Advertisement

ಪ್ರಧಾನಿ ಮೋದಿ ಹೇಳಿಕೆಯಿಂದ ಶಾಕ್‌: ರಮೇಶ್‌

03:45 AM Jan 29, 2017 | Harsha Rao |

ಬೆಳಗಾವಿ: “ಪಂಜಾಬ್‌ ಚುನಾವಣಾ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಪ್ಪುಹಣ, ಐಟಿ ದಾಳಿ ವಿಚಾರದಲ್ಲಿ ಪರೋಕ್ಷವಾಗಿ ನನ್ನ ಹೆಸರು ಪ್ರಸ್ತಾಪ ಮಾಡಿದ್ದು ದೊಡ್ಡ ಶಾಕ್‌ ನೀಡಿದೆ. ಇದನ್ನು ನಾನು ನಿರೀಕ್ಷಿಸಿರಲಿಲ್ಲ. ಜವಾಬ್ದಾರಿ
ಸ್ಥಾನದಲ್ಲಿರುವ ದೇಶದ ಪ್ರಧಾನಿ ಈ ರೀತಿ ಆರೋಪ ಮಾಡುವ ಮೊದಲು ವಿಚಾರ ಮಾಡಬೇಕಿತ್ತು’ ಎಂದು ಸಣ್ಣ ಕೈಗಾರಿಕಾ ಸಚಿವ ರಮೇಶ್‌ ಜಾರಕಿಹೊಳಿ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ” ಅಪನಗದೀಕರಣದ ನಂತರ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರ ಆರೋಪ ಮತ್ತು ರ್ಯಾಲಿಗಳಿಂದ ಪ್ರಧಾನಿ ಹೆದರಿದ್ದಾರೆ. ಅವರ ಮೇಲಿನ ಸಿಟ್ಟನ್ನು ನಮ್ಮ ಮೇಲೆ ಐಟಿಯಂತಹ ದಾಳಿ ನಡೆಸಿ ತೀರಿಸಿಕೊಳ್ಳುತ್ತಿದ್ದಾರೆ. ಕೇಂದ್ರದಲ್ಲಿ ಅಧಿಕಾರದ ಕುರ್ಚಿ ಗಟ್ಟಿ ಮಾಡಿಕೊಳ್ಳುವುದೇ ಅವರ ಪ್ರಮುಖ ಉದ್ದೇಶ’ ಎಂದರು. “ಪ್ರಧಾನಿ ಅವರ ಈ ಹೇಳಿಕೆ ಸಂಪೂರ್ಣ ರಾಜಕೀಯ ಪ್ರೇರಿತ’ ಎಂದು ನುಡಿದರು.

ಬೇನಾಮಿ ಆಸ್ತಿ ಮಾಡಿಲ್ಲ:
“ನಾನು ಯಾವುದೇ ಬೇನಾಮಿ ಆಸ್ತಿ ಮಾಡಿಲ್ಲ. ಈಗ ಐಟಿ ಅಧಿಕಾರಿಗಳು ನೀಡಿರುವ ಮಾಹಿತಿ ನಿಜವಾದರೆ, ನನ್ನ
ಮನೆಯಲ್ಲಿ ಮೂರು ಲಕ್ಷಕ್ಕಿಂತ ಹೆಚ್ಚಿಗೆ ಹಣ ಸಿಕ್ಕಿದೆ ಎಂಬುದು ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಶಾಸಕ ಹಾಗೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ಸವಾಲು ಹಾಕಿದರು.

ನಮ್ಮ ಕುಟುಂಬದ ಸದಸ್ಯರ ಮನೆಗಳ ಮೇಲೆ ನಡೆದಿರುವ ದಾಳಿಯ ಹಿಂದೆ ರಾಜಕಾರಣ ಇದೆ. ದೇವರು ಅವರಿಗೆ ಒಳ್ಳೆಯ ಬುದ್ಧಿ ಕೊಡಲಿ ಎಂದರು.

ಸತೀಶ್‌ ಜತೆ ಮಾತಿಲ್ಲದೆ 30 ವರ್ಷಗಳಾದವು
ಬೆಳಗಾವಿ:
“ಸಹೋದರ ಸತೀಶ್‌ ಜಾರಕಿಹೊಳಿಯನ್ನು ಮಾತನಾಡಿಸದೆ 30 ವರ್ಷಗಳಾಗಿವೆ. ಸಚಿವನಾದ ಮೇಲೆ ಒಮ್ಮೆ ಮಾತ್ರ ಅವರ ಮನೆಗೆ ಹೋಗಿ ಮಾತನಾಡಿದ್ದೆ.’ – ಐಟಿ ದಾಳಿಯ ನಂತರ ಸತೀಶ್‌ ಅವರನ್ನು ಭೇಟಿ ಮಾಡಿ
ಮಾತುಕತೆ ನಡೆಸಿದ್ದೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ರಮೇಶ್‌ ಜಾರಕಿಹೊಳಿ, ಏನೇ ಮಾತನಾಡಬೇಕಿದ್ದರೂ ಅಥವಾ ಏನಾದರೂ ಹೇಳಬೇಕು ಎನಿಸಿದರೆ ಉಳಿದ ಸಹೋದರರ ಮೂಲಕ ಮಾತನಾಡುತ್ತೇವೆ. ಮುಖಾಮುಖೀ ಮಾತನಾಡಿಲ್ಲ ಎಂದು ನುಡಿದರು.

Advertisement

ಮೋದಿ ಹೇಳಿಕೆ ಹಾಸ್ಯಾಸ್ಪದ: ಎಚ್‌ಡಿಕೆ
ಬೆಂಗಳೂರು:
ಪ್ರಧಾನಿ ನರೇಂದ್ರಮೋದಿ ಪಂಜಾಬ್‌ ಚುನಾವಣಾ ಪ್ರಚಾರದಲ್ಲಿ ಸಚಿವ ರಮೇಶ್‌ ಜಾರಕಿಹೊಳಿ ನಿವಾಸದ ಮೇಲಿನ ಐಟಿ ದಾಳಿ ಬಗ್ಗೆ ಪ್ರಸ್ತಾಪಿಸಿರುವುದು ಹಾಗೂ ಬಿಜೆಪಿ ನಾಯಕರು, ಕರ್ನಾಟಕವನ್ನು ಭ್ರಷ್ಟಾಚಾರ ಮುಕ್ತ ಮಾಡಲು ಈಶ್ವರಪ್ಪ-ಯಡಿಯೂರಪ್ಪ ಒಂದಾಗಿ ಹೋರಾಟ ಮಾಡಬೇಕೆಂದು ಹೇಳುತ್ತಿರುವುದು ಹಾಸ್ಯಾಸ್ಪದ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next