Advertisement

ನಟ ದರ್ಶನ್‌ ವಿರುದ್ದ ದೂರು ದಾಖಲಿಸಿದ ನಿರ್ಮಾಪಕ

01:29 PM Aug 10, 2022 | Team Udayavani |

ಬೆಂಗಳೂರು:ನಟ ದರ್ಶನ್‌ ತಮಗೆ ಫೋನ್‌ ಮೂಲದ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ನಿರ್ಮಾಪಕ ಭರತ್‌ ಎಂಬವರು ಕೆಂಗೇರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement

ನಿರ್ಮಾಪಕ ಭರತ್‌ ಭಗವಾನ್‌ ಶ್ರೀಕೃಷ್ಣ ಪರಮಾತ್ಮ ಎಂಬ ಸಿನಿಮಾ ನಿರ್ಮಿಸುತ್ತಿದ್ದು, ಅದಕ್ಕೆ ದರ್ಶನ್‌ ಸಂಬಂಧ ಧ್ರುವನ್‌ ಎಂಬವರು ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ಈ ಮಧ್ಯೆ ಹಣಕಾಸಿನ ಸಮಸ್ಯೆಯಿಂದ ಭರತ್‌ ಕೆಲ ದಿನಗಳ ಕಾಲ ಶೂಟಿಂಗ್‌ ಸ್ಥಗಿತಗೊಳಿಸಿದ್ದರು.

ಹೀಗಾಗಿ ನಟ ಧ್ರುವನ್‌ ಈ ವಿಚಾರ ದರ್ಶನ್‌ಗೆ ತಿಳಿಸಿದ್ದು, ಈ ಸಂಬಂಧ ದರ್ಶನ್‌, ಧ್ರುವನ್‌ ಮೊಬೈಲ್‌ನಿಂದಲೇ ನಿರ್ಮಾಪಕ ಭರತ್‌ಗೆ ಬೆದರಿಕೆ ಹಾಕಿದ್ದಾರೆ ಎಂದು ದೂರು ದಾಖಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next