Advertisement
ಜ್ಞಾನದ ಪ್ರಯೋಜನ ಪಡೆಯುತ್ತಿರುವುದರಲ್ಲಿ ನಿಸ್ಸೀಮರೇ ಆಗಿದ್ದು ಮುಂಚೂಣಿಯಲ್ಲಿದ್ದಾರೆ. ಇದು ಸ್ವಾಗತಾರ್ಹ. ಇದಾವುದನ್ನೂ ಅಷ್ಟಾಗಿ ತಿಳಿಯದ ರೈತ ಕೇವಲ ನ್ಯಾಯಯುತ ಬೆಲೆಯೊಂದನ್ನು ಬೇಡುತ್ತಲೇ ಇದ್ದಾನೆ. ಪ್ರೊ| ಎಂ.ಎಸ್. ಸ್ವಾಮಿನಾಥನ್ ಅವರು ವೈಜ್ಞಾನಿಕವಾಗಿ ಬೆಲೆ ನಿಗದಿ ಮಾಡುವ ಸೂತ್ರಗಳನ್ನು ತಮ್ಮ ವರದಿಯಲ್ಲಿ ಸೂಚಿಸಿ ಜಾರಿಗೆ ತರಲು ಶಿಫಾರಸ್ಸು ಮಾಡಿ ದಶಕಗಳೇ ಕಳೆದಿವೆ. ಆದರೆ ವೈಜ್ಞಾನಿಕ ಬೆಲೆ ಇಂದಿಗೂ ಕನಸಾಗಿಯೇ ಉಳಿದಿದೆ. ಈ ಹಿನ್ನೆಲೆಯಲ್ಲಿ ರೈತರ ಒಂದಿಷ್ಟು ಸತ್ಯಾಂಶಗಳನ್ನು ಓದುಗರಿಗೆ ಪರಿಚಯಿಸುವ ಪ್ರಾಮಾಣಿಕ ಪ್ರಯತ್ನ ಇದಾಗಿದೆ.
ಗಳ ಬೇಡಿಕೆ ಪೂರೈಸುವ ಸಂಪ್ರದಾಯ ಇಟ್ಟುಕೊಂಡು ಬಂದಿರುವ ಮನುಕುಲದ ಏಕೈಕ ಜೀವಿ ಎಂದರೆ “ರೈತ’. ಈ ಯೋಗಿ ಇಲ್ಲದೇ ಜಗತ್ತಿನಲ್ಲಿ ಏನೊಂದೂ ನಡೆಯಲಾರದು. ಅದರಲ್ಲೂ ಭಾರತದ ರೈತ/ಅನ್ನದಾತ, ಕಾಯಕ ಯೋಗಿ ಮತ್ತು ಅವನ ದುಡಿಮೆಯೇ ನಿಸ್ವಾರ್ಥ ಕಾಯಕಕ್ಕಾಗಿ ಎಂಬುದನ್ನು ಯಾರೇ ಆದರೂ ಅಲ್ಲಗಳೆಯುವಂತಿಲ್ಲÉ. ಅಧ್ಯಾತ್ಮದ ಚೌಕಟ್ಟಿನಲ್ಲಿ ದುಡಿಯುವುದು. ದುಡಿಮೆಯಿಂದ ಫಲಿಸಿದ ಆಹಾರ ಮತ್ತು ಆಹಾರೇತರ ಪದಾರ್ಥಗಳನ್ನು ಬಳಸಿ ಜನ, ಜಾನುವಾರುಗಳ ಹೊಟ್ಟೆ ತುಂಬಿಸು ವುದೇ ಅವನ ಸಂಪ್ರದಾಯ ಹಾಗೂ ಇಂದಿಗೂ ಅವನ ಪ್ರಥಮ ಆದ್ಯತೆಯಾಗಿದೆ. ಅದೇ ಅವನ ತೃಪ್ತಿ – ಸಂತೃಪ್ತಿಯ ಏಕೈಕ ಮೂಲ ಸೆಲೆಯಾಗಿದೆ. ಹಾಗಾಗಿ ಅವನಿಗೆ ಇತರ ವಿಷಯಗಳತ್ತ ಗಮನ ಹರಿಸುವ ಅವಕಾಶಗಳೇ ಇಲ್ಲ.
