Advertisement

ಆತಂಕ ಬದಿಗೊತ್ತಿ ಬದುಕು ರೂಪಿಸಿ: ಹೆಗ್ಗಡೆ

11:36 PM Aug 11, 2019 | Team Udayavani |

ಬೆಳ್ತಂಗಡಿ: ತಾಲೂಕಿನಲ್ಲಿ ಪ್ರಕೃತಿ ವಿಕೋಪದಿಂದ ಭಾರೀ ಪ್ರಮಾಣದಲ್ಲಿ ಅನಾಹುತವಾಗಿದ್ದು, ಅಪಾರ ಕಷ್ಟ-ನಷ್ಟಗಳಾಗಿವೆ. ಆದರೆ, ಸಂತ್ರಸ್ತರು ಆತಂಕ ಪಡಬೇಕಾಗಿಲ್ಲ. ಮಂಜುನಾಥಸ್ವಾಮಿ ನಮ್ಮನ್ನು ರಕ್ಷಿಸಿದ್ದಾನೆ. ಆತಂಕ ಬಂದಾಗ ಆಪತ್ತು ಸಹಜ. ಮುಂದಿನ ಭವಿಷ್ಯ ರೂಪಿಸಲು ಸನ್ನದ್ಧರಾಗಿ ಎಂದು ಧರ್ಮ ಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

Advertisement

ಬೆಳ್ತಂಗಡಿ ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಚಾರ್ಮಾಡಿ ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸಂತ್ರಸ್ತರಿಗಾಗಿ ತಾತ್ಕಾಲಿಕ ಕಾಳಜಿ ಕೇಂದ್ರದಲ್ಲಿರುವ ನಿರಾಶ್ರಿತರಿಗೆ ಅಭಯದ ಮಾತುಗಳನ್ನಾಡಿದರು. ಹಗಲು ಹೊತ್ತು ಈ ಅನಾಹುತ ಸಂಭವಿಸಿರುವುದರಿಂದ ಯಾವುದೇ ಜೀವ ಹಾನಿ ಆಗದಿರುವುದು ನೆಮ್ಮದಿ ಕಂಡಿದೆ. ಇಲ್ಲವಾದಲ್ಲಿ ಅದೆಷ್ಟೋ ಜೀವ ಹಾನಿಯಾಗುವ ಲಕ್ಷಣವಿತ್ತು.

ಭೂಮಿ ದೇವ, ವಾಯು ದೇವ, ಅಗ್ನಿದೇವ ಎಂದು ಪ್ರಾರ್ಥಿಸುತ್ತಿರುವ ನಮಗೆ ಭಗವಂತನೇ ರಕ್ಷಕ ಎಂದರು. ಈಗಾಗಲೇ ಕಾಳಜಿ ಕೇಂದ್ರವನ್ನು ರಚಿಸಿ ಸಂತ್ರಸ್ತರಿಗೆ ಊಟೋಪಹಾರ ನೀಡುವಲ್ಲಿ ಸರಕಾರ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವಿವಿಧ ಸಂಘ ಸಂಸ್ಥೆಗಳು ಮುಂದಾಗುತ್ತಿವೆ. ಗ್ರಾಮಾಭಿವೃದ್ಧಿ ಯೋಜನೆಯ ಸಿಬ್ಬಂದಿ ಹಾಗೂ ಕಾರ್ಯಕರ್ತರು ಪ್ರವಾಹ ಪ್ರದೇಶಗಳ ನಷ್ಟದ ಅಂದಾಜು ಸಂಗ್ರಹಿಸುತ್ತಿವೆ. ಶೀಘ್ರವೇ ಯೋಜನೆಯಿಂದ ಪರಿಹಾರ ನೀಡಲು ಕ್ರಮ ಕೈಗೊಳ್ಳುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next