Advertisement

ಪವಾಡ ಅಸಾಧ್ಯ: ಸುಪ್ರೀಂಗೆ ಕೇಂದ್ರ

08:40 AM Aug 10, 2017 | Team Udayavani |

ಹೊಸದಿಲ್ಲಿ: “ನ್ಯಾಯಮೂರ್ತಿಗಳು ಸರಕಾರ ನಡೆಸಬಾರದು ಮತ್ತು ಪವಾಡಗಳನ್ನು ಮಾಡುವಂತೆ ಸೂಚಿಸಬಾರದು.’
ಹೀಗೆಂದು ಸುಪ್ರೀಂ ಕೋರ್ಟ್‌ಗೆ ಹೇಳಿದ್ದು ಬೇರಾರೂ ಅಲ್ಲ, ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್‌. ಬರಪೀಡಿತ ರಾಜ್ಯಗಳಲ್ಲಿ ಪರಿಹಾರ ಕ್ರಮಕ್ಕೆ ಆಗ್ರಹಿಸಿ ಸ್ವರಾಜ್‌ ಅಭಿಯಾನ್‌ ಎನ್‌ಜಿಒ ಸಲ್ಲಿಸಿದ್ದ ಹೊಸ ಅರ್ಜಿಯನ್ನು ವಿರೋಧಿಸುತ್ತಾ ವೇಣುಗೋಪಾಲ್‌ ಈ ಮಾತುಗಳನ್ನಾಡಿದ್ದಾರೆ.

Advertisement

ಎಲ್ಲ ರಾಜ್ಯಗಳಲ್ಲೂ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ವಯ ರಾಜ್ಯ ಆಹಾರ ಆಯೋಗಗಳನ್ನು ರಚಿಸುವಂತೆ ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್‌ನ ನ್ಯಾಯಪೀಠ ಸೂಚಿಸಿತು. ಈ ವೇಳೆ, ನ್ಯಾ| ಪ್ರಶಾಂತ್‌ ಭೂಷಣ್‌ ಅವರು ಪ್ರತಿನಿಧಿಸುತ್ತಿರುವ ಎನ್‌ಜಿಒ ವಿರುದ್ಧ ಹರಿಹಾಯ್ದ ವೇಣುಗೋಪಾಲ್‌, “ಪ್ರತಿ ಬಾರಿ ಹೊಸ ಅರ್ಜಿ ಸಲ್ಲಿಸಲಾಗುತ್ತಿದೆ. ನಾವು ಕೈಗೊಂಡ ಕ್ರಮಗಳನ್ನು ವಿವರಿಸಿ ಅಫಿದವಿತ್‌ ಸಲ್ಲಿಸಿದ್ದೇವೆ. ಎಲ್ಲದಕ್ಕೂ ಮಿತಿಯಿದೆ. ನ್ಯಾಯಮೂರ್ತಿಗಳೇ ಸರಕಾರ ನಡೆಸುವಂತಾಗಬಾರದು. ನಾವೇನೂ ಪವಾಡ ಮಾಡಲು ಆಗುವುದಿಲ್ಲ’ ಎಂದರು.

ಇದೇ ವೇಳೆ, ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಈಗಾಗಲೇ ಆಹಾರ ಆಯೋಗ ರಚಿಸಿರುವುದಾಗಿ ನ್ಯಾಯಾಲಯಕ್ಕೆ ಮಾಹಿತಿ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next