Related Articles
Advertisement
ರೈತರು ತಾವು ಉತ್ಪಾದಿಸಿದ ಯಾವುದೇ ಸರಕುಗಳನ್ನು ಒತ್ತಡದ ಮಾರಾಟದ ಪಿಡುಗಿನಿಂದ ವಿಮುಕ್ತಗೊಳಿಸಿ, ಅದಕ್ಕಾಗಿ ಅವಶ್ಯವಿರುವ “ಕೋಲ್ಡ್ ಚೈನ್’ ಸೌಲಭ್ಯಗಳನ್ನು ಅವಶ್ಯವಿರುವ ಎಲ್ಲಾ ಪಂಚಾಯತಿಗಳಲ್ಲಿ ಕಲ್ಪಿಸಬೇಕು. ಸಾಲ ಸೌಲಭ್ಯ ಸುಲಭವಾಗಿ ಸಾರ್ವಜನಿಕ ಬ್ಯಾಂಕುಗಳಿಂದ ದೊರಕುವಂತೆ ಮಾಡಿ ಖಾಸಗಿ ಲೇವಾದೇವಿಯವರ ಸುಲಿಗೆ, ಶೋಷಣೆ ಯಿಂದ ಪಾರು ಮಾಡಬೇಕು.
ವೈಜ್ಞಾನಿಕವಾಗಿ ಪರವಾನಗಿ ಪಡೆದಿರುವ ತಾಂತ್ರಿಕತೆಯನ್ನು ರೈತರು ಅಳವಡಿಸಿ ಅದರಿಂದ ಲಾಭ ಪಡೆಯುವಂತೆ ಬೇಕಾದ ನೀತಿ ನಿಯಮಗಳನ್ನು ರೂಪಿಸಬೇಕು. ಬಿ.ಟಿ. ಹತ್ತಿ, ಗಿಡ್ಡ ಭತ್ತ ಮತ್ತು ಗೋಧಿ ತಳಿಗಳಿಂದ ದೊರಕಿದ ಲಾಭ (ಹಸಿರು ಕ್ರಾಂತಿ), ಈಗೀಗ ಪ್ರಚಾರಕ್ಕೆ ಬರುತ್ತಿರುವ ಸಿರಿ ಧಾನ್ಯಗಳಲ್ಲೂ ಅಭಿವೃದ್ಧಿ ಪಡಿಸಿ ರೈತರ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಸಾಕಷ್ಟು ಸಂಶೋಧನಾ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಿ, ಅಧಿಕ ಇಳುವರಿ ತಳಿಗಳನ್ನು ಜನಪ್ರಿಯಗೊಳಿಸ ಬೇಕು. ಇತ್ತೀಚೆಗೆ ಸಾಂದ್ರ ಬೇಸಾಯ ಪದ್ಧತಿ, ಬಹು ಬೆಳೆ ಪದ್ಧತಿ. ಅಧಿಕ ಇಳುವರಿ ಪದ್ಧತಿಗಳಿಂದ ಸಾರವನ್ನು ಕಳೆದು ಕೊಳ್ಳುತ್ತಿ ರುವ ಮಣ್ಣಿನ ಫಲವತ್ತೆಯನ್ನು ಕಾಪಾಡಲು ಬೇಕಾದ ತಾಂತ್ರಿಕತೆಗಳ ಸಂಶೋಧನೆಗೆ ಆದ್ಯತೆ ನೀಡಿ ಪ್ರೋತ್ಸಾಹಿಸಬೇಕು.
ಶತಮಾನಗಳಿಂದ ರೈತರು ಸಾರ್ವಜನಿಕರ ಹಣ ಬಳಸದೇ ತಾವೇ ಸಂಶೋಧಿಸಿರುವ ಅನೇಕ ತಾಂತ್ರಿಕತೆಗಳ ಖಜಾನೆ ನಮ್ಮ ದೇಶ. 2010ರಲ್ಲಿ ಸುತ್ತೂರಿನಲ್ಲಿ ನಡೆದ 200 ರಾಷ್ಟ್ರ ಪ್ರಶಸ್ತಿ ವಿಜೇತ ರೈತರ ಸಮ್ಮೇಳನದಲ್ಲಿ ತಿಳಿದು ಬಂದ ಸತ್ಯಾಂಶ. ಇದಕ್ಕೆ ಭಾರತೀಯ ಕೃಷಿ ಸಂಶೋಧನಾ ಪರಿಷತ್ತು ರಾಷ್ಟ್ರದ ಎಲ್ಲಾ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಹಾಗೂ ಸುತ್ತೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ದೊರಕುವ ದಾಖಲೆಗಳೇ ಸಾಕ್ಷಿ. ಇದಾವುದರ ಕಡೆ ಸಂಬಂಧಪಟ್ಟವರು ಮತ್ತು ಮಾಧ್ಯಮಗಳು ಅಷ್ಟೊಂದು ಗಂಭೀರವಾಗಿ ಗಮನಹರಿಸಿ ಪ್ರಚಾರಕ್ಕೆ ತರದಿರುವುದು ದುರದೃಷ್ಟಕರ ಸಂಗತಿಯಾಗಿದೆ. ಇವುಗಳನ್ನು ಸಹ ವೈಜ್ಞಾನಿಕವಾಗಿ ಪರಿಶೀಲಿಸಿ ಸಾಕಷ್ಟು ಪ್ರಚಾರಗೊಳಿಸಿ ಜನಪ್ರಿಯಗೊಳಿಸಿ ಅವುಗಳ ಪ್ರಯೋಜನ ಪಡೆದುಕೊಳ್ಳಲು ಇದೀಗ ಪರ್ವಕಾಲ.
