Advertisement

ದೇವಾಲಯ ಮುಳುಗಡೆ 

11:20 AM Aug 12, 2018 | Team Udayavani |

ಎಚ್‌.ಡಿ.ಕೋಟೆ: ಕೇರಳದ ವೈನಾಡು ಪ್ರದೇಶದಲ್ಲಿ ಹೆಚ್ಚಿನ ಮಳೆಯಿಂದಾಗಿ ಕಬಿನಿ ಜಲಾಶಯದ ಒಳ ಹರಿವು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ 80 ಸಾವಿರ ಕ್ಯೂಸೆಕ್‌ ನೀರನ್ನು ಹೊರ ಬಿಡುತ್ತಿದ್ದು ಪರಿಣಾಮ ಕಪಿಲಾ ನದಿ ಉಕ್ಕಿ ಹರಿಯುತ್ತಿದೆ.

Advertisement

ನವಸತಿ ಪ್ರದೇಶ ಹಾಗೂ ರೈತರ ಹೊಲ ಗದ್ದೆಗಳಿಗೆ ನೀರು ನುಗ್ಗಿದೆ, ಕಪಿಲೆಯ ರೌದ್ರ ನರ್ತನಕ್ಕೆ ನದಿ ಪಾತ್ರದ ರೈತರಿಗೆ ಬೆಳೆ ನಷ್ಟದ ಜತೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಅದರಲ್ಲೂ ತಾಲೂಕಿನ ಗಡಿಭಾಗದ ಗ್ರಾಮಗಳ ಜನರ ಸ್ಥಿತಿ ಹೇಳತೀರದಾಗಿದ್ದು, ಕೆಲವು ಮನೆಗಳು ಜಲಾವೃತವಾಗಿದ್ದು ಮನೆ ಕಳೆದುಕೊಂಡವರು ಸರ್ಕಾರಿ ಶಾಳೆಗಳಲ್ಲಿ ಆಶ್ರಯಪಡೆದಿದ್ದಾರೆ.

ಜಲಾಶಯದ ಮುಂಭಾಗದ ನದಿ ಪಾತ್ರದ ಜನರ ಕೃಷಿ ಭೂಮಿಗಳು ಜಲಾವೃತಗೊಂಡು ಕೆರೆಗಳಂತಾಗಿದ್ದು, ಅಪಾರ ಹನಿ ಸಂಭವಿಸಿದೆ. ನದಿ ಪ್ರವಾಹದಿಂದ ಜತೆಗೆ ವಾಸದ ಮನೆಗಳಿಗೆ ನೀರು ನುಗ್ಗಿದೆ.

ಕಬಿನಿ ಜಲಾಶಯದಿಂದ ಹೊರ ಹರಿವಿನ ಪ್ರಮಾಣ ದಿನೇ ದಿನೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನದಿ ತೀರದ ಗ್ರಾಮಗಳ ಜನರಿಗೆ ಈಗಾಗಲೇ ಎಚ್ಚರಿಕೆಯಿಂದಿರಲೂ ತಾಲೂಕು ಆಡಳಿತ ಸೂಚನೆ ನೀಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next