Advertisement

ಸಂವಿಧಾನದ ಸಮರ್ಪಕ ಅನುಷ್ಠಾನ ಅಗತ್ಯ: ಎಸ್‌ಪಿ 

03:43 PM Apr 17, 2017 | Team Udayavani |

ಮಡಿಕೇರಿ: ಸರ್ವರಿಗೂ ಸಮಪಾಲು, ಸಮ ಬಾಳು ಎನ್ನುವ ತಣ್ತೀದಡಿ ಡಾ| ಬಿ.ಆರ್‌. ಅಂಬೇಡ್ಕರ್‌ ಅವರು ಸಂವಿಧಾನವನ್ನು ರಚಿಸುವ ಮೂಲಕ ದುರ್ಬಲರ ಏಳಿಗೆಗೆ ಕಾರಣಕರ್ತರಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ಡಾ| ಬಿ.ಆರ್‌. ಅಂಬೇಡ್ಕರ್‌ ಅವರ 126ನೇ ಜನ್ಮದಿನದ ಪ್ರಯುಕ್ತ ಪ್ರಬುದ್ಧ ನೌಕರರ ಒಕ್ಕೂಟದ ಕೊಡಗು ಜಿಲ್ಲಾ ಘಟಕದ ವತಿಯಿಂದ ನಗರದ ಮೈತ್ರಿ ಭವನದಲ್ಲಿ ನಡೆದ ವಿಶ್ವ ಜ್ಞಾನ ದಿನವನ್ನು ಉದ್ಘಾಟಿಸಿ ಪೊಲೀಸ್‌ ವರಿಷ್ಠಾಧಿಕಾರಿಗಳು ಮಾತನಾಡಿದರು. ತುಳಿತಕ್ಕೆ ಒಳಗಾದವರ‌ ಏಳಿಗೆ ಶಿಕ್ಷಣದ ಮೂಲಕವೇ ಸಾಧ್ಯವೆಂದು ಮನಗಂಡಿದ್ದ ಡಾ| ಬಿ.ಆರ್‌. ಅಂಬೇಡ್ಕರ್‌ ಅವರು, ಸಮಾನತೆಯನ್ನು ಸಾರುವ ಸಂವಿಧಾನವನ್ನು ರಚಿಸಿ ಮಾದರಿಯಾಗಿದ್ದಾರೆ. ಸಮಪಾಲು ಮತ್ತು ಸಮಬಾಳು ಎಂಬ ಪರಿಕಲ್ಪನೆಯಡಿ ರಚನೆಯಾದ ಸಂವಿಧಾನವನ್ನು ಡಾ| ಅಂಬೇಡ್ಕರ್‌ ಅವರ ಚಿಂತನೆಯಂತೆ ಜಾರಿಗೆ ತರುವುದು ಇಂದಿನ ಅಗತ್ಯಗಳಲ್ಲಿ ಒಂದಾಗಿದೆಯೆಂದು ಅವರು ಅಭಿಪ್ರಾಯಪಟ್ಟರು.

ಸಂವಿಧಾನ ಸಮರ್ಪಕವಾಗಿ ಜಾರಿಯಾಗುವ ಮೂಲಕ ಅಂಬೇಡ್ಕರ್‌ ಅವರ ನಿರೀಕ್ಷೆಗಳು ನಿಜವಾಗಬೇಕೆಂದು ಎಸ್‌ಪಿ ರಾಜೇಂದ್ರಪ್ರಸಾದ್‌ ಕರೆ ನೀಡಿದರು. ಡಾ| ಅಂಬೇಡ್ಕರ್‌ ವಿಚಾರವಾದಿಗಳು ಹಾಗೂ ಉಪನ್ಯಾಸಕ ರಾದ ಜಯಕುಮಾರ್‌ ಅವರು ಭಾರತದ ಮೂಲನಿವಾಸಿಗಳ ಇತಿಹಾಸ ಹಾಗೂ ಜಾತಿಯ ಹುಟ್ಟು ಎಂಬ ವಿಷಯದ ಕುರಿತು ಮಾತನಾಡಿ, ವಿಶ್ವಸಂಸ್ಥೆಯ ನೇತೃತ್ವದಲ್ಲಿ ಡಾ| ಬಿ.ಆರ್‌. ಅಂಬೇಡ್ಕರ್‌ ಅವರ ಜನ್ಮದಿನವನ್ನು ವಿಶ್ವದೆಲ್ಲೆಡೆ ಜ್ಞಾನ ದಿನವನ್ನಾಗಿ ಆಚರಿಸುತ್ತಿರುವುದು ಶ್ಲಾಘನೀಯವೆಂದರು. 

ಜ್ಞಾನ ಎಂಬುವುದು ಬೆಲೆ ಕಟ್ಟಲಾಗದ ಅಂಶವಾಗಿದ್ದು, ಅಂಬೇಡ್ಕರ್‌ ಅವರು ಜ್ಞಾನದ ಪ್ರತೀಕವಾಗಿದ್ದಾರೆ. ಅಂಬೇಡ್ಕರ್‌ ಅವರ ಬಳಿ ಜ್ಞಾನವಿದ್ದ ಕಾರಣದಿಂದಲೆ ಸವರ್ಣೀಯರು ಅವರನ್ನು ಕಂಡು ಭಯಪಡುತ್ತಿದ್ದರು. ಓದಿನ ಮೂಲಕ ಜ್ಞಾನವನ್ನು ಸಂಪಾದಿಸಬೇಕು, ದಲಿತರು ಹಾಗೂ ದುರ್ಬಲರು ತಮ್ಮ ತಮ್ಮ ಮಕ್ಕಳನ್ನು ಜ್ಞಾನ ವಂತರನ್ನಾಗಿ ಮಾಡಿದರೆ ಡಾ| ಅಂಬೇಡ್ಕರ್‌ ಅವರ ಋಣವನ್ನು ತೀರಿಸಿದಂತಾಗುತ್ತದೆ ಎಂದು ಜಯಕುಮಾರ್‌ ಅಭಿಪ್ರಾಯಪಟ್ಟರು.

