Advertisement

ಹೈ ಟೆನ್ಶನ್ ತಂತಿ ಸಹಿತ ಮರದ ಗೆಲ್ಲು ಬಿದ್ದು ಸವಾರರು ಗಂಭೀರ; ಬೈಕ್‌ ಭಸ್ಮ

09:29 AM Jul 04, 2019 | keerthan |

ಎಡಪದವು: ಹಲಸಿನ ಮರದ ಗೆಲ್ಲು ಹೈ ಟೆನ್ಶನ್ ವಿದ್ಯುತ್‌ ತಂತಿಗಳ ಮೇಲೆ ಬಿದ್ದ ಪರಿಣಾಮ, ತಂತಿ ಸಹಿತ ವಿದ್ಯುತ್‌ ಕಂಬಗಳು ಬೈಕ್‌ ಮೇಲೆ ಬಿದ್ದು ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಎಡಪದವು ಕಣ್ಣೋರಿ ಸಮೀಪದ ಐಡಿಯಲ್‌ ಶಾಲಾ ಹಿಂಭಾಗದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ. ಬೈಕ್‌ ಸುಟ್ಟು ಭಸ್ಮವಾಗಿದೆ.

Advertisement

ಲೈನ್‌ಮನ್‌ ಆಗಿರುವ ಬಾಗಲಕೋಟೆ ಮೂಲದ ದರಿಯಪ್ಪ ಹಾಗೂ ಕರಿಯಪ್ಪ ಗಾಯಾಳುಗಳು. ಇವರು ಎಡಪದನಿಂದ ಮುಚ್ಚಾರಿಗೆ ಸಾಗುವ ರಸ್ತೆಯಲ್ಲಿ ದುರಂತ ಸಂಭವಿಸಿದೆ.

ಕೈಕಂಬದ ಮೆಸ್ಕಾಂನ ದರಿಯಪ್ಪ ಹಾಗೂ ಎಡಪದವು ಮೆಸ್ಕಾಂನ ಕರಿಯಪ್ಪ ಅವರು ಕೆಲಸ ಮುಗಿಸಿ ಒಂದೇ ಬೈಕಿನಲ್ಲಿ ಮುಚ್ಚಾರಿನಲ್ಲಿರುವ ತಮ್ಮ ರೂಮಿಗೆ ತೆರಳುತ್ತಿದ್ದರು. ಬೈಕ್‌ ಮೆಲ್ವಿನ್‌ ಎಂಬವರ ಮನೆ ಸಮೀಪಕ್ಕೆ ಬರುತ್ತಿದ್ದಂತೆ ಹಲಸಿನಹಣ್ಣು ಗಳಿಂದ ತುಂಬಿದ್ದ ಗೆಲ್ಲು ಹೈ ಟೆನ್ಶನ್ ತಂತಿ ಮೇಲೆ ಬಿದ್ದು ದುರಂತ ಸಂಭವಿಸಿದೆ.

ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಜಪೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next