Advertisement

Tax ದುಡ್ಡು ವಾಪಸ್‌ ರಾಜ್ಯಕ್ಕೆ ಕೊಡಲು ಕೇಂದ್ರದಿಂದಲೇ ಸಮಸ್ಯೆ: ರಹೀಂ ಖಾನ್‌

09:34 PM Feb 05, 2024 | Team Udayavani |

ರಾಯಚೂರು: ಕರ್ನಾಟಕದಿಂದ ನಾಲ್ಕು ಲಕ್ಷ ಕೋಟಿ ರೂ. ಕೇಂದ್ರಕ್ಕೆ ತೆಗೆದುಕೊಂಡು ಹೋಗುತ್ತಾರೆ. ಅಲ್ಲಿಂದ ರಾಜ್ಯಕ್ಕೆ ಮರಳಿ ದುಡ್ಡು ಕೊಡಲು ಮಾತ್ರ ಸಮಸ್ಯೆ ಮಾಡುತ್ತಿದ್ದಾರೆ ಎಂದು ಪೌರಾಡಳಿತ ಹಾಗೂ ಹಜ್‌ ಸಚಿವ ರಹೀಂ ಖಾನ್‌ ಆರೋಪಿಸಿದರು.

Advertisement

ಸುದ್ದಿಗಾರರ ಜತೆ ಮಾತನಾಡಿ, ರಾಜ್ಯದಲ್ಲಿ ಬರ ಇದೆ ಎಂದು ಘೋಷಣೆ ಮಾಡಲಾಗಿದೆ. ಕಳೆದ ಆರು ತಿಂಗಳಿನಿಂದ ಕೇಂದ್ರ ಸರ್ಕಾರದ ಜತೆ ನಿರಂತರ ಸಂಪರ್ಕ ಮಾಡಲಾಗುತ್ತಿದೆ. ಆದರೂ ಏನೂ ಬಿಡುಗಡೆ ಮಾಡಿಲ್ಲ. ಎಲ್ಲ ಸಚಿವರು ದೆಹಲಿಗೆ ಹೋಗಿ ಬಂದರೂ ಏನೂ ಪ್ರಯೋಜನ ಆಗಿಲ್ಲ. ಹೀಗಾಗಿ ನಮಗೂ ಹೋರಾಟದ ಅನಿವಾರ್ಯತೆ ಸೃಷ್ಟಿಯಾಗಿದೆ. ಈಗ ಲೋಕಸಭೆ ಚುನಾವಣೆ ಎದುರಾಗಿದೆ.

ಹೀಗಾಗಿ ಬಿಜೆಪಿಯವರಿಗೆ ಏನಾದರೊಂದು ವಿಚಾರ ಬೇಕಾಗಿದೆ. ಮಂಡ್ಯದಲ್ಲಿ ಪ್ರತಿಭಟನೆಗೆ ಇಳಿದಿದ್ದಾರೆ. ಬಿಜೆಪಿಯವರು ಅ ಧಿಕಾರದಲ್ಲಿದ್ದರೂ ಏನೂ ಕೆಲಸ ಮಾಡಿಲ್ಲ. 10 ವರ್ಷದಿಂದ ಯಾವುದು ಅಚ್ಛೆ ದಿನ್‌ ಬಂದಿದೆ ಎಂದು ಅವರೇ ಹೇಳಬೇಕು. ಬಿಜೆಪಿ ಹಾಗೂ ಜೆಡಿಎಸ್‌ ಮೊದಲಿನಿಂದ ಒಂದಾಗಿದ್ದವು. ಈಗ ತಮ್ಮ ನಿಲುವು ಬಹಿರಂಗ ಮಾಡಿಕೊಂಡಿವೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next