Advertisement

ದಂತ ವೈದ್ಯ ನಿಗೂಢ ಸಾವಿನ ಪ್ರಕರಣ: ಹೃದಯಘಾತದಿಂದ ಸಾವು

12:34 AM Jul 24, 2019 | Team Udayavani |

ಉಳ್ಳಾಲ: ಖಾಸಗಿ ದಂತ ವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ವೈದ್ಯರ ಪ್ರಾಥಮಿಕ ವರದಿಯಲ್ಲಿ ಹೃದಯಾಘಾತವೆಂದು ತಿಳಿಸಿದ್ದಾರೆ.

Advertisement

ಶಿರಸಿ ಮೂಲದ ಓರಲ್ ರೇಡಿಯಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕ ವಾಘೇಶ್ ಕುಮಾರ್ (35) ದೇರಳಕಟ್ಟೆಯ ಕಾಲೇಜು ಕ್ವಾಟ್ರರ್ಸ್‍ನಲ್ಲಿ ಸಾವನ್ನಪ್ಪಿದ್ದರು. ಎರಡು ದಿನಗಳ ಬಳಿಕ ಮನೆಮಂದಿ ಸಹದ್ಯೋಗಿ ಜತೆಗೆ ಪುತ್ರ ಮೊಬೈಲ್ ಸ್ವೀಕರಿಸುತ್ತಿಲ್ಲ ಅನ್ನುವ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಅವರು ಬಂದು ರೂಮಿನಲ್ಲಿ ಪರಿಶೀಲಿಸಿದಾಗ ವಾಘೇಶ್ ಮೃತದೇಹ ಪತ್ತೆಯಾಗಿತ್ತು. ಬಾಯಲ್ಲಿ ನೊರೆ ಕಾರಿದ ಸ್ಥಿತಿಯಲ್ಲಿ ಬೆಡ್ ನಲ್ಲಿ ಮಲಗಿದ ಸ್ಥಿತಿಯಲ್ಲೇ ವಾಘೇಶ್ ಮೃತದೇಹ ಪತ್ತೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next