Advertisement

ಅನಕ್ಷಸ್ಥರನ್ನು ಸಾಕ್ಷರನ್ನಾಗಿಸುವ ಉದ್ದೇಶ

11:23 AM Jul 04, 2017 | |

ಹೊಸಪೇಟೆ: ಹೈದ್ರಾಬಾದ್‌ ಕರ್ನಾಟಕದ 6 ಜಿಲ್ಲೆಗಳ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡುವ ಉದ್ದೇಶದಿಂದ ಸಾಕ್ಷರ ಭಾರತ-2017 ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಾಕ್ಷರ ಭಾರತ ತಾಲೂಕು ಸಂಯೋಜಕ
ಹಾಗೂ ಸಂಪನ್ಮೂಲ ವ್ಯಕ್ತಿ ವರಪ್ರಸಾದ್‌ ಹೇಳಿದರು.

Advertisement

ಸ್ಥಳೀಯ ತಾಪಂ ವಿದ್ಯಾರಣ್ಯ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮುಖ್ಯ ತರಬೇತುದಾರರ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಬದಲಾವಣೆ ಜಗದ ನಿಯಮ. ಜಗತ್ತು ಇಷ್ಟೆಲ್ಲ ಮುಂದುವರಿದಿದ್ದರೂ ನಾವು ಅಲ್ಲಲ್ಲಿ ಅನಕ್ಷರಸ್ಥರನ್ನು ಕಾಣುತ್ತಿದ್ದೇವೆ. ಈ ಉದ್ದೇಶದಿಂದ ಹೈದ್ರಾಬಾದ್‌ ಕರ್ನಾಟಕ ಭಾಗದ 6 ಜಿಲ್ಲೆಗಳಲ್ಲಿನ ಅನಕ್ಷರಸ್ಥರನ್ನು ಗುರುತಿಸಿ, ಹೈ.ಕ. ಅನುದಾನದಡಿಯಲ್ಲಿ ಅಕ್ಷರಸ್ಥರನ್ನಾಗಿ ಮಾಡುವ ಉದ್ದೇಶದಿಂದ 4 ದಿನಗಳ ತರಬೇತಿಯಲ್ಲಿ ಸಾಕ್ಷರ ಭಾರತ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಈ ಭಾಗದ 6 ಜಿಲ್ಲೆಗಳಲ್ಲಿ ಒಟ್ಟು 6,42,000
ಅನಕ್ಷರಸ್ಥರು, ಬಳ್ಳಾರಿ ಜಿಲ್ಲೆಯಲ್ಲಿ 1 ಲಕ್ಷ ಹಾಗೂ ಹೊಸಪೇಟೆ ತಾಲೂಕಿನಲ್ಲಿ 12942 ಜನರನ್ನು ಸಾಕ್ಷರರನ್ನಾಗಿ
ಮಾಡುವ ಗುರಿ ಹೊಂದಲಾಗಿದೆ ಎಂದರು.

ಇಲ್ಲಿ ತರಬೇತಿ ಪಡೆದ ಶಿಕ್ಷಕರು ತಾಲೂಕಿನ 23 ಗ್ರಾಮ ಪಂಚಾಯತ್‌ನ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಒಬ್ಬ ಸ್ವಯಂ
ಸೇವಕರನ್ನು ಗುರುತಿಸಿ ಅವರಿಗೆ ತರಬೇತಿ ನೀಡಬೇಕು. ತರಬೇತಿ ಪಡೆದ ಸ್ವಯಂ ಸೇವಕರು 10 ಜನರನ್ನು ಸಾಕ್ಷರರನ್ನಾಗಿ ಮಾಡುವ ಜವಾಬ್ದಾರಿ ಇರುತ್ತದೆ. ಇವರ ಮೇಲೆ ತಾಲೂಕಿನ ಮೇಲ್ವಿಚಾರಕರು ಗಮನ ಹರಿಸುತ್ತಾರೆ ಎಂದು ಮಾಹಿತಿ ನೀಡಿದರು. ತಾಲೂಕು ಬಿಸಿಯೂಟ ಯೋಜನೆಯ ಉಪನಿರ್ದೇಶಕ ಪದ್ಮನಾಭ ಕರ್ಣಂ ಮಾತನಾಡಿ, ಸ್ವಾಸ್ಥ್ಯ ಸಮಾಜ ನಿರ್ಮಾಣ ಹಾಗೂ ಸರ್ಕಾರದ ಯೋಜನೆ ತಲುಪಬೇಕಾದರೆ ಜನ ಸಾಕ್ಷರರಾಗಬೇಕು. ಜನರ ಸಾಮಾಜಿಕ, ಆರ್ಥಿಕ ಅಭಿವೃದ್ದಿಗೆ ಶಿಕ್ಷಣ ಅವಶ್ಯ. ಹೈದ್ರಾಬಾದ್‌ ಕರ್ನಾಟಕದ 6 ಜಿಲ್ಲೆಗಳ 999 ಗ್ರಾಪಂಗಳಲ್ಲಿ ಒಟ್ಟು 22 ಕೋಟಿ ಅನುದಾನದಲ್ಲಿ ಅನಕ್ಷರಸ್ಥರನ್ನು ಗುರುತಿಸಿ ಅವರನ್ನು ಸಾಕ್ಷರರನ್ನಾಗಿ ಮಾಡುವ ಗುರಿ ಹೊಂದಲಾಗಿದೆ ಎಂದರು.

ಮಂಜಪ್ಪ ರಂಗಪ್ಪನವರ ಹಾಗೂ ಶಂಕರನಾಯ್ಕ ತರಬೇತಿ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸಂಯೋಜಕ
ಎಚ್‌.ರಾಮಪ್ಪ, ದೈಹಿಕ ಅಧಿಕಾರಿ ಬಸವರಾಜ ಜತ್ತಿ, ನೌಕರ ಸಂಘದ ಜಾಕೀರ್‌ ಹುಸೇನ್‌, ಬಡ್ತಿ ಮುಖ್ಯಗುರು
ಮಕು¤ಂಬಿ ಇದ್ದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಜಿಪಂ, ತಾಪಂ ಆಶ್ರಯದಲ್ಲಿ ಕಾರ್ಯಕ್ರಮ ಜರುಗಿತು. 

Advertisement

Udayavani is now on Telegram. Click here to join our channel and stay updated with the latest news.

Next