Advertisement

ರೈತರ ಮೊಗದಲ್ಲಿ ಮಂದಹಾಸ ತಂದ ಕೃತಿಕಾ

10:00 AM May 22, 2019 | Suhan S |

ದೋಟಿಹಾಳ: ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಂಗಳವಾರ ಸಾಧಾರಣ ಮಳೆಯಾಗಿದ್ದು, ಬಿಸಿಲಿನ ಜಳಕ್ಕೆ ತತ್ತರಿಸಿದ್ದ ಜನಕ್ಕೆ ಕೃತ್ತಿಕಾ ಮಳೆ ತಂಪೆರೆದಿದೆ.

Advertisement

ಎರಡ್ಮೂರು ದಿನಗಳಿಂದ ಬಿಸಿಲಿನ ಕಾವು ಏರುತ್ತಲೇ ಇತ್ತು. ಮಂಗಳವಾರ ಮಧ್ಯಾಹ್ನ ಮಳೆ ಸುರಿಯಲಾರಂಭಿತು. ಗ್ರಾಮದಲ್ಲಿ ಸಂಜೆ 4ಕ್ಕೆ ಮಳೆ ಬಂದರೂ ಮಳೆ ಪ್ರಮಾಣ ಕಡಿಮೆಯಾಗಿದೆ. ಗುಡುಗು ಸಿಡಿಲಿನ ಆರ್ಭಟ ಜೋರಾಗಿತ್ತು. ಸುತ್ತಮುತ್ತ ಗ್ರಾಮಗಳಲ್ಲಿ ಗಾಳಿ, ಗುಡುಗು, ಸಿಡಿಲು ಸಹಿತ ಮಳೆಯಾಗಿದೆ. ಕೆ. ಬೋದೂರ, ಹೆಸರೂರು, ಬಿಜಕಲ್, ತಾಂಡ ಸೇರಿದಂತೆ ಸುತ್ತಮುತ್ತ ಗ್ರಾಮಗಳಲ್ಲೂ ಮಂಗಳವಾರ ಮಳೆಯಾಗಿದೆ. ಮುಂಗಾರು ಬಿತ್ತನೆಗೆ ಸಜ್ಜಾದ ರೈತರ ಮೊಗದಲ್ಲಿ ಮಳೆ ಸಂತಸ ಮೂಡಿಸಿದೆ.

ಸಿಡಿಲಿಗೆ ಎತ್ತು ಬಲಿ: ಮಂಗಳವಾರ ಸಂಜೆ ಕೆ. ಬೋದೂರ ಗ್ರಾಮದಲ್ಲಿ ಸಿಡಿಲು ಬಡಿದು ಎತ್ತು ಮೃತಪಟ್ಟಿದೆ. ಗ್ರಾಮದ ಗೋವಿದಪ್ಪ ಹನುಮಂತಪ್ಪ ಟಕಳ್ಳಕಿ ಎಂಬುವವರ ಎತ್ತು ಸಿಡಿಲು ಬಡಿದು ಬಲಿಯಾಗಿದೆ. ಅಂದಾಜು 30ರಿಂದ 40 ಸಾವಿರ ರೂ. ಬೆಲೆ ಬಾಳುವ ಎತ್ತು ಎಂದು ರೈತರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next