Advertisement

ಇನ್ನೂ ಹಿಂಪಡೆಯದ ವಿವಾದಿತ ಸುತ್ತೋಲೆ ಅಲ್ಪಸಂಖ್ಯಾತ ಸಮುದಾಯ

07:15 AM Feb 07, 2018 | |

ಬೆಂಗಳೂರು: ಅಲ್ಪಸಂಖ್ಯಾತ ಸಮುದಾಯದವರ ವಿರುದ್ದದ ಪ್ರಕರಣ ವಾಪಸ್‌ ಪಡೆಯುವ ಸುತ್ತೋಲೆ ಮತ್ತೆ ವಿವಾದಕ್ಕೆ ಕಾರಣವಾಗಿದೆ. ಈ ಸುತ್ತೋಲೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದರಿಂದ ಅದನ್ನು ವಾಪಸ್‌ ಪಡೆದಿರುವುದಾಗಿ ಹೇಳಿದ್ದ ಸರ್ಕಾರ ಇದೀಗ ಮತ್ತೆ ಸುತ್ತೋಲೆ ವಾಪಸ್‌ ಪಡೆದಿಲ್ಲ ಎಂದು ಹೇಳಿದೆ. ಕೋಮುಗಲಭೆಗೆ ಜಾತಿ-ಧರ್ಮ ಅಡ್ಡ ಬರುವುದಿಲ್ಲ. ಕೇಸ್‌ ವಾಪಸ್‌ಗೆ ಸಂಬಂಧಿಸಿದಂತೆ ಕಣ್ತಪ್ಪಿನಿಂದ ಸುತ್ತೋಲೆಯಲ್ಲಿ “ಅಲ್ಪ ಸಂಖ್ಯಾತ’ ಸಮುದಾಯ ಎಂದಾಗಿದೆ. ಈ ಸುತ್ತೋಲೆ ವಾಪಸ್‌ ಪಡೆದು ಎಲ್ಲಾ ಮುಗ್ದ ಜನರ ವಿರುದ್ದ ಎಂದು ಬದಲಾಯಿಸಿ ಸುತ್ತೋಲೆ ಹೊರಡಿಸಲಾಗಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಜ. 27ರಂದು ಹೇಳಿದ್ದರು. ಆದರೆ, ಮಂಗಳವಾರ ವಿಧಾನಸಭೆಯಲ್ಲಿ ಪ್ರತಿಪಕ್ಷ ಬಿಜೆಪಿ ಸುತ್ತೋಲೆ ವಾಪಸ್‌ ಪಡೆದ ಬಗ್ಗೆ ಮಾಹಿತಿ ಕೇಳಿದಾಗ, ಸುತ್ತೋಲೆ ವಾಪಸ್‌ ಪಡೆದಿಲ್ಲ. ಇತರ ಅಮಾಯಕರ ವಿರುದ್ದದ ಕೇಸ್‌ಗಳನ್ನು ವಾಪಸ್‌ ಪಡೆಯುವಂತೆ ಮನವಿ ಬಂದರೆ ಪರಿಶೀಲಿಸುವುದಾಗಿ ಹೇಳಿದ್ದಾರೆ.

