Advertisement

ಜಿಲ್ಲೆಯಲ್ಲಿ ಹೆಚ್‌ಐವಿ ಸೋಂಕಿತರ ಸಂಖ್ಯೆ ಇಳಿಮುಖ

11:17 AM Dec 01, 2019 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಮಾರಕ ಹೆಚ್‌ ಐವಿ ಸೋಂಕು ಬಗ್ಗೆ ಹೆಚ್ಚು ಹೆಚ್ಚುಅರಿವು ಮೂಡಿಸುವ ಕಾರ್ಯಕ್ರಮಗಳು ಹಾಗೂ ಲೈಂಗಿಕ ಸುರಕ್ಷತೆ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಾಗುತ್ತಿರುವ ಜಾಗೃತಿಪರಿಣಾಮ ಬರದ ಜಿಲ್ಲೆಯಲ್ಲಿ ಹೆಚ್‌ಐವಿ ಸೋಂರಿತರ ಸಂಖ್ಯೆವರ್ಷದಿಂದ ವರ್ಷಕ್ಕೆ ಇಳಿಮುಖ ವಾಗುತ್ತಿದೆ.

Advertisement

ವರ್ಷದಿಂದ ವರ್ಷಕ್ಕೆ ಕಡಿಮೆ: ಕಳೆದವರ್ಷ ಜಿಲ್ಲೆಯಲ್ಲಿ ಬರೋಬ್ಬರಿ 248ಮಂದಿಯಲ್ಲಿ ಹೆಚ್‌ಐವಿ ಸೋಂಕು ಕಾಣಿಸಿಕೊಂಡರೆ, ಈ ವರ್ಷ ಕೇವಲ 143ಮಂದಿಯಲ್ಲಿ ಮಾತ್ರ ಸೋಂಕು ಕಾಣಿಸಿಕೊಂಡಿ ರುವುದು ಜಿಲ್ಲೆಯಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆ ನಡೆಸಿರುವ ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ.ವರ್ಷದಿಂದ ವರ್ಷಕ್ಕೆ ಸೋಂಕು ಪ್ರಮಾಣಕಡಿಮೆ ಆಗುತ್ತಿರುವುದು ಆರೋಗ್ಯಇಲಾಖೆಗೆ ಸಮಾಧಾನ ತಂದಿದ್ದು, ಸೋಂಕಿತರ ಪ್ರಮಾಣ ಶೂನ್ಯಕ್ಕೆ ತರುವ ಪ್ರಯತ್ನಕ್ಕೆ ಇಲಾಖೆ ಮುಂದಾಗಿದೆ.ಕಳೆದ 2019ರ ಎಪ್ರೀಲ್‌ರಿಂದ 2019ರಅಕ್ಟೋಬರ್‌ ಅಂತ್ಯದವರೆಗೂ ಒಟ್ಟು ಜಿಲ್ಲೆಯಲ್ಲಿ 54,290 ಮಂದಿ ಗುರಿ ಪೈಕಿಹೆಚ್‌ಐವಿ ಪರೀಕ್ಷೆಗೆ 27,893 ಮಂದಿಯನ್ನುಒಳಪಡಿಸಿದ್ದು, ಆ ಪೈಕಿ 143 ಮಂದಿಗೆ ಹೆಚ್‌ಐವಿ ಇರುವುದು ದೃಢಪಟ್ಟಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಸರಿ ಸುಮಾರು100ಕ್ಕೂ ಹೆಚ್ಚು ಹೆಚ್‌ಐವಿ ಪ್ರಕರಣಗಳುಇಳಿಮುಖವಾಗಿರುವುದು ಕಂಡು ಬಂದಿದೆ.

ಆ ಪೈಕಿ ಈ ವರ್ಷ ಪತ್ತೆಯಾಗಿರುವ ರೋಗಿಗಳ ಪೈಕಿ ಜಿಲ್ಲೆಯ ಚಿಂತಾಮಣಿ 25,ಚಿಕ್ಕಬಳ್ಳಾಪುರ 21, ಬಾಗೇಪಲ್ಲಿ 29, ಗುಡಿಬಂಡೆ 12, ಗೌರಿಬಿದನೂರು 33ಹಾಗೂ ಶಿಡ್ಲಘಟ್ಟದಲ್ಲಿ 23 ಪ್ರಕರಣಗಳುಕಂಡು ಬಂದಿದ್ದು, ಎಲ್ಲರಿಗೂ ಎಆರ್‌ಟಿ ಮೂಲಕ ಚಿಕಿತ್ಸೆ ಕೊಡಲಾಗುತ್ತಿದೆ. ಕಳೆದ ವರ್ಷ 248 ಪ್ರಕರಣ: ಜಿಲ್ಲೆಯಲ್ಲಿಕಳೆದ ವರ್ಷ 2018ರ ಎಪ್ರೀಲ್‌ನಿಂದ 2019ರ ಮಾರ್ಚ್‌ವರೆಗೂ ಒಟ್ಟು 21,000 ಗುರಿ ಪೈಕಿ 22,040 ಮಂದಿಗೆ ಹೆಚ್‌ಐವಿ ಪರೀಕ್ಷೆ ನಡೆಸಿದ್ದು ಒಟ್ಟು 248 ಪ್ರಕರಣಗಳು ವರದಿಯಾಗಿವೆ.

