Advertisement

Arrested: ಕಿಟಕಿ ಪಕ್ಕ ಮಲಗಿದ್ದ ಮಹಿಳೆಯ್ದ ಮಾಂಗಲ್ಯ ಸರ ಕದ್ದ ರೌಡಿ ಸೆರೆ

10:00 AM Sep 04, 2024 | Team Udayavani |

ಬೆಂಗಳೂರು: ಕಿಟಕಿ ಪಕ್ಕದಲ್ಲಿ ಮಲಗಿದ್ದ ಮಹಿಳೆಯ ಮಾಂಗಲ್ಯ ಸರ ಕಳವು ಮಾಡಿದ್ದ ರೌಡಿಶೀಟರ್‌ನನ್ನು ಜೆ.ಪಿ.ನಗರ ಪೊಲೀಸರು ಬಂಧಿಸಿದ್ದಾರೆ.

Advertisement

ಎಸ್‌.ಜೆ.ಪಾಳ್ಯ ಠಾಣೆ ರೌಡಿ ಶೀಟರ್‌ ಸೈಯದ್‌ ಫ‌ರ್ವೇಜ್‌ (34) ಬಂಧಿತ. ಈತನಿಂದ 9 ಲಕ್ಷ ರೂ. ಮೌಲ್ಯದ 3 ದ್ವಿಚಕ್ರ ವಾಹನ, 109 ಗ್ರಾಂ ಚಿನ್ನದ ಸರ ಜಪ್ತಿ ಮಾಡಲಾಗಿದೆ.

ಆರೋಪಿಯ ಬಂಧನದಿಂದ ಜೆ.ಪಿ.ನಗರ ಠಾಣೆಯಲ್ಲಿ ದಾಖಲಾಗಿದ್ದ 5 ಕಳವು ಪ್ರಕರಣ ಪತ್ತೆಯಾಗಿವೆ ಎಂದು ಪೊಲೀಸ್‌ ಆಯುಕ್ತ ಬಿ.ದಯಾನಂದ ಹೇಳಿದರು. ಠಾಣಾ ವ್ಯಾಪ್ತಿಯ ಮಹಿಳಾ ನಿವಾಸಿಯೊಬ್ಬರು, ಕಿಟಕಿ ಬಾಗಿಲು ತೆರೆದು ಕಿಟಕಿ ಪಕ್ಕದಲ್ಲೇ ಮಲಗಿದ್ದರು. ಈ ವೇಳೆ ಆರೋಪಿ ಮನೆ ಬಳಿ ಹೋಗಿದ್ದು, ಕಿಟಕಿ ಪಕ್ಕದಲ್ಲಿ ಮಲಗಿದ್ದ ಮಹಿಳೆಯ ಮಾಂಗಲ್ಯ ಸರ ಕಸಿದುಕೊಳ್ಳಲು ಮುಂದಾಗಿದ್ದಾನೆ. ಆಗ ಎಚ್ಚರಗೊಂಡ ಮಹಿಳೆ ಕೂಡಲೇ ಸರವನ್ನು ಬಿಗಿಯಾಗಿ ಹಿಡಿದುಕೊಂಡಿದ್ದಾರೆ. ಆದರೂ ಆರೋಪಿ ಬಲವಾಗಿ ಎಳೆದು ಅರ್ಧದಷ್ಟು ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.

ಆರೋಪಿ ರೂಢಿಗತ ಆರೋಪಿಯಾಗಿದ್ದು, ಈತನ ವಿರುದ್ಧ ನಗರ ವಿವಿಧ ಠಾಣೆಯಲ್ಲಿ ಕಳ್ಳತನ, ದರೋಡೆ, ಕೊಲೆ ಯತ್ನಗಳಂತಹ ಪ್ರಕರಣಗಳು ದಾಖಲಾಗಿವೆ.

ಎಸ್‌.ಜೆ.ಪಾಳ್ಯ ಠಾಣೆಯ ರೌಡಿ ಶೀಟರ್‌ ಆಗಿದ್ದಾನೆ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next