stay updated with the latest news.

Next