Advertisement

Republic Day: ನಿರ್ಗಮನ ಪಥಸಂಚಲನದಲ್ಲಿ ಭಾರತದ ಸರ್ವರಾಗಗಳ ಸಪ್ಪಳ

09:13 PM Jan 28, 2024 | Team Udayavani |

ನವದೆಹಲಿ: ಸೋಮವಾರ ರಾಷ್ಟ್ರರಾಜಧಾನಿ ವಿಜಯ ಚೌಕ್‌ನಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ನಿರ್ಗಮನ ಪಥಸಂಚಲನದಲ್ಲಿ ರಕ್ಷಣಾ ಪಡೆಗಳು ನುಡಿಸಲಿರುವ ಬ್ಯಾಂಡ್‌ಗಳಲ್ಲಿ ಭಾರತದ ಸರ್ವ ರಾಗಗಳು ಮೇಳೈಸಲಿದ್ದು, ರೈಸಿನಾ ಹಿಲ್ಸ್‌ ಈ ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾಗಲಿವೆ.

Advertisement

ಈ ಕುರಿತಂತೆ ರಕ್ಷಣಾ ಸಚಿವಾಲಯ ಪ್ರಕಟಣೆ ಹೊರಡಿಸಿದೆ. ಅದರಲ್ಲಿ ಭಾರತೀಯ ಸೇನಾಪಡೆ, ನೌಕಾಪಡೆ, ವಾಯುಪಡೆ ಹಾಗೂ ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆಗಳು ಹೆಜ್ಜೆ ಸಪ್ಪಳದ ಮೂಲಕ 31 ಆಕರ್ಷಕ ಭಾರತೀಯ ರಾಗಗಳನ್ನು ನುಡಿಸಲಿವೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್‌ ಧನ್‌ಕರ್‌, ಪ್ರಧಾನಿ ಮೋದಿ, ರಕ್ಷಣಾ ಸಚಿವ ರಾಜನಾಥ ಸಿಂಗ್‌ ಸೇರಿದಂತೆ ಹಲವರು ಉಪಸ್ಥಿತರಿರಲಿದ್ದಾರೆ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next