Advertisement

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

02:02 AM Jul 27, 2024 | Team Udayavani |

ರಂಗಾರೆಡ್ಡಿ (ತೆಲಂಗಾಣ): ಕನ್ನ ಹಾಕಿದ ಹೊಟೇಲ್‌ ಒಳಗೆ ಕದಿಯಲು ಏನೂ ದೊರೆಯದೇ ಕಳ್ಳನೊಬ್ಬ ತಾನೇ 20 ರೂ. ನೋಟನ್ನು ಟೇಬಲ್‌ ಮೇಲಿಟ್ಟು ತೆರಳಿದ ಘಟನೆ ತೆಲಂಗಾಣದ ಮಹೇಶ್ವರಮ್‌ನಲ್ಲಿ ನಡೆದಿದೆ! ಹೊಟೇಲ್‌ನೊಳಗೆ ಇರುವ ಹಣ ಎಗರಿಸು ವ ಉದ್ದೇಶದಿಂದ ಬೀಗ ಒಡೆದು ಪ್ರವೇಶಿಸಿದ್ದ ಕಳ್ಳ, ಹೊಟೇಲ್‌ ತುಂಬಾ ಹಣಕ್ಕಾಗಿ ಜಾಲಾಡಿದ್ದಾನೆ. ಆದರೆ ಕದಿಯಲು ಬೆಲೆ ಬಾಳುವಂಥದ್ದು ಏನೂ ದೊರೆಯದ ಕಾರಣ, ಸಿಸಿಟಿವಿ ಮುಂದೆ ನಿಂತು, “ನಿಮ್ಮ ವ್ಯಾಪಾರ ಯಾಕಿಷ್ಟು ಕಡಿಮೆಯಿದೆ’ ಎಂಬಂತೆ ಸನ್ನೆ ಮಾಡಿ, ಬಳಿಕ ರೆಫ್ರಿಜರೇಟರ್‌ ಬಳಿ ತೆರಳಿ ತಂಪು ಪಾನೀಯ ಸೇವಿಸಿದ್ದಾನೆ. ತೆರಳುವ ಮುನ್ನ ತಂಪು ಪಾನೀಯಕ್ಕೆ ಹಣ ನೀಡಿದ ರೀತಿ 20 ರೂ. ಇಟ್ಟು ಹೊರನಡೆದಿದ್ದಾನೆ. ಕಳ್ಳ ನೋಟನ್ನಿಟ್ಟು ತೆರಳುವ ಸಿಸಿಟಿವಿ ಫ‌ೂಟೇಜ್‌ ಈಗ ಭಾರೀ ವೈರಲ್‌ ಆಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next