ದೇಶದಲ್ಲಿ ವೇದಗಳ ಸೃಷ್ಟಿಗೂ ಮೊದಲು ಸಿಂಧು ನಾಗರಿಕತೆ ಸೃಷ್ಟಿಯಾಗಿತ್ತು ಎಂದು ತಿಳಿಸಿದ ಅವರು, ಮೂಲನಿವಾಸಿಗಳಲ್ಲಿ ಒಗ್ಗಟ್ಟಿನ ಕೊರತೆ ಕಾಡಿದ ಕಾರಣದಿಂದ ವಲಸೆ ಬಂದ ಆರ್ಯರು ಉತ್ತರ ಭಾರತದ ಕಡೆಗಳಲ್ಲಿ ಗಟ್ಟಿ ಯಾಗಿ ನೆಲೆಯೂರಿದರೆಂದು ವಿವರಿಸಿದರು. 

Advertisement

ಬ್ರಿಟಿಷರು ದೇಶವನ್ನು ಒಡೆದು ಆಳಿದರು ಎನ್ನುವ ವಿಚಾರ ಸುಳ್ಳಾಗಿದ್ದು, ಆರ್ಯರು ಒಡೆದು ಆಳುವ ನೀತಿಯನ್ನು ಅನುಸರಿಸುವ ಮೂಲಕ ಫ‌ಲವತ್ತಾದ ಭೂಮಿಯನ್ನು ತಮ್ಮದಾಗಿಸಿಕೊಂಡರೆಂದು ಆರೋಪಿಸಿದರು. 

ದೇಶದ ನೈಜ ಮೂಲ ನಿವಾಸಿಗಳು ಒಗ್ಗಟ್ಟನ್ನು ಪ್ರದರ್ಶಿಸುವುದರಲ್ಲಿ ವಿಫ‌ಲರಾಗಿರುವುದರಿಂದಲೆ ಉನ್ನತೀ ಕರಣ ಹೊಂದಲು ಸಾಧ್ಯವಾಗಲಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಜಿಲ್ಲಾ ಆಸ್ಪತ್ರೆಯ ಉಪ ವೈದ್ಯಾಧಿಕಾರಿಗಳಾದ ಡಾ| ಎಚ್‌.ವಿ. ದೇವದಾಸ್‌ ಅಧ್ಯಕ್ಷೀಯ ಭಾಷಣ ಮಾಡಿದರು.
ವಿಶೇಷ ಆಹ್ವಾನಿತರಾದ ತುಮಕೂರಿನ ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಬಾಬಾಸಾಹೇಬ್‌ ಜಿನರಾಳ್ಕರ್‌ “ಮನುವಾದ ಮತ್ತು ಅಂಬೇಡ್ಕರ್‌ ವಾದ’ ವಿಷ‌ಯದ ಕುರಿತು ವಿಚಾರ ಮಂಡಿಸಿದರು. 

ಮೈಸೂರು ವಿಶ್ವ ವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ| ವಿ. ಶಣ್ಮುಗಂ ಅವರು “ಪ್ರಸಕ್ತ ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಡಾ| ಬಿ.ಆರ್‌ ಅಂಬೇಡ್ಕರ್‌ರವರ ತತ್ವಗಳ ಪ್ರಸ್ತುತತೆ’, ಬಹುಜನ್‌ ಇಂಟಲೆಕುcವಲ್‌ನ ಪ್ರಮುಖರಾದ ಡಾ| ಸಯ್ಯದ್‌ ರೋಷನ್‌ ಮುಲ್ಲಾ, “ಅಸ್ಪೃಶ್ಯತೆ ಮತ್ತು ಜಾತಿ ನಿರ್ಮೂಲನೆಯಲ್ಲಿ  ಅಲ್ಪಸಂಖ್ಯಾಕ ಮತ್ತು ಹಿಂದುಳಿದ ವರ್ಗಗಳ ಪಾತ್ರ’ ವಿಷಯದ ಕುರಿತು ಮಾತಾನಾಡಿದರು. 

ನಗರದ ಫೀಲ್ಡ್‌ ಮಾರ್ಷಲ್‌ ಕೆ.ಎಂ. ಕಾರ್ಯಪ್ಪ ವೃತ್ತ ದಲ್ಲಿರುವ ಡಾ| ಅಂಬೇಡ್ಕರ್‌ ಭವನದಿಂದ ಆರಂಭಗೊಂಡ ಬೃಹತ್‌ ಬೈಕ್‌ ರ್ಯಾಲಿ ಮತ್ತು ಮೆರವಣಿಗೆಯನ್ನು ಜಿಲ್ಲಾ ಪಂಚಾಯತ್‌ನ ಮುಖ್ಯ ಯೋಜನಾಧಿಕಾರಿ ಸತ್ಯನ್‌ ಹಾಗೂ ಪ್ರಬುದ್ಧ ನೌಕರರ ಒಕ್ಕೂಟದ ಸಲಹೆಗಾರರಾದ ಎಚ್‌.ಎಲ್‌. ದಿವಾಕರ್‌ ಉದ್ಘಾಟಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next