Advertisement

ಸದನದಲ್ಲಿ ಸಚಿವರು ನೀಡಿದ ಈ ಹೇಳಿಕೆಯಿಂದ ಆಕ್ರೋಶ  ಗೊಂಡ ಬಿಜೆಪಿ ಸದಸ್ಯರು, ಕೂಡಲೇ ಸುತ್ತೋಲೆ ವಾಪಸ್‌ ಪಡೆದು ಎಲ್ಲಾ ಸಮುದಾಯಗಳ ಮುಗಟಛಿರ ವಿರುದಟಛಿ ದಾಖಲಿಸಿರುವ ಕೇಸ್‌ಗಳನ್ನು ವಾಪಸ್‌ ಪಡೆಯುವ ಕುರಿತು ಸುತ್ತೋಲೆ ಹೊರಡಿಸಬೇಕೆಂದು ಆಗ್ರಹಿಸಿದರು. ಅಲ್ಲದೆ, ಈ ಸರ್ಕಾರದ ಅಲ್ಪಸಂಖ್ಯಾತರ ತುಷ್ಠಿಕರಣ ನೀತಿಯಿಂದ ಜಾತಿ ಕಲಹ, ಕೋಮು ವೈಷಮ್ಯ ಉಂಟಾಗುತ್ತಿದೆ. ಜಾತಿ, ಧರ್ಮಗಳಲ್ಲಿ ಒಡಕು ಮೂಡಿಸುವ ಬದಲು ಎಲ್ಲರನ್ನೂ ಒಂದೇ ರೀತಿ ನೋಡಬೇಕು ಎಂದು ಒತ್ತಾಯಿಸಿದರು. ಮಧ್ಯಪ್ರವೇಶಿಸಿದ ಗೃಹ ಸಚಿವ ರಾಮಲಿಂಗಾರೆಡ್ಡಿ ಸುತ್ತೋಲೆ ವಾಪಸ್‌ ಪಡೆಯುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದರು. ಅದನ್ನು ಸದನದಲ್ಲಿ ಹಾಜರುಪಡಿಸುವಂತೆ ಜಗದೀಶ ಶೆಟ್ಟರ್‌
ಆಗ್ರಹಿಸಿದರು. ಈ ಬಗ್ಗೆ ನಂತರ ಮಾಹಿತಿ ನೀಡುವುದಾಗಿ ಸಚಿವರು ಹೇಳಿದರು.

ನಂತರ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಇದೇ ವಿಚಾರ ಪ್ರಸ್ತಾಪಿಸಿದಾಗ, ಸಂಪುಟ ಉಪಸಮಿತಿಗೆ ಬಂದ ಮನವಿ ಯನ್ನು ಅದು ಗೃಹ ಇಲಾಖೆಗೆ ಕಳುಹಿಸಿಕೊಟ್ಟಿತ್ತು. ಅದರಂತೆ ಕೋಮು ಗಲಭೆ ಗಳಲ್ಲಿ ಮತ್ತು ಇತರೆ ಪ್ರಕರಣಗಳಲ್ಲಿ ಮುಗಟಛಿ ಅಲ್ಪಸಂಖ್ಯಾತ ಸಮುದಾಯದವರ ವಿರುದಟಛಿ ದಾಖಲಾಗಿರುವ ಪ್ರಕರಣ ಗಳನ್ನು ಅಭಿಯೋಜನೆಯಿಂದ ಹಿಂಪಡೆಯುವ ಬಗ್ಗೆ ಸುತ್ತೋಲೆ ಹೊರಡಿಸಲಾಗಿದೆ. ಈ ಸುತ್ತೋಲೆ ವಾಪಸ್‌  ಪಡೆದಿಲ್ಲ. ಬಿಜೆಪಿ, ಆರ್‌ಎಸ್‌ಎಸ್‌, ಹಿಂದೂ ಸಂಘಟನೆಗಳು ಹೀಗೆ ಯಾವುದೇ ಸಮುದಾಯದವರಿರಲಿ, ಆ ಸಮುದಾಯದ ಮುಗಟಛಿರ ವಿರುದ್ದದ ಪ್ರಕರಣಗಳನ್ನು ವಾಪಸ್‌ ಪಡೆಯುವಂತೆ ಮನವಿ ಬಂದರೆ ಅದನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದರು. ಇದರಿಂದ ಸದನದಲ್ಲಿ ಕೋಲಾಹಲ ಸೃಷ್ಟಿಯಾಗಿ  ದ್ದರಿಂದ ಸ್ಪೀಕರ್‌ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. 

