Advertisement

Karnataka: ತಾಯಿಯಂಥ ಪಕ್ಷವನ್ನು ಬಯ್ಯುವ ಶೆಟ್ಟರ್‌ ಸಹೋದರರು ಕೆಟ್ಟ ಮಕ್ಕಳು: ಈಶ್ವರಪ್ಪ

10:35 PM Sep 06, 2023 | Team Udayavani |

ಬಾಗಲಕೋಟೆ: ಹೆತ್ತ ತಾಯಿಗೆ ಬೈದರೆ ಯಾರೂ ಉದ್ಧಾರ ಆಗುವುದಿಲ್ಲ. ಪಕ್ಷ ತಾಯಿ ಇದ್ದಂತೆ. ಸನಾತನ ಧರ್ಮದ ಪ್ರಕಾರ ಕೆಟ್ಟ ತಾಯಿ ಇಲ್ಲ. ಕೆಟ್ಟ ಮಗ ಇರಬಹುದು. ರಾಜಕೀಯವಾಗಿ ಬೆಳೆಸಿರುವ ತಾಯಿ ರೂಪದ ಪಕ್ಷವನ್ನು ಬಯ್ಯುವ ಜಗದೀಶ ಶೆಟ್ಟರ್‌ ಹಾಗೂ ಪ್ರದೀಪ ಶೆಟ್ಟರ್‌ ಕೆಟ್ಟ ಮಕ್ಕಳು ಎಂದು ಮಾಜಿ ಡಿಸಿಎಂ ಕೆ.ಎಸ್‌. ಈಶ್ವರಪ್ಪ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿ.ಎಲ್‌.ಸಂತೋಷ್‌ ನಮ್ಮಂತಹ ಸಾವಿರಾರು ಜನರನ್ನು ಬೆಳೆಸಿದ್ದಾರೆ. ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರೂ ಆಗಿದ್ದಾರೆ. ಮದುವೆ ಆಗಿಲ್ಲ. ಸಂಸಾರ ಮಾಡಿಲ್ಲ. ಪ್ರಧಾನಿ ಮೋದಿಯಂತೆ ಅವರೂ ಸಮಾಜಕ್ಕಾಗಿ ದುಡಿಯುತ್ತಿದ್ದಾರೆ. ಪಕ್ಷಕ್ಕಾಗಿ ತ್ಯಾಗ ಮಾಡಿದವರ ಬಗ್ಗೆ ಮಾತನಾಡಿದರೆ ಉದ್ಧಾರ ಆಗದು. ಜಗದೀಶ್‌ ಶೆಟ್ಟರ್‌ ಸಿಎಂ ಆಗುವಾಗ ಹಾಗೂ ಪ್ರದೀಪ್‌ ಮೇಲ್ಮನೆ ಸದಸ್ಯರಾಗುವಾಗ ಒಳ್ಳೆಯವರಾಗಿದ್ದ ಸಂತೋಷ್‌ ಈಗ ಕೆಟ್ಟವರಾದರಾ? ಶೆಟ್ಟರ್‌ ಯಾರ ಬಕೆಟ್‌ ಹಿಡಿದು ಕಾಂಗ್ರೆಸ್‌ ಸೇರಿದ್ದಾರೆ ಎಂಬುದು ಗೊತ್ತಿದೆ. ಅಲ್ಲಿಯಾದರೂ ನೀವು ಚೆನ್ನಾಗಿರಿ. ಕಾಂಗ್ರೆಸ್‌ನಲ್ಲಿ ಇರುತ್ತೀರೋ, ಮುಸ್ಲಿಂ ಲೀಗ್‌ಗೆ ಹೋಗುತ್ತೀರೋ ಹೋಗಿ. ಹೋದ ಮೇಲೆ ತಾಯಿಯನ್ನು (ಬಿಜೆಪಿ) ಒದೆಯಬೇಡಿ ಎಂದರು.

ಪರಂ ಯಾಕೆ ಹೀಗೆ ಹೇಳಿದರೋ?
ಹಿಂದೂ ಧರ್ಮಕ್ಕೆ ಸನಾತನ ಧರ್ಮ ಎನ್ನುತ್ತಾರೆ. ಸಚಿವ ಪರಮೇಶ್ವರ ಅವರಿಂದ ಹಿಂದೂ ಧರ್ಮದ ವಿರುದ್ಧದ ಮಾತು ಯಾಕೆ ಬಂತೋ ಗೊತ್ತಿಲ್ಲ. ಅವರ ತಂದೆ ಗಂಗಾಧರಪ್ಪ, ತಾತ ಮರಿಯಪ್ಪ. ಸಾಧ್ಯವಿದ್ದರೆ ಮುತ್ತಜ್ಜನ ಹೆಸರು ಹೇಳಲಿ ನೋಡೋಣ. ನಿಮ್ಮ ಮುತ್ತಜ್ಜನ ಹೆಸರೇ ನಿಮಗೆ ಗೊತ್ತಿಲ್ಲ. ಹಾಗಿರುವಾಗ ನೂರಾರು ವರ್ಷಗಳ ಇತಿಹಾಸ ಇರುವ ಹಿಂದೂ ಧರ್ಮದ ಬಗ್ಗೆ ಪ್ರಶ್ನೆ ಕೇಳುವ ಅವಕಾಶ ಮತ್ತು ಅಧಿಕಾರ ನಿಮಗಿಲ್ಲ. ಆದ್ದರಿಂದ ಪರಮೇಶ್ವರ್‌ ಕೂಡಲೇ ಹಿಂದೂಗಳ ಕ್ಷಮೆ ಯಾಚಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next