Advertisement

ಕೋವಿಡ್ ನಿಯಂತ್ರಣಕೆ ಅಧಿಕಾರಿಗಳ ಪಾತ್ರ ಮಹತದ್ದು

04:35 PM Jul 07, 2020 | Suhan S |

ಕುಕನೂರು: ಕೋವಿಡ್ ನಿಯಂತ್ರಿಸುವಲ್ಲಿ ಅಧಿಕಾರಿಗಳ ಪಾತ್ರ ಬಹಳ ಮಹತ್ವದ್ದಾಗಿದೆ ಎಂದು ಗ್ರಾಪಂ ಅಧ್ಯಕ್ಷ ಫಕ್ಕಿರೇಶ ಆರೇರ ಹೇಳಿದರು.

Advertisement

ತಾಲೂಕಿನ ಭಾನಾಪೂರ ಗ್ರಾಪಂನಲ್ಲಿ ಗ್ರಾಪಂ ವತಿಯಿಂದ ಕೋವಿಡ್ ವಾರಿಯರ್ಸ್‌ಗೆ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಜಿಲ್ಲಾ, ತಾಲೂಕು, ಗ್ರಾಮ ಮಟ್ಟದಲ್ಲಿ ಪ್ರತಿಯೊಬ್ಬ ಅಧಿಕಾರಿಗಳು ಕೋವಿಡ್ ವಿರುದ್ಧ ಹೋರಾಟ ನಡೆಸಿದ್ದಾರೆ. ಗ್ರಾಪಂ ಮಟ್ಟದಲ್ಲಿ ಆರೋಗ್ಯ ಇಲಾಖೆ, ಗ್ರಾಪಂ, ಕಂದಾಯ, ಆಶಾ, ಸೇರಿದಂತೆ ಪ್ರತಿಯೊಬ್ಬರು ತಮ್ಮ ಜೀವನದ ಹಂಗು ತೊರೆದು ಕೊರೊನಾ ವಿರುದ್ಧ ಹೋರಾಟ ನಡೆಸಿದ್ದಾರೆ.

ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಅಗ್ನಿಶಾಮಕ ವಾಹನದ ಮೂಲಕ ಔಷಧಿ  ಸಿಂಪಡಣೆ ಮಾಡಲಾಗಿದೆ. ಒಟ್ಟಾರೆಯಾಗಿ ಗ್ರಾಪಂ ವ್ಯಾಪ್ತಿಯಲ್ಲಿ ಕೋವಿಡ್ ವಾರಿಯರ್ಸ್‌ ಚೆನ್ನಾಗಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದರು. ಪಿಡಿಒ ಪರಶುರಾಮ ನಾಯಕ, ಬಂದಮ್ಮ ಜಂಗ್ಲಿ, ವಿಶಾಲಾಕ್ಷಿ ರೇಣುಕಾ, ಕೃಷ್ಣಾ ಅಬ್ಬಿಗೇರಿ, ಭೀಮಪ್ಪ, ಮಹೇಶ, ಸವಿತಾ, ನೇತ್ರಾ, ಗ್ರಾಪಂ ಸರ್ವಸದಸ್ಯರು, ಗುರು-ಹಿರಿಯರು, ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next