Advertisement

Rain ನೀರಿಲ್ಲದೆ ಕಂಗೆಟ್ಟಿದ್ದ ಭತ್ತದ ಕೃಷಿಕರು ಕೊಂಚ ನಿರಾಳ; 3 ದಿನ ಎಲ್ಲೋ ಅಲರ್ಟ್‌

12:32 AM Sep 06, 2023 | Team Udayavani |

ಬೆಳ್ತಂಗಡಿ: ಕಳೆದ ಒಂದು ತಿಂಗಳಿನಿಂದ ಮಳೆಯಿಲ್ಲದೆ ಕಂಗಾಲಾಗಿದ್ದ ಭತ್ತದ ಕೃಷಿಕರು ಕೊಂಚ ನಿರಾಳರಾಗಿದ್ದು, ಮುಂದೆ ನಿರಂತರ ಮಳೆ ಸುರಿದರೆ ಮಾತ್ರ ಕೃಷಿಗೆ ಸಹಕಾರಿಯಾಗುವ ಜತೆಗೆ ಅಂತರ್ಜಲ ವೃದ್ಧಿಗೆ ನೆರವಾಗಲಿದೆ ಎನ್ನಲಾಗಿದೆ.

Advertisement

ಕೆಲವು ಕಡೆಗಳಲ್ಲಿ ಮಳೆಯನ್ನು ನಂಬಿ ಬಹುತೇಕ ಕೃಷಿಕರು ಈಬಾರಿ ರಬ್ಬರ್‌ ಕೃಷಿ ಕಡಿದು ಅಡಿಕೆ ಕೃಷಿ ಮಾಡಿದ್ದರು. ಆದರೆ ಬಿಸಿಲಿನ ಬೇಗೆಗೆ ಹೆಚ್ಚಿನ ಕಡೆ ಅಡಿಕೆ ಸಸಿ ಹಳದಿ ಬಣ್ಣಕ್ಕೆ ತಿರುಗಿದೆ. ಮಳೆ ಮಾಯವಾಗುವ ಸಾಧ್ಯತೆಗಳ ನಡುವೆಯೇ ಮತ್ತೆ ವರುಣ ಕೃಪೆ ತೋರಿದ್ದರಿಂದ ಕೃಷಿಕರು ಕೊಂಚ ನಿರಾಳವಾಗಿದ್ದಾರೆ.

3 ದಿನ ಎಲ್ಲೋ ಅಲರ್ಟ್‌
ಭಾರತೀಯ ಹವಾಮಾನ ಇಲಾಖೆಯು ಕರಾವಳಿಯಲ್ಲಿ ಮೂರು ದಿನಗಳ ಕಾಲ “ಎಲ್ಲೋ ಅಲರ್ಟ್‌’ ಘೋಷಿಸಿದೆ.

ಬುಧವಾರ ಹೊರತುಪಡಿಸಿ, ಸೆ. 7ರಿಂದ 9ರ ವರೆಗೆ ಎಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next