Advertisement

ಆಕ್ಸಿಜನ್‌ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಕಾಂಗ್ರೆಸ್‌ ನೆರವು

06:21 PM Jul 05, 2021 | Team Udayavani |

ಚಾಮರಾಜನಗರ: ಕಳೆದ 2 ತಿಂಗಳ ಹಿಂದೆಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್‌ ಕೊರತೆಯಿಂದಮೃತರಾದ ತಾಲೂಕಿನ ಹೊನ್ನಹಳ್ಳಿ ಗ್ರಾಮದಮಹದೇವಶೆಟ್ಟಿ ಅವರ ಮನೆಗೆ ಶಾಸಕಸಿ.ಪುಟ್ಟರಂಗಶೆಟ್ಟಿ ಭೇಟಿ ನೀಡಿ ಕರ್ನಾಟಕಪ್ರದೇಶ ಕಾಂಗ್ರೆಸ್‌ ಸಮಿತಿಯಿಂದ ಕೊಡಲಾದ1 ಲಕ್ಷ ರೂ.ಗಳ ಪರಿಹಾರದ ಚೆಕ್‌, ಜತೆಗೆ 10ಸಾವಿರ ರೂ. ವೈಯಕ್ತಿಕ ಪರಿಹಾರ ವಿತರಿಸಿದರು.

Advertisement

ಹಾಗೆಯೇ ತಾಲೂಕಿನ ಅಮಚವಾಡಿಗ್ರಾಮದಲ್ಲಿ ಕೊರೊನಾ ಸೋಂಕಿಗೆ ಒಳಗಾಗಿಚಿಕಿತ್ಸೆ ಫ‌ಲಕಾರಿಯಾಗದೇ ಜಿಲ್ಲಾಸ್ಪತ್ರೆಯಲ್ಲಿಮೃತಪಟ್ಟ ವ್ಯಕ್ತಿ ಕುಟುಂಬಕ್ಕೆ ವೈಯಕ್ತಿಕವಾಗಿ ಧನಸಹಾಯ ಮಾಡಿದರು.

ಇದೇವೇಳೆಮಾತನಾಡಿದಅವರು,ಆಕ್ಸಿಜನ್‌ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆನ್ಯಾಯ ದೊರಕಿಸಲು ರಾಜ್ಯ ಸರ್ಕಾರವಿಫ‌ಲವಾಗಿದೆ. ಕೆಲವರಿಗೆ ಕೇವಲ 2 ಲಕ್ಷ ರೂ.ಪರಿಹಾರ ನೀಡಿ, ಇನ್ನೂ ಕೆಲವರಿಗೆಪರಿಹಾರವನ್ನೇ ನೀಡಿಲ್ಲ. 36 ಜನ ಆಕ್ಸಿಜನ್‌ದುರಂತದಲ್ಲಿ ಮೃತಪಟ್ಟಿದ್ದು, ಅವರೆಲ್ಲರಿಗೂಕಾಂಗ್ರೆಸ್‌ನಿಂದ ತಲಾ 1 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ.

ಇದು ಪಕ್ಷದ ಬದ್ಧತೆತೋರಿಸುತ್ತದೆ ಎಂದರು.ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್‌, ಗ್ರಾಮಾಂತರ ಬ್ಲಾಕ್‌ ಕಾಂಗ್ರೆಸ್‌ಅಧ್ಯಕ್ಷ ಎ.ಎಸ್‌.ಗುರುಸ್ವಾಮಿ, ಗ್ರಾಪಂಸದಸ್ಯ ರಾಜು, ಮುಖಂಡರಾದ ಶಂಭಪ್ಪ,ವಡ್ಡರಹಳ್ಳಿ ಶೇಖರಪ್ಪ, ಅಮಚವಾಡಿ ಶಿವಣ್ಣ,ಕೇಶವಮೂರ್ತಿ, ಶಿವನಂಜಯ್ಯ, ಕಂಠಿ,ಮಲ್ಲೇಶ್‌, ಪಿಡಿಒ ವೀಣಾ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next