Advertisement

Owner: ನಾಯಿ ಬೊಗಳಿದ್ದಕ್ಕೆ ಮಾಲಿಕನಿಗೆ ಚಾಕು ಇರಿತ!

03:24 PM Dec 13, 2023 | Team Udayavani |

ದೇವನಹಳ್ಳಿ: ಸಾಕು ನಾಯಿ ಬೊಗಳಿದ್ದಕ್ಕೆ ಮಾಲಿಕನಿಗೆ ಚಾಕುವಿನಿಂದ ಇರಿದಿರುವ ಘಟನೆ ತಾಲೂಕಿನ ದೊಡ್ಡ ಚೀಮನಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

Advertisement

ಮಧು ಕುಮಾರ್‌ (34) ಚಾಕುವಿನಿಂದ ಇರಿತಕ್ಕೊಳಗಾದ ವ್ಯಕ್ತಿ.

ಚಾಕು ಇರಿತದ ರಭಸಕ್ಕೆ ದೇಹದೊಳಗೆ ಚಾಕುವಿನ ತುದಿಯ ಚೂರು ಉಳಿದಿದ್ದು ಆಸ್ಪತ್ರೆಯಲ್ಲಿ ವೈದ್ಯರು ಸ್ಕ್ಯಾನಿಂಗ್‌ ಮಾಡಿದಾಗ ಚಾಕುವಿನ ಚೂರು ಇರುವುದು ಪತ್ತೆಯಾಗಿದೆ. ಅದೇ ಗ್ರಾಮದ ಸುನೀಲ್, ಅನಿಲ್, ದೇವರಾಜ್, ಅಜಯ್ ಎಂಬವರು ಕೃತ್ಯವೆಸಗಿದ್ದಾರೆಂದು ದೂರಲಾಗಿದೆ. ‌

ಈ ಸಂಬಂಧ ವಿಶ್ವನಾಥಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ಏನು?: ನಮ್ಮನ್ನು ನೋಡಿ ನಾಯಿ ಬೊಗಳುತ್ತಿದೆ. ಬುದ್ಧಿ ಹೇಳ್ಳೋಕೆ ಆಗಲ್ವಾ ಎಂದು ಆರೋಪಿಗಳು ಸೋಮವಾರ ಸಂಜೆ ಕ್ಯಾತೆ ತೆಗೆದಿದ್ದರು. ಈ ವೇಳೆ ಗಾಯಾಳು ಮಧುಕುಮಾರ್‌ ಅವರ ಸಹೋದರ ಮಂಜುನಾಥ ಅವರು ಪೊಲೀಸ್‌ ಠಾಣೆಗೆ ಸೋಮವಾರ ಸಂಜೆ ದೂರು ನೀಡಿದ್ದರು. “ನಾವು ಎಲ್ಲಾ ಕಡೆ ನಾಯಿಗಳನ್ನು ಸಾಕಿರುವುದನ್ನು ನೋಡಿದ್ದೇವೆ. ಸಾಕು ನಾಯಿಗಳು ಸಾಕಿದ ಮಾಲಿಕರಿಗೆ ಅಷ್ಟೇ ವಿಶ್ವಾಸದಲ್ಲಿರುತ್ತದೆ. ಅದೇ ರೀತಿ ಸಾಕು ನಾಯಿ ನಮ್ಮನ್ನು ನೋಡಿ ಬೊಗಳುತ್ತಿದೆ’ ಎನ್ನುತ್ತಿದ್ದಾರೆಂದು ಗಲಾಟೆಗೆ ಬಂದಿದ್ದಾರೆಂದು ಠಾಣೆಗೆ ದೂರು ನೀಡಿದ್ದರು. ಸೋಮವಾರ ಸಂಜೆ ಆರೋಪಿಗಳು ಮಧುಕುಮಾರ್‌ ಅವರ ಮನೆ ಬಳಿ ಬಂದಾಗ ನಾಯಿಗಳು ಬೊಗುಳಿವೆ. ನಾಯಿಗಳಿಗೆ ಬುದ್ಧಿ ಹೇಳಲು ಆಗಲ್ವ ಎಂದು ಕ್ಯಾತೆ ತೆಗೆದಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಆರೋಪಿಗಳು ನಾಯಿ ಮಾಲಿಕನಿಗೆ ಇರಿದು ಪರಾರಿ ಆಗಿದ್ದಾರೆ. ಘಟನೆಯ ಸಂಬಂಧ ಗಾಯಳು ಮಧುಕುಮಾರ್‌ ಅವರು ದೊಡ್ಡಬಳ್ಳಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ವಿಶ್ವನಾಥಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ದೊಡ್ಡಬಳ್ಳಾಪುರದ ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳು ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

ಆಸ್ಪತ್ರೆಯಲ್ಲಿ ವೈದ್ಯರು ಸ್ಕ್ಯಾನಿಂಗ್‌ ಮಾಡಿದಾಗ ಚಾಕುವಿನ ಚೂರು ಇರುವುದು ಬೆಳಕಿಗೆ ಬಂದಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ●ಪೂಜಮ್ಮ, ಗಾಯಾಳು ಮಧುಕುಮಾರ್‌ರ ತಾಯಿ

ಎರಡು ನಾಯಿಗಳನ್ನು ಸಾಕಿದ್ದೇವೆ. ಯಾರಿಗೂ ತೊಂದರೆ ಕೊಡುವುದಿಲ್ಲ. ಇದೇ ವಿಚಾರ ಇಟ್ಟುಕೊಂಡು ಗ್ರಾಮದ ಸುನೀಲ್‌, ಅನಿಲ್‌, ದೇವರಾಜ್‌ ಮತ್ತು ಅಜಯ್‌ ಅವರು ಸಾಕುನಾಯಿ ಮಾಲಿಕ ಮಧುಕುಮಾರ್‌ ಮೇಲೆ ಕ್ಯಾತೆ ತೆಗೆದು ಚಾಕುವಿನಿಂದ ಇರಿದಿದ್ದಾರೆ. – ಮಮತಾ, ಗಾಯಾಳು ಮಧು ಕುಮಾರ್‌ ಅತ್ತಿಗೆ

 

Advertisement

Udayavani is now on Telegram. Click here to join our channel and stay updated with the latest news.

Next