Advertisement

ಸದ್ವಿಚಾರ ಅನುಷ್ಠಾನಗೊಳಿಸುವುದೇ ವ್ರತಾಚರಣೆ : ಮಾಣಿಲ ಶ್ರೀ

06:10 AM Jul 24, 2017 | Harsha Rao |

ವಿಟ್ಲ : ನಿಸ್ವಾರ್ಥ ಮನೋಭಾವದ ಪೂಜೆಗೆ ಭಗವಂತನ ಅನುಗ್ರಹ ಪ್ರಾಪ್ತಿಯಾಗುತ್ತದೆ. ಸದ್ವಿಚಾರಗಳನ್ನು ಅನುಷ್ಠಾನ
ಗೊಳಿಸುವುದೇ ಪರಿಪೂರ್ಣ ವ್ರತಾಚರಣೆಯಾಗಿದೆ. ಮಾನವೀಯ ಮೌಲ್ಯವನ್ನು ಉಳಿಸುವ ಕಾರ್ಯ  ನಡೆಯಬೇಕು. ಪ್ರತಿಯೊಬ್ಬರೂ ಶಾಂತಿ ಕಾಪಾಡಿದರೆ ಸಮಾಜದಲ್ಲಿ ಅಶಾಂತಿಯಿಲ್ಲ ಎಂದು ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.

Advertisement

ಅವರು ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ರವಿವಾರ 48 ದಿನಗಳ ಸಾಮೂಹಿಕ ಲಕ್ಷ್ಮೀ ಪೂಜೆಯ ಅಂಗವಾಗಿ ವೈದಿಕ, ಧಾರ್ಮಿಕ ಕಾರ್ಯಕ್ರಮಗಳ ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಕ್ಷೇತ್ರದ ಟ್ರಸ್ಟಿ ತಾರಾನಾಥ ಕೊಟ್ಟಾರಿ ಮಾತನಾಡಿ ನಮ್ಮನ್ನು ನಾವು ಧಾರ್ಮಿಕತೆಯಲ್ಲಿ ತೊಡಗಿಸಿಕೊಂಡಾಗ ಜೀವನಕ್ಕೆ ಅರ್ಥ ಬರುತ್ತದೆ. ಶ್ರೀಧಾಮ ಮಾಣಿಲದಲ್ಲಿ ಸುಸಂಸ್ಕೃತ ಸಮಾಜ ನಿರ್ಮಾಣಗೊಂಡಿದೆ ಎಂದು ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next