Advertisement

ಯುವಕನ ಮರ್ಮಾಂಗಕ್ಕೆ ಇರಿದ ದುಷ್ಕರ್ಮಿಗಳು

12:10 PM Aug 23, 2017 | |

ಬೆಂಗಳೂರು: ಐಎಎಸ್‌ ಕೋಚಿಂಗ್‌ ಪಡೆಯಲು ಆಂಧ್ರಪ್ರದೇಶದಿಂದ ನಗರಕ್ಕೆ ಬಂದಿದ್ದ ಯುವಕನೊಂದಿಗೆ ಮೂವರು ದುಷ್ಕರ್ಮಿಗಳು ಜಗಳ ತೆಗೆದು ಚೂರಿಯಿಂದ ಆತನ ಮರ್ಮಾಂಗಕ್ಕೆ ಇರಿದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Advertisement

 ಆಂಧ್ರಪ್ರದೇಶದ ಚಿತ್ತೂರಿನ ಸತೀಶ್‌(24) ಹಲ್ಲೆಗೊಳಗಾದ ಯುವಕ. ಹಲ್ಲೆಯಿಂದ ಗಾಯಗೊಂಡಿರುವ  ಸತೀಶ್‌ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಐಎಎಸ್‌ ಕೋಚಿಂಗ್‌ ಪಡೆದು ಬೆಂಗಳೂರಿಗೆ ಬಂದಿದ್ದ ಸತೀಶ್‌, ಎಚ್‌ಎಸ್‌ ಆರ್‌ ಲೇಔಟ್‌ನಲ್ಲಿ ಶಿûಾ ಐಎಎಸ್‌ ಕೋಚಿಂಗ್‌ ಸೆಂಟರ್‌ಗೆ ಸೇರಿಕೊಂಡಿದ್ದರು.

ಆ.18ರಂದು ಚಿತ್ತೂರಿಗೆ ತೆರಳುವ ಉದ್ದೇಶದಿಂದ ರಾತ್ರಿ 8 ಗಂಟೆ ಸುಮಾರಿಗೆ ಮಿನಿ ಬಸ್‌ನಲ್ಲಿ ಆನಂದ ರಾವ್‌ ಸರ್ಕಲ್‌ಗೆ ಬಂದು ಇಳಿದಿದ್ದಾರೆ. ಇದೇ ವೇಳೆ ಹಿಂದಿನಿಂದ ಬಂದ ಮೂವರು ಯುವಕರು ಗಾಡಿ ತೆಗೆಯುವಂತೆ ಸೂಚಿಸಿದ್ದಾರೆ.

ನನ್ನ ಬಳಿ ಯಾವುದೇ ಗಾಡಿ ಇಲ್ಲವೆಂದು ಉತ್ತರ ಕೊಟ್ಟ ಸತೀಶ್‌ನನ್ನು ಆನಂದ್‌ ರಾವ್‌ ವೃತ್ತದಿಂದ ರೇಸ್‌ ಕೋರ್ಟ್‌ ರಸ್ತೆ ಕಾರ್‌ ಶೋ ರೂಮ್‌ ವೋಂದರ ಬಳಿಗೆ ಎಳೆದೊಯ್ದಿರುವ ದುಷ್ಕರ್ಮಿಗಳು ಚೂರಿಯಿಂದ ಮಾರ್ಮಾಂಗಕ್ಕೆ ಇರಿದಿದಲ್ಲದೇ, ತಲೆಗೆ ಟೈಲ್ಸ್‌ನಿಂದ ಹೊಡೆದು ಪರಾರಿಯಾಗಿದ್ದಾರೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಸತೀಶ್‌ನನ್ನು ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿದ್ದರು. ಸಿಸಿ ಕ್ಯಾಮರಾದಲ್ಲಿ ಆರೋಪಿಗಳ ಸುಳಿವು ಲಭ್ಯವಾಗಿದ್ದು, ಬಂಧನಕ್ಕೆ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಹೈಗ್ರೌಂಡ್ಸ್‌ ಠಾಣೆಯಲ್ಲಿ ದಾಖಲಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next