Advertisement

ದರ ಕುಸಿತ: ಟೊಮೆಟೋ ರಸ್ತೆಗೆ ಚೆಲ್ಲಿ ಆಕ್ರೋಶ

06:00 AM Aug 01, 2018 | |

ಕೊಪ್ಪಳ: ಜಿಲ್ಲೆಯಲ್ಲಿ ಟೊಮೆಟೋ ದರ ಏಕಾಏಕಿ ಕುಸಿತವಾಗಿದ್ದರಿಂದ ರೈತರು ಮಾರುಕಟ್ಟೆಗೆ ತಂದ ಟೊಮೆಟೋ ಬುಟ್ಟಿಗಳನ್ನು ರಸ್ತೆ ಮೇಲೆ ಚೆಲ್ಲಿ ಬರಿಗೈ ಯಲ್ಲಿ ಮನೆಗೆ ಹಿಂದಿರುಗುತ್ತಿದ್ದಾರೆ. ನೀರಾವರಿ ಪ್ರದೇಶದ ರೈತರು ಮೆಕ್ಕೆಜೋಳ ಸೇರಿ ಇತರೆ ಬೆಳೆ ಬೆಳೆಯುವುದನ್ನು ಬಿಟ್ಟು ತರಕಾರಿ ಬೆಳೆದರೆ ಕೈ ತುಂಬ ಲಾಭ ದೊರೆಯಲಿದೆ ಎಂದು ಬದನೆಕಾಯಿ, ಹಿರೇಕಾಯಿ, ಟೊಮೆಟೋ, ಮೆಣಸಿನಕಾಯಿ ಸೇರಿ ಇತರೆ ತರಕಾರಿ ಬೆಳೆಯುತ್ತಿದ್ದಾರೆ. ಆದರೆ, ಟೊಮೆಟೋ ದರ ಭಾರಿ ಕುಸಿತ ಕಂಡಿದೆ. 3 ತಿಂಗಳಿಂದ ದರದಲ್ಲಿ ಸುಧಾರಣೆ ಕಾಣುತ್ತಿಲ್ಲ. ಕೊಪ್ಪಳ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಬುಟ್ಟಿಗೆ 10 ರೂ.ನಂತೆ ಖರೀದಿಸುತ್ತಿದ್ದಾರೆ. ಕಳೆದ ಬಾರಿ 300 ಹೆಕ್ಟೇರ್‌ ಪ್ರದೇಶದಲ್ಲಿ ರೈತರು ಟೊಮೆಟೋ ಬೆಳೆದಿದ್ದರು. ಆದರೆ ಈ ವರ್ಷ ಲಾಭ ಬರುತ್ತೆ ಎಂದು 500ಕ್ಕೂ ಹೆಚ್ಚು ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗಿದೆ. ಹಾಗಾಗಿ ಏಕಾಏಕಿ ದರ ಕುಸಿತ ಕಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next