Advertisement

ಅಂಗಮಾರಿ ನಿಯಂತ್ರಿಸಿ ಉತ್ತಮ ದಾಳಿಂಬೆ ಬೆಳೆದ ರೈತ

09:44 PM Jul 04, 2021 | Team Udayavani |

ಕುಷ್ಟಗಿ: ದುಂಡಾಣು ಅಂಗಮಾರಿ ರೋಗವನ್ನು ಕಾಲ ಕಾಲಕ್ಕೆ ಔಷಧ ಕ್ರಮಗಳಿಂದ ನಿಯಂತ್ರಿಸಿಕೊಂಡು ಈ ಬೆಳೆ ಬೆಳೆಯುವುದು ರೈತರಿಗೆ ಸವಾಲಿನ ಕೆಲಸ. ಈ ನಿಟ್ಟಿನಲ್ಲಿ ಕುಷ್ಟಗಿಯ ರೈತ ರಮೇಶ ಕೊನಸಾಗರ ಅವರು, ದುಂಡಾಣು ಅಂಗಮಾರಿ ನಿಯಂತ್ರಿಸಿಕೊಂಡು ಈ ಬಾರಿ ಭರ್ಜರಿ ದಾಳಿಂಬೆ ಬೆಳೆದಿದ್ದಾರೆ.

Advertisement

ತಾಲೂಕಿನ ನಿಡಶೇಸಿ ಸೀಮಾದಲ್ಲಿ 13 ಎಕರೆ ಜಮೀನಿನಲ್ಲಿ 4 ಎಕರೆ ಪ್ರದೇಶದಲ್ಲಿ ದಾಳಿಂಬೆಗೆ ಕಾಡುವ ದುಂಡಾಣು ಅಂಗಮಾರಿ ರೋಗ ಹಾವಳಿ ಮಧ್ಯೆಯೂ ಉತ್ತಮ ಇಳುವರಿ ಸಾಧ್ಯವಾಗಿದೆ. ಹಿರಿಯ ರೈತರಾದ ಜಗನ್ನಾಥ ಗೋತಗಿ, ಕುಂಬಾರ, ಶಂಕರ್‌ ಮೊದಲಾದವರ ಮಾರ್ಗದರ್ಶನದಲ್ಲಿ ಈ ಬೆಳೆ ಬೆಳೆದಿದ್ದು ಈ ಬಾರಿ ಸರಾಸರಿ 20 ಟನ್‌ ಇಳುವರಿ ನಿರೀಕ್ಷೆಯಲ್ಲಿದ್ದಾರೆ ರಮೇಶ.

ಕಳೆದ 2019ರ ಜೂನ್‌ ತಿಂಗಳಿನಲ್ಲಿ ಗುಜರಾತ್‌ ರಾಜ್ಯದ ಕೇಡಲ್‌ನಿಂದ ಪ್ರತಿ ಸಸಿಗೆ 32 ರೂ. ನಂತೆ ಖರೀದಿ ಸಿ 4 ಎಕರೆ ಪ್ರದೇಶದಲ್ಲಿ 1500 ಗಿಡಗಳನ್ನು ನಾಟಿ ಮಾಡಿದ್ದಾರೆ. ಆರಂಭದಿಂದಲೂ ಹಂತ ಹಂತವಾಗಿ ನಿರ್ವಹಣೆ ವೆಚ್ಚ 6 ಲಕ್ಷ ರೂ. ಖರ್ಚಾಗಿದೆ. ಕಳೆದ 2020ರಲ್ಲಿ ವರ್ಷದ ಗಿಡಕ್ಕೆ ದಾಳಿಂಬೆ ಕಾಯಿ ಭಾರ ಆಗದಂತೆ ಹೆಚ್ಚುವರಿ ಕಾಯಿಗಳನ್ನು ತೆಗೆದು ಹಾಕಿದಾಗ್ಯೂ, ಮೊದಲ ಪ್ರಾಯೋಗಿಕ ಕಟಾವಿಗೆ 7 ಟನ್‌ ಇಳುವರಿಯಲ್ಲಿ ಪ್ರತಿ ಕೆ.ಜಿ. 90ರಿಂದ 100 ರೂ.ವರೆಗೆ 6 ಲಕ್ಷ ರೂ. ಆದಾಯ ಬಂದಿದೆ. ಈ ಬಾರಿ ಪ್ರತಿ ಗಿಡ ಹೊರಲಾರದಂತಹ ಇಳುವರಿ ಕಾಣಬಹುದು.

ಗಿಡಗಳಿಗೆ ಭಾರ ಕವಲು ಕಟ್ಟಿಗೆ ಸಹಾಯದಿಂದ ತಂತಿಗೆ ಎಳೆದು ಕಟ್ಟಿದ್ದರೂ, ಸಹ ಗಿಡಗಳು ಹಣ್ಣಿನ ಬಾರಕ್ಕೆ ಜೋತು ಬಿದ್ದಿವೆ. ದುಂಡಾಣು ಅಂಗಮಾರಿ ರೋಗದ ಮಧ್ಯೆ, ಗಾಳಿ-ಮಳೆ ಸಂದರ್ಭದಲ್ಲಿ ಬೆಳೆ ಕಟಾವು ನಿರ್ವಹಿಸಬೇಕಾದ ಅನಿವಾರ್ಯತೆ ರೈತ ರಮೇಶ ಕೊನಸಾಗರ ಅವರಿಗೆ ಇದೆ. ಈ ಹಿನ್ನೆಲೆಯಲ್ಲಿ 15 ದಿನಗಳಲ್ಲಿ ಕಟಾವು ಮಾಡಲು ನಿರ್ಧರಿಸಿರುವ ಅವರಿಗೆ ಈಗಾಗಲೇ ಬೆಂಗಳೂರು ಇತರೆಡೆಗಳಿಂದ ಪ್ರತಿ ಕೆಜಿಗೆ 80ರಿಂದ 90 ರೂ.ಗೆ ಖರೀ  ದಿಸಲು ಮುಂದಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next