Advertisement
ಜೆ.ಪಿ.ನಗರದ ಟ್ರೀ ಪಾರ್ಕ್ನಲ್ಲಿ ಅದಮ್ಯ ಚೇತನ ಸಂಸ್ಥೆ ಹಮ್ಮಿಕೊಂಡಿದ್ದ 124ನೇ ಹಸಿರು ಭಾನುವಾರ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ವೇಳೆ ಇತ್ತೀಚೆಗೆ ನಿಧನರಾದ ಶಾಸಕ ಬಿ.ಎನ್.ವಿಜಯಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಅವರು ಮಾತನಾಡಿದರು.
Related Articles
Advertisement
ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್ ಮಾತನಾಡಿ, ಮೆಟ್ರೋದಲ್ಲಿ ಜಯನಗರದತ್ತ ಪ್ರಯಾಣಿಸಿದರೆ ಕಾಡಿನೊಳಗೆ ತೆರಳುತ್ತಿದ್ದೇವೆ ಎಂಬ ಅನುಭವ ಆಗುತ್ತದೆ. ಇದಕ್ಕೆ ಶಾಸಕರಾಗಿದ್ದ ವೇಳೆ ವಿಜಯಕುಮಾರ್ ಅವರು ಪರಿಸರಕ್ಕೆ ನೀಡಿದ ಕೊಡುಗೆಗಳೇ ಕಾರಣ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯರಾದ ಲಕ್ಷಿ ನಟರಾಜ್, ಗೋವಿಂದ ನಾಯ್ಡು, ಬಿಜೆಪಿ ಮುಖಂಡರಾದ ವೇಣುಗೋಪಾಲ ರೆಡ್ಡಿ, ಮಂಜುನಾಥ್ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.
ಟ್ರೀ ಪಾರ್ಕ್ನಲ್ಲಿ ಹಸಿರು ಭಾನುವಾರ: ಅದಮ್ಯ ಚೇತನ ಸಂಸ್ಥೆಯ 124ನೇ ಹಸಿರು ಭಾನುವಾರದ ಅಂಗವಾಗಿ ಜೆ.ಪಿ.ನಗರದ ಟ್ರೀ ಪಾರ್ಕ್ನಲ್ಲಿ ಹಲಸು, ದಾಸವಾಳ, ನಿಂಬೆ, ಆಲ, ಹೆಬ್ಬಲಸು ಸೇರಿದಂತೆ ವಿಭಿನ್ನ ಜಾತಿಯ ಸುಮಾರು 60 ಗಿಡಗಳನ್ನು ನಡೆಲಾಯಿತು. ಕೇಂದ್ರ ಸಚಿವ ಅನಂತಕುಮಾರ್ ಮತ್ತು ತೇಜಸ್ವಿನಿ ಅನಂತಕುಮಾರ್ ಸಸಿನೆಟ್ಟು, ನೀರೆರೆದರು. ಇದೇ ವೇಳೆ ಪರಿಸರದ ಸಂರಕ್ಷಣೆ ಬಗ್ಗೆ ತಿಳಿ ಹೇಳಿದ ತೇಜಸ್ವಿನಿ ಅನಂತಕುಮಾರ್, ಪ್ಲಾಸ್ಟಿಕ್ ಬಳಕೆ ಮಾಡದಂತೆ ಮನವಿ ಮಾಡಿದರು.