ಆ ಪೈಕಿ ಚಿಕ್ಕಬಳ್ಳಾಪುರದಲ್ಲಿ 29 ಪುರುಷರು, 20 ಮಹಿಳೆಯರು, 2 ಮಕ್ಕಳು ಸೇರಿ ಒಟ್ಟು 51, ಚಿಂತಾಮಣಿಯಲ್ಲಿ ಒಟ್ಟು 29 ಪುರುಷರು, 27 ಮಹಿಳೆಯರು ಸೇರಿ ಒಟ್ಟು 56, ಬಾಗೇಪಲ್ಲಿ ತಾಲೂಕಿನಲ್ಲಿ 18 ಪುರುಷರು, 23 ಮಹಿಳೆಯರು, 1 ಮಗುಸೇರಿ ಒಟ್ಟು 43. ಗೌರಿಬಿದನೂರು ತಾಲೂಕಿನಲ್ಲಿ 28 ಪುರುಷರು, 25 ಮಹಿಳೆಯರು ಸೇರಿ ಒಟ್ಟು 53, ಗುಡಿಬಂಡೆ ತಾಲೂಕಿನಲ್ಲಿ ಪುರುಷರು,10 ಮಹಿಳೆಯರು ಸೇರಿ ಒಟ್ಟು 19 ಹಾಗೂ ಶಿಡ್ಲಘಟ್ಟ ತಾಲೂಕಿನಲ್ಲಿ 15 ಪುರುಷರು, 10ಮಹಿಳೆಯರು 1 ಮಗು ಸೇರಿ ಒಟ್ಟು 26 ಮಂದಿಗೆ ಹೆಚ್‌ಐವಿ ಸೋಂಕು ಇರುವುದು ದೃಢಪಟ್ಟಿದೆ.

ಬಹುತೇಕರಿಗೆ ಚಿಕಿತ್ಸೆ ಮುಂದುವರಿಸಿದ್ದು, ಆರೋಗ್ಯ ಇಲಾಖೆ ಸೋಂಕಿತರಿಗೆ ವಿವಿಧ ಕಾರ್ಯಕ್ರಮಗಳ ಮೂಲಕ ವೈದ್ಯಕೀಯಚಿಕಿತ್ಸೆ ಜೊತೆಗೆ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡುತ್ತಿದೆ.

Advertisement

ಗೌರಿಬಿದನೂರು,  ಚಿಂತಾಮಣಿ ಟಾಪ್‌: ಜಿಲ್ಲೆಯಲ್ಲಿ ಬೆಳಕಿಗೆ ಬಂದಿರುವ ಹಾಗೂ ಹಾಲಿ ಚಿಕಿತ್ಸೆ ಪಡೆಯುತ್ತಿರುವ ಹೆಚ್‌ಐವಿ ಸೋಂಕಿತರ ಸಂಖ್ಯೆಯಲ್ಲಿ ಜಿಲ್ಲೆಯ ಆಂಧ್ರದ ಗಡಿಗೆ ಹೊಂದಿಕೊಂಡಿರುವ ಗೌರಿಬಿದನೂರು ಹಾಗೂ ಚಿಂತಾಮಣಿ ತಾಲೂಕುಗ ಳಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ. ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ಒಟ್ಟು 878 ಮಂದಿ ರೋಗಿಗಳಿದ್ದರೆ, ಈ ವರ್ಷ ಹೊಸದಾಗಿ 25 ಪ್ರಕರಣಗಳು ಬೆಳಕಿಗೆ ಬಂದಿವೆ. ಆದೇ ರೀತಿ ಗೌರಿಬಿದನೂರಿಲ್ಲಿ ಒಟ್ಟು 754 ಮಂದಿ ರೋಗಿಗಳು ಈಗಾಗಲೇ ಎಆರ್‌ಟಿ ಮೂಲಕ ಚಿಕಿತ್ಸೆ ಪಡೆಯುತ್ತಿದ್ದು, ಈ ವರ್ಷ ಹೊಸದಾಗಿ 33 ಮಂದಿಯಲ್ಲಿ ಹೆಚ್‌ಐವಿ ಇರುವುದುದೃಢಪಟ್ಟಿದೆ.

 

-ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next