Advertisement

ಅಯ್ಯಪ್ಪ ದೇಗುಲ ಹೆಸರು ಬದಲು ಇಲ್ಲವೆಂದ ಟಿಡಿಬಿ

06:00 AM Jan 04, 2018 | Harsha Rao |

ತಿರುವನಂತಪುರ: ಶಬರಿಮಲೆ ಅಯ್ಯಪ್ಪ ದೇಗುಲದ ಹೆಸರನ್ನು ಹಾಗೆಯೇ ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ. ಯುಡಿಎಫ್ ನೇತೃತ್ವದ ಮೈತ್ರಿಕೂಟ ಸರಕಾರ ಇದ್ದಾಗ ದೇಗುಲದ ಹೆಸರನ್ನು “ಶಬರಿಮಲೆ ಶ್ರೀ ಧರ್ಮಶಾಸ್ತಾ ದೇಗುಲ’ ಎಂದು ಬದಲಿಸಲು ಪ್ರಸ್ತಾಪ ಸಲ್ಲಿಸಲಾಗಿತ್ತು. ಆದರೆ, ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಈ ಪ್ರಸ್ತಾಪವನ್ನು ತಿರಸ್ಕರಿಸಿದೆ ಎಂದು ಮಂಡಳಿ ಅಧ್ಯಕ್ಷ ಎ.ಪದ್ಮಕುಮಾರ್‌ ತಿಳಿಸಿದ್ದಾರೆ. ಹಿಂದಿನ ಆಡಳಿತ ಮಂಡಳಿ ಯಾವುದೇ ಯೋಚನೆ ಮಾಡದೆ ಕೈಗೊಂಡಿದೆ ಎಂದು ಟೀಕಿಸಿದರು. ದೇಗುಲಕ್ಕೆ ಮಹಿಳೆಯರ ಪ್ರವೇಶ ನಿಷೇಧದ ಬಗ್ಗೆ ಉತ್ತರಿಸಿದ ಅವರು “ಸದ್ಯ 15-50ರ ವಯೋಮಿತಿಯ ಮಹಿಳೆಯರಿಗೆ ನಿಷೇಧವಿದೆ. ಅದು ಮುಂದುವರಿಯುತ್ತದೆ ಎಂದು ಹೇಳಿದ್ದಾರೆ. “ಧರ್ಮ ಶಾಸ್ತಾ’ ಹೆಸರಿನ ದೇಗುಲಗಳು ಕೇರಳದಲ್ಲಿವೆ. ಅವುಗಳಿಗೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ಇದೆ. ಹೆಸರು ಬದಲಾಯಿಸುವು ದರಿಂದ ಸ್ತ್ರೀಯರ ಪ್ರವೇಶಕ್ಕೂ ಅವಕಾಶ ಸಿಗಲಿದೆ ಎಂದು ವಿಶ್ಲೇಷಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next