ಕಾನೂನು ಸುವ್ಯವಸ್ಥೆಗೆ ಕುರಿತಂತೆ ಗೃಹ ಸಚಿವರು ನೀಡಿದ ಉತ್ತರದಿಂದ ಅಸಮಾಧಾನಗೊಂಡು ಸಭಾಧ್ಯಕ್ಷರ ಪೀಠದ ಎದುರು ಧರಣಿ ಆರಂಭಿಸಿದ ಬಿಜೆಪಿ ಸದಸ್ಯರು ಮತ್ತೆ ಸುತ್ತೋಲೆ ವಿಚಾರ ಪ್ರಸ್ತಾಪಿಸಿ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿದರು. ಸರ್ಕಾರ ಸುತ್ತೋಲೆ ವಾಪಸ್‌
ಪಡೆಯದೇ ಇದ್ದಲ್ಲಿ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಗೃಹ ಸಚಿವರ ಬದಲಾದ ಹೇಳಿಕೆ
ಅಂದು
ಈ ಹಿಂದೆ 2017ರ ಡಿಸೆಂಬರ್‌ 22ರಂದು ಹೊರಡಿಸಿದ್ದ ಸುತ್ತೋಲೆಯಲ್ಲಿ ಕಣ್‌ತಪ್ಪಿನಿಂದ ಅಲ್ಪಸಂಖ್ಯಾತ ಸಮುದಾಯ ಎಂದಾಗಿದೆ.
ಸುತ್ತೋಲೆಯಲ್ಲಿದ್ದ “ಕೋಮು ಗಲಭೆ ಗಳಲ್ಲಿ ಮತ್ತು ಇತರೆ ಪ್ರಕರಣ ಗಳಲ್ಲಿ ಮುಗ್ದ ಅಲ್ಪಸಂಖ್ಯಾತ ಸಮುದಾಯದವರ ವಿರುದಟಛಿ ದಾಖ
ಲಾಗಿರುವ ಪ್ರಕರಣ ಗಳನ್ನು ಅಭಿಯೋಜನೆಯಿಂದ ಹಿಂಪಡೆ ಯುವ ಬಗ್ಗೆ’ ಎಂದಿದ್ದ ವಾಕ್ಯವನ್ನು “ಕೋಮು ಗಲಭೆಗಳಲ್ಲಿ ಮತ್ತು ಇತರೆ
ಪ್ರಕರಣಗಳಲ್ಲಿ ಮುಗ್ದ ಜನರ ವಿರುದ್ದ ದಾಖಲಾಗಿರುವ ಪ್ರಕರಣಗಳನ್ನು ಅಭಿಯೋಜನೆಯಿಂದ ಹಿಂಪಡೆ ಯುವ ಬಗ್ಗೆ’ ಎಂದು ಬದಲಾಯಿಸಿ
ಹೊಸದಾಗಿ ಶನಿವಾರ ಸುತ್ತೋಲೆ ಹೊರಡಿಸಲಾಗಿದೆ.

Advertisement

ಇಂದು
ಅಲ್ಪಸಂಖ್ಯಾತರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಕುರಿತು ನ್ಯಾ.ಸಾಚಾರ್‌ ಸಮಿತಿ ವರದಿ ಜಾರಿ ಕುರಿತು ಸಚಿವ ರಮೇಶ್‌ಕುಮಾರ್‌ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚಿಸಲಾಗಿತ್ತು. ಈ ಮಧ್ಯೆ ಕೆಲವರು ಕೋಮು ಗಲಭೆಗೆ ಸಂಬಂಧಿಸಿದಂತೆ ಅಮಾಯಕ ಅಲ್ಪಸಂಖ್ಯಾತರ ವಿರುದಟಛಿ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಸಂಪುಟ ಉಪಸಮಿತಿ ಗೃಹ ಇಲಾಖೆಗೆ ಕಳುಹಿಸಿತ್ತು. ಅದರಂತೆ ಕೋಮು ಗಲಭೆ ಗಳಲ್ಲಿ ಮತ್ತು ಇತರೆ ಪ್ರಕರಣಗಳಲ್ಲಿ ಮುಗ್ದ ಅಲ್ಪಸಂಖ್ಯಾತ ಸಮುದಾಯದವರ ವಿರುದ್ದ ದಾಖಲಾಗಿರುವ ಪ್ರಕರಣ ಗಳನ್ನು ಅಭಿಯೋಜನೆ ಯಿಂದ ಹಿಂಪಡೆಯುವ ಬಗ್ಗೆ ಮಾಹಿತಿ ಕೇಳಿ ಸುತ್ತೋಲೆ ಹೊರಡಿಸಲಾಗಿತ್ತು. ಈ ಸುತ್ತೋಲೆ ಹಿಂಪಡೆದಿಲ್ಲ. ಬೇರೆಯವರೂ ಕೂಡ ಈ ಕುರಿತು ಮನವಿ ಸಲ್ಲಿಸಿದರೆ ಅದನ್ನು ಪರಿಗಣಿಸಲಾಗುವುದು ಎಂದು ಗೃಹ ಸಚಿವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next