Advertisement

ಸಿಎಸ್‌ ಹೇಳಿಕೆ ವಿರೋಧಿಸಿ ಮೆಟ್ರೋ ನೌಕರರ ಆಕ್ಷೇಪಣೆ

03:34 PM Jun 28, 2018 | |

ಬೆಂಗಳೂರು: ಬೇಡಿಕೆಗಳ ಈಡೇರಿಕೆ ಸಂಬಂಧ ಮೆಟ್ರೋ ನೌಕರರು, ಬಿಎಂಆರ್‌ಸಿಎಲ್‌ ಅಧಿಕಾರಿಗಳ ನ್ನೊಳಗೊಂಡ ತ್ರಿಪಕ್ಷೀಯ ಸಭೆ ನಡೆಸಿದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಬಿಎಂಆರ್‌ ಸಿಎಲ್‌ ನೀಡುವ ಒಟ್ಟು ವೇತನ ಒಪ್ಪಿಕೊಳ್ಳಿ. ಇಲ್ಲದಿದ್ದರೆ ಬೇರೆ ಕಡೆ ಉದ್ಯೋಗ ನೋಡಿಕೊಳ್ಳಬಹುದು ಎಂದು ಹೇಳಿರುವುದಾಗಿ ನೌಕರರ ಒಕ್ಕೂಟ ಹೈಕೋರ್ಟ್‌ಗೆ ಆಕ್ಷೇಪಣೆ ಸಲ್ಲಿಸಿದೆ.

Advertisement

ಮೆಟ್ರೋ ನೌಕರರ ಮುಷ್ಕರ ಕುರಿತಾದ ಅರ್ಜಿಗೆ ಸಂಬಂಧಿಸಿದಂತೆ ತ್ರಿಪಕ್ಷೀಯ ಸಭೆ ನಡೆಸಿ ಮುಖ್ಯಕಾರ್ಯದರ್ಶಿಯವರು ಹೈಕೋರ್ಟ್‌ಗೆ ಸಲ್ಲಿಸಿದ್ದ ವರದಿಗೆ ಬುಧವಾರ ನ್ಯಾಯಮೂರ್ತಿ ಪಿ.ಎಸ್‌ ದಿನೇಶ್‌ಕುಮಾರ್‌ ಅವರಿದ್ದ ಏಕಸದಸ್ಯ ಪೀಠದ ಮುಂದೆ ಒಕ್ಕೂಟದ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದ್ದು, ಅದರಲ್ಲಿ ಈ ಆರೋಪ ಮಾಡಲಾಗಿದೆ. 

ಜೂ.15ರಂದು ಮೆಟ್ರೋ ನೌಕರರ ಸಂಘ, ಬಿಎಂಆರ್‌ಸಿಎಲ್‌, ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿದ ಮುಖ್ಯ ಕಾರ್ಯದರ್ಶಿಗಳು, ಬಿಎಂಆರ್‌ಸಿಎಲ್‌ ನೀಡುವ ವೇತನ ಭತ್ಯೆ ಒಪ್ಪಿಕೊಳ್ಳಿ, ಇಲ್ಲವೇ ಪರ್ಯಾಯ ಉದ್ಯೋಗ ನೋಡಿಕೊಳ್ಳಬ ಹುದು. ಮೆಟ್ರೋದಲ್ಲಿ ಕಡಿಮೆ ವೇತನಕ್ಕೆ ದುಡಿಯಲು ಲಕ್ಷಾಂತರ ಮಂದಿ ಕಾಯುತ್ತಿದ್ದಾರೆ ಎಂದು ಹೇಳಿದ್ದಾರೆ ಎಂದು ಆಕ್ಷೇಪಣೆಯಲ್ಲಿ ವಿವರಿಸಲಾಗಿದೆ. ಅಲ್ಲದೆ, ಮುಷ್ಕರ ಹಿಂತೆಗೆದುಕೊಳ್ಳಲು ಭರವಸೆ ನೀಡಿದ್ದಾರೆ ಎಂಬ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ದೂರಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next