Advertisement

ಬಿಜೆಪಿಯಿಂದ ಅಭಿವೃದ್ಧಿಯ ಸಂಕಲ್ಪ: ಸಿ.ಟಿ.ರವಿ

12:26 AM Apr 09, 2019 | Lakshmi GovindaRaju |

ಬೆಂಗಳೂರು: ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದೇ ಕನಸಾಗಿರುವಾಗ ಪ್ರಣಾಳಿಕೆ ಹೇಗೆ ಜಾರಿ ಮಾಡುತ್ತದೆ? ಕಾಂಗ್ರೆಸ್‌ನದ್ದು ಭರವಸೆಯಾದರೆ, ಬಿಜೆಪಿಯದ್ದು ಸಂಕಲ್ಪವಾಗಿದೆ. ಕಾಂಗ್ರೆಸ್‌ಗೆ ಓಟ್‌ ಮೊದಲು, ಬಿಜೆಪಿಗೆ ದೇಶ ಮೊದಲು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

Advertisement

ರಾಜ್ಯ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಸುಳ್ಳು ಭರವಸೆಗಳನ್ನು ನೀಡುತ್ತಾ ಜನರನ್ನು ಮರಳು ಮಾಡಿ ಮತಗಿಟ್ಟಿಸಿಕೊಳ್ಳುವ ಯತ್ನದಲ್ಲಿ ತೊಡಗಿದೆ.

ಆದರೆ, ಬಿಜೆಪಿ ಚುನಾವಣೆಗೂ ಮುನ್ನ ನೀಡಿದ್ದ ಭರವಸೆಗಳ ಪೈಕಿ ಶೇ.90ರಷ್ಟು ಈಡೇರಿಸಿದೆ. ಕಾಂಗ್ರೆಸ್‌ ಅನೇಕ ಭರಸೆಗಳನ್ನು ನೀಡಿದೆ. ಆದರೆ, ಕಾಂಗ್ರೆಸ್‌ 100ರ ಗಡಿ ದಾಟುವುದಿಲ್ಲ ಎಂಬ ಮುನ್ಸೂಚನೆ ದೊರೆಯುತ್ತಿವೆ ಎಂದು ಹೇಳಿದರು.

ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ದೇಶದ್ರೋಹ ಕಾನೂನು ರದ್ದು ಹಾಗೂ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ವಾಪಸ್‌ ಪಡೆಯುವುದಾಗಿ ಹೇಳಲಾಗಿದೆ. ಆದರೆ, ಬಿಜೆಪಿ ಪ್ರಣಾಳಿಕೆಯಲ್ಲಿ ಭಯೋತ್ಪಾದನೆ ಬಗ್ಗೆ ಶೂನ್ಯ ಸಹನೆ ನಿಲುವು ಪ್ರಕಟಿಸಿದ್ದು, ಸೇನೆಯ ಸಶಸ್ತ್ರೀಕರಣಕ್ಕೆ ವಿಶೇಷ ಒತ್ತು ನೀಡಲಾಗಿದೆ.

ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಸಂವಿಧಾನದ 370ನೇ ಹಾಗೂ 35″ಎ’ ವಿಧಿಗಳನ್ನು ಹಿಂತೆಗೆದುಕೊಳ್ಳುವ ದಿಟ್ಟ ನಿಲುವು ತೆಗೆದುಕೊಳ್ಳಲಾಗಿದೆ. ಪ್ರತ್ಯೇಕತಾವಾದವನ್ನು ಬೇರು ಸಮೇತ ಕಿತ್ತು ಹಾಕುವ ಸಂಕಲ್ಪ ಮಾಡಲಾಗಿದೆ ಎಂದು ಹೇಳಿದರು.

Advertisement

ರಾಮನ ಬಗ್ಗೆ ಅಸಹನೆ ಬಿಟ್ಟಿಲ್ಲ: ರಾಮಮಂದಿರ ನಿರ್ಮಾಣ ಬಿಜೆಪಿ ಸಂಕಲ್ಪವಾಗಿದೆ. ಕಾಂಗ್ರೆಸ್‌ ಪಕ್ಷ ರಾಮಮಂದಿರ ನಿರ್ಮಾಣ ಕುರಿತ ವಿಚಾರಣೆಗೆ ತಡೆ ಒಡ್ಡುತ್ತಿದೆ. ಸಿದ್ದರಾಮಯ್ಯ ಅವರು ರಾಮನ ಬಗ್ಗೆ ಏನೇನೋ ಮಾತಾಡ್ತಾರೆ. ಸಿದ್ದರಾಮಯ್ಯ ಅವರು ರಾಮನ ಬಗ್ಗೆ ಅಸಹನೆ ಬಿಟ್ಟಿಲ್ಲ. ಅವರ ಬ್ರೈನ್‌ ಸಾಫ್ಟ್ವೇರ್‌ಗೆ ವೈರಸ್‌ ಅಟ್ಯಾಕ್‌ ಆಗಿದೆ ಎಂದು ಸಿ.ಟಿ.ರವಿ ಕಿಡಿಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next