Advertisement
ಉಂಡಾರು ಶ್ರೀ ವಿಷ್ಣುಮೂರ್ತಿ ಸನ್ನಿಧಿಯಲ್ಲಿ ಜರಗಿದ ನವೀಕೃತ ದೇವಾಲಯ ಸಮರ್ಪಣೆ, ಬಿಂಬ ಪ್ರತಿಷ್ಠಾಪನೆೆ, ಬ್ರಹ್ಮಕಲಶ ಮಹೋತ್ಸವ ಹಾಗೂ ಮನ್ಮಹಾರಥೋತ್ಸವದ ಪ್ರಯುಕ್ತ ಜರಗಿದ ಧಾರ್ಮಿಕ ಸಭೆಯ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಇನ್ನಂಜೆ ಗ್ರಾಮದಲ್ಲಿ ಸೋದೆ ಮಠದ ಮೂಲಕ ಸ್ಥಾಪನೆಗೊಂಡ ಶಾಲೆ ಹಾಗೂ ಸೋದೆ ಮಠದ ಆಡಳಿತ ದಲ್ಲಿರುವ ದೇವಾಲಯ ಎರಡೂ ಪ್ರಸಿದ್ಧಿಯಾಗಿದೆ. ದೇವಾಲಯ ಸರ್ವ ಸುಂದರವಾಗಿ ಮೂಡಿ ಬರುವಲ್ಲಿ ಗ್ರಾಮಸ್ಥರು ನಿರೀಕ್ಷೆಗೂ ಮೀರಿ ನೀಡಿದ ಸಹಕಾರ ಅವಿಸ್ಮರಣೀಯವಾಗಿದೆ. ಮುಂದೆ ವಿದ್ಯಾಲಯದ ಪುನಶ್ಚೇತನದಲ್ಲಿಯೂ ಗ್ರಾಮಸ್ಥರ ಪರಿಪೂರ್ಣ ಸಹಕಾರ ಅತ್ಯಗತ್ಯವಾಗಿ ದೊರಕಬೇಕಿದೆ ಎಂದರು. ಸಂತರು ನಾಡಿಗೆ ಬಂದರೆ ಊರು ಪಾವನ
ಧಾರ್ಮಿಕ ಉಪನ್ಯಾಸ ನೀಡಿದ ವಿದ್ವಾನ್ ವೆಂಕಟೇಶ ಕುಲಕರ್ಣಿ ಮಾತನಾಡಿ, ಆಚಾರ್ಯ ಮಧ್ವರು ಮತ್ತು ವಾದಿರಾಜರು ಕರಾವಳಿ ಮಾತ್ರವಲ್ಲದೇ ದೇಶದ ವಿವಿಧ ಭಾಗಗಳಲ್ಲೂ ನಡೆಸಿರುವ ಪವಾಡಗಳ ಘಟನೆಗಳನ್ನು ವಿವರಿಸಿದರು. ಉಂಡಾರು ವಿಷ್ಣುಮೂರ್ತಿ ಸನ್ನಿಧಾನವು ವಿಶೇಷ ಸಾಧನಾ ಕ್ಷೇತ್ರವಾಗಿದ್ದು, ಸಂತರು ನಾಡಿಗೆ ಬಂದರೆ ಊರು ಪಾವನವಾಗುತ್ತದೆ ಎನ್ನುವುದಕ್ಕೆ ಉಂಡಾರು ಗ್ರಾಮವೇ ಉದಾಹರಣೆ ಎಂದರು.
