Advertisement

Suraj Revanna Case ಸಂತ್ರಸ್ತನ ವಿರುದ್ಧ ದೂರು ದಾಖಲಿಸಿದ್ದ ವ್ಯಕ್ತಿ ನಾಪತ್ತೆ!

10:25 PM Jun 23, 2024 | Team Udayavani |

ಹಾಸನ: ಡಾ| ಸೂರಜ್‌ ರೇವಣ್ಣ ಪರವಾಗಿ ಹಾಗೂ ಸಂತ್ರಸ್ತ ಯುವಕನ ವಿರುದ್ಧ ದೂರು ದಾಖಲಿಸಿದ್ದ ಡಾ| ಸೂರಜ್‌ ರೇವಣ್ಣ ಅವರ ಆಪ್ತ ಎನ್ನಲಾದ ಹೊಳೆನರಸೀಪುರ ತಾಲೂಕು ಹನುಮನಹಳ್ಳಿಯ ಶಿವಕುಮಾರ್‌ ನಾಪತ್ತೆಯಾಗಿದ್ದಾರೆ.

Advertisement

ಜತೆಗೆ ಅವರ ಮೊಬೈಲ್‌ ಸ್ವಿಚ್‌ಆಫ್ ಆಗಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ.

ಸಂತ್ರಸ್ತ ಎನ್ನಲಾದ ಯುವಕ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಬೆಂಗಳೂರಿನಲ್ಲಿ ದೂರು ದಾಖಲಿಸಿದ ಬೆನ್ನಲ್ಲೇ ಡಾ| ಸೂರಜ್‌ ರೇವಣ್ಣ ಬ್ರಿಗೇಡ್‌ನ‌ ಪದಾಧಿಕಾರಿ ಹಾಗೂ ಸೂರಜ್‌ ಅವರ ಆಪ್ತ ಎನ್ನಲಾದ ಶಿವಕುಮಾರ್‌, ಸೂರಜ್‌ ಅವರಿಂದ ತನಗೆ 5 ಕೋಟಿ ರೂ. ಹಣ ಕೊಡಿಸುವಂತೆ ತನ್ನ ಮುಂದೆ ಯುವಕ ಬೇಡಿಕೆ ಇಟ್ಟಿದ್ದ. ಆತ ಸೂರಜ್‌ ಮೇಲೆ ಸುಳ್ಳು ಆರೋಪ ಹೊರಿಸಿದ್ದಾನೆ ಎಂದು ಆ ಯುವಕ ಮತ್ತು ಆತನ ಭಾವನ ವಿರುದ್ಧ ಹೊಳೆನರಸೀಪುರ ಠಾಣೆಗೆ ಶುಕ್ರವಾರ ಸಂಜೆ ದೂರು ನೀಡಿದ್ದ.

ಇದೀಗ ಪ್ರಕರಣ ಸಂಬಂಧ ಸೂರಜ್‌ರನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಂತೆಯೇ ಶಿವಕುಮಾರ್‌ ನಾಪತ್ತೆಯಾಗಿದ್ದಾನೆ.

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next