Advertisement

ವಿಜಯಪುರ: ಸ್ಮಶಾನ ಲಾಕ್ ಡೌನ್ ಮಾಡಿದ ಸಾರ್ವಜನಿಕರು

04:15 PM Jul 13, 2020 | keerthan |

ವಿಜಯಪುರ: ಕೋವಿಡ್-19 ಸೋಂಕಿತ ಮೃತದೇಹ ಹೂಳಿದ್ದಾರೆ ಎಂದು ಆಕ್ಷೇಪಿಸಿ ನಗರದಲ್ಲಿ ಸ್ಥಳೀಯ ನಿವಾಸಿಗಳು ಸ್ಮಶಾನವನ್ನೇ ಸೀಲ್ ಡೌನ್ ಮಾಡಿದ್ದಾರೆ.

Advertisement

ವಿಜಯಪುರ ನಗರದ ಚಾಲುಕ್ಯ ನಗರದಲ್ಲಿ ಪಿಪಿಇ ಕಿಟ್ ಧರಿಸಿ ಸಿದ್ಧೇಶ್ವರ ಸಂಸ್ಥೆಯ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಿದ್ದಾರೆ ಎಂದು ಆರೋಪಿಸಿ ಸ್ಥಳೀಯರು ಸ್ಮಶಾನ ಸೀಲ್ ಡೌನ್ ಮಾಡಿದ್ದಾರೆ.

ಈ ಸ್ಮಶಾನದಲ್ಲಿ ಕೋವಿಡ್ ಸೋಂಕಿನಿಂದ ಮೃತನಾದವನ ದೇಹವನ್ನು ಹೂಳಿದ್ದಾರೆಂದು ಸ್ಥಳೀಯರ ಆಕ್ರೋಶ ಹೊರಹಾಕಿದ್ದು, ಸ್ಮಶಾನದ ಪ್ರವೇಶ ದ್ವಾರಕ್ಕೆ ಮುಳ್ಳು ಕಂಟಿ ಹಚ್ಚಿ ಸೀಲ್ ಡೌನ್ ಮಾಡಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ಸೋಂಕು ರೋಗದ ಹಾವಳಿ ಮುಗಿಯುವವರೆಗೂ ಯಾರೂ ಈ ಸ್ಮಶಾನದಲ್ಲಿ ಅಂತ್ಯಕ್ರಿಯೆ ಮಾಡುವುದೇ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next