ಮಾಡಬೇಕಿರುವ ಕೆಲಸವನ್ನೇ ಮರೆತಿರುವ ವಿಸ್ತರಣಾ ವ್ಯವಸ್ಥೆಯನ್ನು ಸಾಕಷ್ಟು ಬಂಡವಾಳ ಒದಗಿಸಿ ಇಡೀ ವ್ಯವಸ್ಥೆಯನ್ನೇ ಪುನರಚಿಸಿ ಹೆಚ್ಚು ಪರಿಣಾಮಕಾರಿಯಾಗಿ ತಾಂತ್ರಿಕತೆ ಬದಲಾಯಿಸಲು ಆದ್ಯತೆ ಕೊಡಬೇಕು.
ದುರ್ಬಲಗೊಂಡಿರುವ ರೈತ ಸಂಘಟನೆಗಳನ್ನು 1970-80ರ ದಶಕದಲ್ಲಾದಂತೆ ಪುನರ್ ಸಂಘಟಿಸಿ ಅರ್ಥಪೂರ್ಣವಾಗಿ ಪ್ರಣಾಳಿಕೆಗಳನ್ನು ರಚಿಸಿ ಅನುಭಾವಿ ಮತ್ತು ಕೃಷಿ ವಿಜ್ಞಾನಿಗಳನ್ನು ಸದಸ್ಯರುಗಳನ್ನಾಗಿ ಮಾಡಿ ಅವರ ಸಲಹೆಗಳನ್ನು ಪಡೆಯಬೇಕು.
ರೈತರು ಇದೀಗ ಮಾರುಕಟ್ಟೆಯನ್ನು ಗಮನಿಸಿ ವೈವಿಧ್ಯಮಯ ಬೆಳೆ ಬೆಳೆಯುವುದನ್ನು ರೂಢಿಸಿಕೊಳ್ಳಬೇಕು. ಬೆಳೆ ಇದ್ದಾಗ ಬೆಲೆಯಿಲ್ಲ. ಬೆಲೆಯಿದ್ದಾಗ ಬೆಳೆಯಿಲ್ಲ ಎನ್ನುವ ಸಮಸ್ಯೆಗೆ ಇದುವೆ ಪರ್ಯಾಯ. ರೈತರು ಒಂದು ಅಥವಾ ಕೆಲವೇ ಬೆಳೆಗಳ ಮೇಲೆ ಅವಲಂಬಿತರಾಗದೆ ಬಹು ಬೆಳೆ, ಸಮಗ್ರ ಬೇಸಾಯ ಪದ್ಧತಿ ಅಳವಡಿಸುವುದು ಸೂಕ್ತ. ಅದರಲ್ಲೂ ಪಶು ಸಂಗೋಪನೆ, ರೇಷ್ಮೆ, ಮೀನುಗಾರಿಕೆ ಹೀಗೆ ಸಾಧ್ಯವಿರುವ ಉಪ ಕಸುಬುಗಳನ್ನು ಒಳಗೊಂಡ ಸಾಂಪ್ರ ದಾಯಿಕ ಕೃಷಿಗೆ ಆಧುನಿಕ ತಂತ್ರಜ್ಞಾನಗಳ ಬಳಕೆಯನ್ನೂ ಸೇರಿಸಿಕೊಳ್ಳುವಂತಾಗಬೇಕು.
ಈಗಿನ ಸ್ಥಿತಿಯಲ್ಲಿ ರೈತ ಸಂಘಟನೆಗಿಂತ ಪ್ರಭಾವ ಬೀರಬಲ್ಲ ಯಾವುದೇ ಶಕ್ತಿ ಇಲ .É”ಫಾರ್ಮರ್ ಪವರ್’ ಬಳಸಿ ರೈತ ಸಂಘಟನೆಯಾದಾಗ ಮಾತ್ರ ರೈತರ ಈಗಿನ ಸ್ಥಿತಿಯನ್ನು ಸುಧಾರಿಸಲು ಸಾಧ್ಯ. “ಫಾರ್ಮರ್ ಪವರ್’ಅಂದರೆ ಇದುವರೆಗೂ ಬಳಕೆಯಾಗದೇ ಇರುವ ರೈತರಲ್ಲಿ ಅಡಗಿರುವ ಸಾಮರ್ಥ್ಯ ಒಂದಿದೆ. ಅದನ್ನು ಈಗ ಪ್ರಯೋಗಿಸಬೇಕಾಗಿದೆ. ಪ್ರಯೋಗಿಸಿ ಪ್ರಮಾಣೀಕರಿಸಬೇಕಾಗಿದೆ.
ಪ್ರೊ| ಎಂ. ಮಹದೇವಪ್ಪ