Advertisement

ಜೀವನ ಮೌಲ್ಯದಿಂದ ಭವಿಷ್ಯ ಉಜ್ವಲ : ಡಾ|ವೀರೇಂದ್ರ ಹೆಗ್ಗಡೆ

09:44 PM Apr 19, 2019 | mahesh |

ಬೆಳ್ತಂಗಡಿ: ವಿದ್ಯಾರ್ಥಿಗಳು ಬದುಕಿನಲ್ಲಿ ಉತ್ತಮ ಜೀವನ ಮೌಲ್ಯ ಅಳವಡಿಸಿಕೊಂಡು ಆದರ್ಶ ಪ್ರಜೆಯಾಗಿ, ಜವಾಬ್ದಾರಿಯುತ ನಾಗರಿಕನಾಗಿ ತನ್ನ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದರು.

Advertisement

ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಉಜಿರೆಯ ರತ್ಮಮಾನಸದ 2018-19ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆ ಪೂರೈಸಿದ 27 ವಿದ್ಯಾರ್ಥಿಗಳು ಭೇಟಿ ಮಾಡಿದ ಸಂದರ್ಭ ಅವರು ವಿದ್ಯಾರ್ಥಿಗಳಿಗೆ ಅರ್ಹತಾಪತ್ರ ವಿತರಿಸಿ ಶುಭಹಾರೈಸಿದರು. ಅಂಕ ಗಳಿಕೆಯೊಂದೇ ಮೂಲ ಗುರಿಯಾಗದೆ ಸವಾಲುಗಳನ್ನು ಎದುರಿಸಿ ಜೀವನ ಶಿಕ್ಷಣದ ಉದಾತ್ತ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು.

ಈ ವೇಳೆ ರತ್ನಮಾನಸದಲ್ಲಿ ಮೂರು ವರ್ಷಗಳಲ್ಲಿ ಕಲಿತ ಜೀವನ ಶಿಕ್ಷಣದ ಅನುಭವವನ್ನು ವಿದ್ಯಾರ್ಥಿಗಳು ಹಂಚಿಕೊಂಡರು. ರತ್ನಮಾನಸದ ಪಾಲಕ ಕೃಷ್ಣ ಶೆಟ್ಟಿ, ಶಿಕ್ಷಕ ರವಿಚಂದ್ರ ಹಾಗೂ ಮಕ್ಕಳ ಹೆತ್ತವರು ಉಪಸ್ಥಿತರಿದ್ದರು.

ರತ್ನಮಾನಸದಲ್ಲಿ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ| ಎಸ್‌. ಪ್ರಭಾಕರ ಮತ್ತು ಕಾರ್ಯದರ್ಶಿ ಡಾ| ಬಿ. ಯಶೋವರ್ಮ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ರತ್ನಮಾನಸದಿಂದ ವಿದ್ಯಾರ್ಥಿಗಳಿಗೆ ವಿದಾಯಕೋರಿ, ರತ್ನಮಾನಸದ ಹಿರಿಯ ವಿದ್ಯಾರ್ಥಿಗಳ ಸಂಘಕ್ಕೆ ಅವರನ್ನು ಸೇರ್ಪಡೆಗೊಳಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next