Related Articles
Advertisement
ಗ್ರಾಮಸ್ಥರಿಂದ ಸಮ್ಮಾನಉಂಡಾರು ದೇಗುಲದ ಜೀರ್ಣೋದ್ಧಾರ ಕಾರ್ಯದಲ್ಲಿ ವಿಶೇಷವಾಗಿ ತೊಡಗಿಸಿಕೊಂಡ ಮುಂಬಯಿ ಸಮಿತಿಯ ಚಂದ್ರಹಾಸ ಗುರುಸ್ವಾಮಿಯವರನ್ನು ಗ್ರಾಮಸ್ಥರು ಶ್ರೀಗಳ ಮೂಲಕವಾಗಿ ಅದ್ದೂರಿಯಾಗಿ ಸಮ್ಮಾನಿಸಿ ಗೌರವಿಸಿದರು. ದಾನಿಗಳನ್ನು ಜೀರ್ಣೋದ್ಧಾರ ಸಮಿತಿ ಮತ್ತು ದೇಗುಲದ ವತಿಯಿಂದ ಸಮ್ಮಾನಿಸಲಾಯಿತು. ಜೀರ್ಣೋದ್ಧಾರ ಸಮಿತಿಯ ದಯಾನಂದ ಶೆಟ್ಟಿ ಮಂಡೇಡಿ, ಸಮಿತಿಯ ಕೋಶಾಧಿಕಾರಿ ವಿ.ಜಿ. ಶೆಟ್ಟಿ, ಸತೀಶ್ ಶೆಟ್ಟಿ ಶಂಕರಪುರ ಉಪಸ್ಥಿತರಿದ್ದರು. ಬಂಟಕಲ್ಲು ರಾಮಕೃಷ್ಣ ಶರ್ಮಾ ಸ್ವಾಗತಿಸಿದರು. ಸಮಿತಿಯ ಕಾರ್ಯದರ್ಶಿ ಯು. ನಂದನ ಕುಮಾರ್ ದಾನಿಗಳ ಪಟ್ಟಿ ವಾಚಿಸಿದರು. ನವೀನ್ ಅಮೀನ್ ಶಂಕರಪುರ ಕಾರ್ಯಕ್ರಮ ನಿರೂಪಿಸಿದರು. ನಿರ್ಮಲಾ ಶೆಟ್ಟಿ ವಂದಿಸಿದರು. ಪಾಕೆಟ್ಮನಿ ದೇವರಿಗೆ ಸಮರ್ಪಿಸಿದ ಬಾಲಕಿ
ಉಂಡಾರು ದೇಗುಲದ ಜೀರ್ಣೋದ್ಧಾರ ಕಾರ್ಯದಲ್ಲಿ ಹಿರಿಯರೊಂದಿಗೆ ಕರಸೇವೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಮನೆಯಲ್ಲಿ ಹಿರಿಯರು ತಿಂಡಿಗಾಗಿ ನೀಡಿದ ಪಾಕೆಟ್ಮನಿಯನ್ನು ಸಂಗ್ರಹಿಸಿ ರೂ.1,600/-ನ್ನು ದೇವರ ಕಾರ್ಯಕ್ಕೆ ಸಮರ್ಪಿಸಿದ 4ನೇ ತರಗತಿಯ ವಿದ್ಯಾರ್ಥಿನಿ ಅಂಚೆಪಾಲಕಿ ರೇಖಾ ಶೆಟ್ಟಿ ಮತ್ತು ಕರುಣಾಕರ ಶೆಟ್ಟಿ ದಂಪತಿಯ ಪುತ್ರಿ ವೈಷ್ಣವಿಯ ಸೇವೆಯನ್ನು ಸೋದೆ ಶ್ರೀ ವಿಶೇಷವಾಗಿ ಉಲ್ಲೇಖೀಸಿದರು. ವೈಷ್ಣವಿಯ ಸೇವೆಯನ್ನು ರಾಮಾಯಣದಲ್ಲಿ ಸೇತುವೆ ನಿರ್ಮಾಣ ಕಾರ್ಯದಲ್ಲಿ ವಾನರ ಸೇನೆಯ ನಡುವೆ ಅಳಿಲು ಸಲ್ಲಿಸಿದ ಸೇವೆಗೆ ಹೋಲಿಸಿ, ಈಕೆಯ ದೇವ ಕಾರ್ಯ ಇತರಿಗೆ ಮಾದರಿಯಾಗಿದೆ ಎಂದು ಹರಸಿ ಸಮ್ಮಾನಿಸಿದರು.