Advertisement

ತಾಯಿಯ ಸಾವಿನ ನಡುವೆಯೂ ಮತಗಟ್ಟೆಗೆ ಬಂದು ಮತ ಚಲಾಯಿಸಿದ ಮಗ!

03:44 PM May 12, 2018 | Team Udayavani |

ಯಾದಗಿರಿ: ರಾಜ್ಯದ ಹಲವೆಡೆ ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಬಿರುಸಿನಿಂದ ನಡೆಯುತ್ತಿದ್ದರೆ, ಹಲವೆಡೆ ನಿಧಾನಗತಿಯಲ್ಲಿ ಸಾಗಿದೆ. ಮತ್ತೊಂದೆಡೆ ಮನೆಯಲ್ಲಿ ತಾಯಿಯ ಶವವಿಟ್ಟು ಮತಗಟ್ಟೆಗೆ ಬಂದು ಪುತ್ರ ಮತ ಚಲಾಯಿಸಿದ ಘಟನೆ ಸುರಪುರದ ನಗನೂರು ಗ್ರಾಮದಲ್ಲಿ ನಡೆದಿದೆ.

Advertisement

ಯಾದಗಿರಿ ಜಿಲ್ಲೆಯ ಶಹಾಪುರದ ನಗನೂರು ಗ್ರಾಮದಲ್ಲಿ ಗುರುಸಿದ್ದವ್ವ ಅನಾರೋಗ್ಯದ ಕಾರಣದಿಂದ ಶನಿವಾರ ಬೆಳಗ್ಗೆ ಸಾವನ್ನಪ್ಪಿದ್ದರು. ಈ ಸಾವಿನ ನೋವಿನಲ್ಲೂ ಮಗ ಸೋಮಣ್ಣ ಮತಗಟ್ಟೆಗೆ ಬಂದು ಮತದಾನ ಮಾಡಿರುವುದು ಎಲ್ಲರ ಪ್ರಶಂಸೆಗೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next